ಯಾತ್ರೆ

Author : ಶೂದ್ರ ಶ್ರೀನಿವಾಸ್

Pages 320

₹ 295.00




Year of Publication: 2018
Published by: ಅಂಕಿತ ಪುಸ್ತಕ
Address: 53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು - 560 004
Phone: 080-26617100/2667755

Synopsys

ಈ ಕೃತಿಯು ಸುಮಾರು 40 ವರ್ಷ ಹಿಂದಿನ ಬದುಕನ್ನು ನೆನಪಿಸುತ್ತದೆ. ಭಾವನ ಮತ್ತು ಸ್ವಾಮಿಯವರು ಬದುಕಿದ ರೀತಿಯನ್ನು ವಿವರಿಸುತ್ತದೆ.ಅವರು ಎದುರಿಸಿದ ಸವಾಲುಗಳನ್ನು ಲೇಖಕರು ವಿವರಿಸಿದ್ದಾರೆ.ಸಮಾಧಾನ ದಿಂದ ಬದುಕಲು ಯತ್ನಿಸುವವರ ಕಥೆ. ವೈಯಕ್ತಿಕ ಸಮಸ್ಯಗಳಿಂದಾಗಿ ಜೀವನದಲ್ಲಿ ಅನುಭವಿಸುವ ನೋವುಗಳನ್ನು ವಿವರಿಸಲಾಗಿದೆ. ನಗರೀಕರಣದಿಂದಾಗಿ ಸಮಾಜದಲ್ಲಿ ಉಂಟಾದ ಬದಲಾವಣೆ ಜನರ ಬದುಕನ್ನು ಹೇಗೆ ದುಸ್ತರಗೊಳಿಸಿತು ಎಂಬುದನ್ನು ಲೇಖಕರು ಈ ಕೃತಿಯ ಮೂಲಕ ವಿವರಿಸಿದ್ದಾರೆ.

ನಿರಂತರವಾದ ಬಾಳಿನ ಈ ಯಾನದಲ್ಲಿ ಮನುಷ್ಯ ಜೀವಿಯನ್ನು ಸದಾ ಕಾಡುವ, ಬಾದಿಸುವ, ಖುಷಿಕೊಡುವ, ಚೈತನ್ಯಶೀಲಗೊಳಿಸುವ ಹಲವು ಭಾವಗಳ ತೀವ್ರವಾದ ಶೋಧ ಈ ಕಥನದಲ್ಲಿದೆ; ಅಂಥ ಭಾವಗಳಲ್ಲಿ ಕಾಮ, ಅದರ ತೀವ್ರತೆ ಅದು ಹುಟ್ಟಿಸುವ ಧನ್ಯತೆ, ಪಾಪಾಪ್ರಜ್ಞೆಗಳ ಸೂಕ್ಷವಾದ ನೆಲೆಗಳನ್ನು ಇಲ್ಲಿ ಪ್ರಧಾನವಾಗಿ ತಿಳಿಸಲಾಗಿದೆ. ಈ ತುಡಿತಗಳೇ ಯಾವಬಗೆಯಲ್ಲಿ ಮಾನವೀಯ ಬದುಕಿನ ಮೂಲವಾಗುತ್ತವೆ ಎಂಬುದನ್ನು ಈ ಕಥನವು ಕಾಣಿಸುತ್ತದೆ. ಇಲ್ಲಿ ಮನೋರಥವನ್ನೇರಿದ ವ್ಯಕ್ತಿಯೊಬ್ಬ ಯಾತ್ರೆ ಹೊರಡುವ, ಅವನು ಸಾಗುವ ಹಾದಿಯಲ್ಲಿ ಅನಂತ  ಅನುಭವಗಳಿಗೆ ಎದುರಾಗುವ, ದೇಹ ಮತ್ತು ಮನುಷ್ಯ ಸಹಜ ಪ್ರೇರಣೆಗಳಿಗೆ ತೀವ್ರವಾಗಿ  ಒಳಗಾಗುವ, ಒಂದೆಡೆ ನೆಲೆಗೊಳ್ಳಲು ಯತ್ನಿಸಿ ಸೋಲುವ, ಅಲೆದಾಟದಿಂದ ತನ್ನ ಊರಿಗೆ ಹಿಂದಿರುಗಿದಾಗ ಛಿದ್ರಗೊಂಡಿರುವ ತನ್ನ ಊರು, ತನ್ನ ಕುಟುಂಬ ಬಂಧುಗಳನ್ನು ಕಂಡು ಅನಾಥ ಪ್ರಜ್ಞೆಯಲ್ಲಿ ನರಳಿ ಕೊನೆಯಾಗುವ ಸೂಕ್ಷ್ಮವಾದ ಚಿತ್ರಗಳಿವೆ. ಇವೆಲ್ಲವೂ ಹೇಗೆ ಮನುಷ್ಯಲೋಕದ ಸಾರ್ವಕಾಲಿಕ ಅತ್ಯವೇ ಆಗಿವೆ ಎಂಬುದರ ಹುಡುಕಾಟ ಈ ಕಥನದ ಪ್ರಧಾನ ಆಶಯವಾಗಿದೆ.  

About the Author

ಶೂದ್ರ ಶ್ರೀನಿವಾಸ್

ಸೂಕ್ಷ್ಮ ಸಂವೇದನೆಯ ಕವಿ ಶೂದ್ರ ಶ್ರೀನಿವಾಸ್ ಅವರು ಹುಟ್ಟಿದ್ದು  ಬೆಂಗಳೂರು ಜಿಲ್ಲೆಯ ಆನೇಕಲ್ ತಾಲ್ಲೂಕು ಮುತ್ತಾನಲ್ಲೂರು ಗ್ರಾಮದಲ್ಲಿ. ಈಗ ಬೆಂಗಳೂರು ವಾಸಿ. 1973ರಲ್ಲಿ ಶೂದ್ರ ಸಾಹಿತ್ಯ ಪತ್ರಿಕೆಯನ್ನು ಆರಂಭಿಸಿ ಅನೇಕ ವರ್ಷಗಳ ಕಾಲ ನಡೆಸಿದರು. 1996ರಲ್ಲಿ ಸಲ್ಲಾಪ ವಾರಪತ್ರಿಕೆ ಪ್ರಾರಂಭಿಸಿ ಒಂದು ವರ್ಷ ನಡೆಸಿದರು. 2002ರಲ್ಲಿ 'ನೆಲದ ಮಾತು' ಎಂಬ ತ್ರೈಮಾಸಿಕ ಪತ್ರಿಕೆಯನ್ನು ಪ್ರಾರಂಭಿಸಿದ್ದರು. ಶೂದ್ರ ಶ್ರೀನಿವಾಸ ಸಮಾಜವಾದಿ ರಾಜಕೀಯ ಚಿಂತನೆಯ ವ್ಯಕ್ತಿ. ಅವರು 1975-76ರಲ್ಲಿ 'ತುರ್ತು ಪರಿಸ್ಥಿತಿ'ಯಲ್ಲಿ ಎರಡು ಬಾರಿ ಬಂಧನ ಮತ್ತು ಸೆರೆಮನೆ ವಾಸ ಕಂಡವರು. 1976ರಲ್ಲಿ ಕೇರಳದ ಕೊಚ್ಚಿನ್‌ನಲ್ಲಿ ನಡೆದ ರಾಷ್ಟ್ರೀಯ ತುರ್ತು ...

READ MORE

Related Books