`ಆವರ್ತ' ತಾತ್ವಿಕ ಚಿಂತನೆಯುಳ್ಳ ಬೃಹತ್ ಕಾದಂಬರಿ. ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳ ಸುಳಿಯಲ್ಲಿ ಸಿಕ್ಕಿಕೊಂಡು ತೊಳಲಾಡುವ, ಬಿಡಿಸಿಕೊಳ್ಳಲು ಯತ್ನಿಸುವ, ಕಡೆಗೆ ಒಳಗಿದ್ದೂ ಇರದ ಹದವನ್ನು ಕಂಡುಕೊಳ್ಳುವ ವ್ಯಕ್ತಿಯೊಬ್ಬನ ಬದುಕಿನ ಚಿತ್ರಣ ಈ ಕಾದಂಬರಿಯ ಕಥಾ ವಸ್ತು. ಪುರಾಣ ಮತ್ತು ವರ್ತಮಾನವನ್ನು ಒಂದು ಕೂಡುಬಿಂದುವಿನಲ್ಲಿ ನಿಲ್ಲಿಸಿ ನೋಡಿದ ಈ ಕಾದಂಬರಿಯ ತಂತ್ರ ಕನ್ನಡಕ್ಕೆ ಹೊಸಬಗೆಯದು ಎನ್ನಬಹುದು. 2014 ರಲ್ಲಿ ಪ್ರಥಮ ಮುದ್ರಣ ಕಂಡ ಈ ಕೃತಿ ಅದೇ ವರ್ಷ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ರಂಗಭೂಮಿ ಹಿನ್ನಲೆಯುಳ್ಳ ಬರಹಗಾರ್ತಿ ಆಶಾ ರಘು ಅವರು ಜನಿಸಿದ್ದು 1979 ಜೂನ್ 18ರಂದು. ಬೆಂಗಳೂರಿನವರೇ ಆದ ಇವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಉಪನ್ಯಾಸಕರಾಗಿ ಕೆಲಕಾಲ ಕಾರ್ಯ ನಿರ್ವಹಿಸಿರುವ ಇವರು ಪ್ರಸ್ತುತ ಸಂಪೂರ್ಣವಾಗಿ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಆವರ್ತ, ಬೊಗಸೆಯಲ್ಲಿ ಕಥೆಗಳು, ಅಪರೂಪದ ಪುರಾಣ ಕಥೆಗಳು, ಚೂಡಾಮಣಿ ಹಾಗೂ ಬಂಗಾರದ ಪಂಜರ ಇವರ ಪ್ರಮುಖ ಕೃತಿಗಳು. ಇವರ ಆವರ್ತ ಕೃತಿಗೆ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ...
READ MORE