ಕನ್ನಡಿಯಲ್ಲಿ ಕಂಡಾತ

Author : ಶಿವರಾಮ ಕಾರಂತ

Pages 320

₹ 160.00




Year of Publication: 2010
Published by: ಸಪ್ನ ಬುಕ್ ಹೌಸ್
Address: 3ನೇ ಮುಖ್ಯ ರಸ್ತೆ. ಗಾಂಧಿನಗರ, ಬೆಂಗಳೂರು, 560009
Phone: 080 4011 4455

Synopsys

ಡಾ. ಕೆ. ಶಿವರಾಮ ಕಾರಂತರ ಕಾದಂಬರಿ-ಕನ್ನಡಿಯಲ್ಲಿ ಕಂಡಾತ. ಪರಮೇಶ್ವರನು ಸಂಸಾರದಲ್ಲಿ ಅಣ್ಣಂದಿರು, ತಾಯಿ, ಹೆಂಡತಿ, ಮಕ್ಕಳು ಎಲ್ಲರೊಡನೆಯೂ ವಿರಸ ಕಟ್ಟಿಕೊಂಡು, ತಾನು ನಡೆದದ್ದೇ ದಾರಿ ಎಂಬಂತೆ ಅನೀತಿಯ ಮಾರ್ಗ ಹಿಡಿದಾತ. ತನ್ನ ಪ್ರೇಯಸಿಯ ಮೇಲೆ ಇನ್ನೊಬ್ಬ ಗಟ್ಟಿಕುಳ ಕಣ್ಣಿಟ್ಟಾಗ ಉಂಟಾದ ದ್ವೇಷ - ಜಗಳಗಳಿಂದಾಗಿ ಊರು ಬಿಟ್ಟು ಅಲೆಯುತ್ತಾನೆ. ವಿವಿಧ ತೆರನಾದ ಜನಗಳು ದಾರಿಯುದ್ದಕ್ಕೂ ಇದಿರಾಗುತ್ತಾರೆ. ಕುರುಡ ಹಿಡಿದದ್ದೇ ದಾರಿ ಎಂಬ ತೆರದಲ್ಲಿ ಅಲೆಮಾರಿತನವನ್ನು ರೂಢಿಸಿಕೊಳ್ಳುತ್ತಾನೆ. ಹೊಟ್ಟೆಯ ಹಸಿವನ್ನು ನೀಗಿಸಿಕೊಳ್ಳಲು ಭಿಕ್ಷಾಪಾತ್ರೆಯನ್ನೂ ಹಿಡಿಯಬೇಕಾಗುತ್ತದೆ ; ಭೈರಾಗಿಯಂತೆಯೂ ನಟಿಸುವಂತಾಗುತ್ತದೆ. ಹೀಗೆ ಗೊತ್ತುಗುರಿಯಿಲ್ಲದೆ ಅಲೆದು, ದಣಿದು, ವಿವಿಧ ತೆರನ ಅನುಭವ, ಕಹಿ, ಕಷ್ಟಕಾರ್ಪಣ್ಯ ಗಳನೆಲ್ಲ ಕಂಡ ಪರಮೇಶ್ವರನ ಒಣ ಹೆಮ್ಮೆ ಮತ್ತು ಅಹಂಕಾರ ಅಲೆದಾಟದ ಮೂರು ವರ್ಷಗಳ ಬದುಕಿನಲ್ಲಿ ಸಂಪೂರ್ಣ ನುಚ್ಚುನೂರಾಗಿ, ತನ್ನ ತಪ್ಪಿನ ಅರಿವಾಗುತ್ತದೆ. ಆದರೂ, ಊರಿಗೆ ಹಿಂದಿರುಗಿ, ಮಡದಿ ಮಕ್ಕಳನ್ನು ಸೇರಿಕೊಳ್ಳಲು ಧೈರ್ಯ ಸಾಲದಾಗುತ್ತದೆ. ಮಲೆಮನೆಯ ಪ್ರತಿಷ್ಠಿತ ವ್ಯಕ್ತಿ ಮಂಜಪ್ಪನವರ ಕರುಣೆ, ಮಾನವೀಯತೆ, ಉಪಚಾರಗಳಿಂದ ಅವರ ಬಳಿಯಲ್ಲಿದ್ದು, ಮಾಸ್ತರಿಕೆ ವೃತ್ತಿ ಮಾಡಿಕೊಂಡಿರುತ್ತಾನೆ. ಮೊದಲೆಲ್ಲ ಪರರ ಮೇಲೆ ಅವನು ವಿನಾಕಾರಣ ಉರಿದು ಬೀಳುತ್ತಿದ್ದ. ಈಗ ಮಾತ್ರ ಅವನಿಗೆ ನೀತಿಯ ವಿಷಯದಲ್ಲೇ ಆಗಲಿ, ಇನ್ನೊಂದು ವಿಷಯದಲ್ಲೇ ಆಗಲಿ, ಪೂರ್ಣತೆ ತನ್ನ ಎಟುಕಿನಿಂದ ಬಲು ದೂರ ಉಳಿದಿದೆ ಎಂದು ಅನಿಸುತ್ತದೆ. ಮೊದಲಿಗಿಂತಲೂ ತಾನು ಎಷ್ಟೇ ಸುಧಾರಿಸಿದರೂ, ಹಳೆಯ ದೇಹ, ಹಳೆಯ ಮನಸುಗಳನ್ನು ಹೊತ್ತು ನಲಿಯುತ್ತಿರುವ ತನ್ನ ರೂಪವನ್ನು ಕನ್ನಡಿಯಲ್ಲಿ ಕಂಡಾಗ ತೀರ ಕುರೂಪವಾಗಿ ಕಾಣಸದೇ ಹೋದರೂ, ಸುರೂಪವಾಗಿಲ್ಲವಲ್ಲ ಎಂಬ ಮಿತಿ ಕಾಣಿಸುತ್ತದೆ. ಎಷ್ಟೇ ಪಶ್ಚಾತ್ತಾಪದ ಬದುಕು ಸಾಗಿಸಿದರೂ ಹಳೆಯ ಕರ್ಮಗಳು ಮಾತ್ರ ನೆನಪಾಗಿಯೇ ಉಳಿಯುತ್ತವೆ ಎಂಬುದು ಇಲ್ಲಿಯ ಸಂದೇಶ. 

ಬೆಂಗಳೂರಿನ ರಾಜಲಕ್ಷ್ಮಿ ಪ್ರಕಾಶನವು 1976ರಲ್ಲಿ (ಪುಟ: 286) ಈ ಕಾದಂಬರಿಯನ್ನು ಮೊದಲು ಪ್ರಕಟಿಸಿತ್ತು. 

About the Author

ಶಿವರಾಮ ಕಾರಂತ
(10 October 1902 - 09 December 1997)

ತಮ್ಮ ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಕೋಟ ಶಿವರಾಮ ಕಾರಂತರ ಕೊಡುಗೆ ಅನನ್ಯ- ಅಭೂತಪೂರ್ವ. 1902ರ ಅಕ್ಟೋಬರ್ 10ರಂದು ಜನಿಸಿದರು. ತಂದೆ ಶೇಷ ಕಾರಂತ ತಾಯಿ ಲಕ್ಷ್ಮಮ್ಮ. ಕುಂದಾಪುರದಲ್ಲಿ ಪ್ರೌಢಶಾಲಾ ವ್ಯಾಸಂಗವನ್ನು ಮುಗಿಸಿ ಮಂಗಳೂರಿನ ಸರ್ಕಾರಿ ಕಾಲೇಜನ್ನು ಸೇರಿದಾಗಲೆ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಧುಮುಕಿದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಪ್ರವೇಶಿಸದ ಕ್ಷೇತ್ರವಿಲ್ಲ. ಅವರು ಸರ್ಕಾರದಲ್ಲಿ ಅಥವಾ ಇತರರ ಆಶ್ರಯದಲ್ಲಿ ದುಡಿಯಲಿಲ್ಲ. ಒಂಟಿಸಲಗದಂತೆ ನಡೆದರು, ವ್ಯಾಪಾರ ಮಾಡಿದರು, ವಸಂತ, ವಿಚಾರವಾಣಿ ಪತ್ರಿಕೆ ನಡೆಸಿದರು. ಬಾಲವನ ಸ್ಥಾಪಿಸಿದ್ದರು. ಚಲನಚಿತ್ರ , ಯಕ್ಷಗಾನ ಪ್ರಯೋಗಗಳನ್ನು ನಡೆಸಿದ್ದರು, ಹೀಗೆ ...

READ MORE

Related Books