ಏಕಾಂಬರ

Author : ಕುಂ. ವೀರಭದ್ರಪ್ಪ

Pages 236

₹ 165.00




Year of Publication: 2017
Published by: ಸಪ್ನಾ ಬುಕ್ ಹೌಸ್

Synopsys

ಹೆಸರಾಂತ ಲೇಖಕ ಕುಂ. ವೀರಭದ್ರಪ್ಪ ಅವರ ಕಾದಂಬರಿ. ಕರ್ನಾಟಕದ ನೈರುತ್ಯ ಮೂಲೆಯಲ್ಲಿರುವ ಗುಣಸಾಗರ ದೊಡ್ಡದೂ ಅಲ್ಲದ, ಚಿಕ್ಕದೂ ಅಲ್ಲದ ಪುಟ್ಟ ಪಟ್ಟಣ. ಅಲ್ಲಿ ಚಿಕ್ಕಪುಟ್ಟ ಘಟನೆಗಳಿಗೆ ತಲೆ ಕೆಡಿಸಿಕೊಳ್ಳುವವರೇ ಹೆಚ್ಚು. ಕಳೆದೊಂದು ವರ್ಷದಿಂದ ಒಂದೇ ಒಂದು ಅಹಿತಕರ ಸಂಗತಿಯು ಸುದ್ದಿವಾಹಿನಿಗಳಲ್ಲಿ ಕಾಣಿಸಿಕೊಂಡಿರದಿದ್ದರೂ ಜನ ಹಳೆ ಸುದ್ದಿ ಗಳನ್ನು ಮೆಲುಕು ಹಾಕುತ್ತ ಕಾಲಕ್ಷೇಪ ಮಾಡಿ ಬಸವಳಿದಿದ್ದರು. ಆದರ ಅದೃಷ್ಟವೋ ಎಂಬಂತೆ ಸುದ್ದಿಯೊಂದು ಅಲ್ಲಿನ ರೇಣುಕಾ ಬಡಾವಣೆಯಲ್ಲಿ ಕಾಣಿಸಿಕೊಂಡು ನಿಧನಿಧಾನವಾಗಿ ಪಟ್ಟಣದ ತುಂಬೆಲ್ಲಾ ವ್ಯಾಪಿಸಿತು. ಅದು ಗಂಡಾಂತರವಲ್ಲದಿದ್ದರೂ ವಿಚಿತ್ರ ಮುತ್ತು ನಗೆಪಾಟಲಿಗೆ ಸಂಬಂಧಿಸಿದ್ದಾಗಿತ್ತು.

ಆದೆಂದರೆ ಅದೇ ಪಟ್ಟಣದ ಬ್ಯಾಂಕೊಂದರಲ್ಲಿ ಮ್ಯಾನೇಜರಾಗಿರುವ ಏಕಾಂಬರ ಹೊಸ ಅಂಗಿಯನ್ನು ಹೊಲಿಸಿಕೊಳ್ಳಲು ನಿರ್ಧರಿಸಿರುವ ನೆಂಬುದು. ಕಾರಣ- ಕಳೆದ ಇಪ್ಪತ್ತು, ಮುವ್ವತ್ತು ವರ್ಷಗಳಿಂದ ಆತನು ಒಂದೇ ಒಂದು ಹೊಸ ಅಂಗಿಯನ್ನು ಹೊಲಿಸಿಕೊಳ್ಳದೆ ತನ್ನ ಹಳೆಯ ಅಂಗಿಗಳ ಮೇಲೆಯೇ ದಿನಗಳನ್ನು ತಳ್ಳುತ್ತ ಪಟ್ಟಣದಾದ್ಯಂತ ಹೆಸರಾಗಿದ್ದನು. ನಿವೃತ್ತಿಯ ಬಳಿಕ ಅವಧೂತ ಪದವಿಯನ್ನು ಅಲಂಕರಿಸಲು ಎಲ್ಲಾ ಸಿದ್ಧತೆಗಳನ್ನು ಮಾಡಿ ಕೊಂಡಿದ್ದ, ಅದೂ ಗುಟ್ಟಾಗಿ, ಅಂಥವನು ಹೊಸ ಅಂಗಿ ಹೊಲಿಸಿಕೊಳ್ಳುವುದೆಂದರೇನು?

ಇದು ಕುಂ.ವೀ. ಕಾದಂಬರಿಯ ಕಥಾಹಂದರ

About the Author

ಕುಂ. ವೀರಭದ್ರಪ್ಪ
(01 October 1953)

ಕುಂ.ವೀ. ಎಂದೇ ಜನಪ್ರಿಯರಾಗಿರುವ ಕಾದಂಬರಿಕಾರ, ಕತೆಗಾರ ಕುಂ. ವೀರಭದ್ರಪ್ಪ ಅವರು ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಕೊಟ್ಟೂರಿನವರು. 1953ರ ಅಕ್ಟೋಬರ್ 1ರಂದು ಜನಿಸಿದರು. ‘ಬೇಲಿ ಮತ್ತು ಹೊಲ’ ಕಿರುಕಾದಂಬರಿಯ ಮೂಲಕ ಕನ್ನಡ ಸಾಹಿತ್ಯದ ಶಿಷ್ಟ ಪರಂಪರೆಯ ಬೇಲಿಗಳನ್ನು ಜಿಗಿದ ಕುಂ. ವೀರಭದ್ರಪ್ಪ, ಓದುಗರನ್ನು ಆಕರ್ಷಿಸಿದ್ದು ತಮ್ಮ ವಿಶಿಷ್ಟ ಭಾಷಾ ಪ್ರಯೋಗ ಮತ್ತು ನುಡಿಗಟ್ಟುಗಳಿಂದ. ಅವರ ಕತೆಗಳಲ್ಲಿ ಕಾದಂಬರಿಗಳಲ್ಲಿ ಕಾಣಿಸಿಕೊಂಡ ಭಾಷೆ ಅವರಿಗೆ ಸಾಹಿತ್ಯದಲ್ಲೊಂದು ಪ್ರತ್ಯೇಕ ಸ್ಥಾನ ಕಲ್ಪಿಸಿಕೊಟ್ಟಿತು. ’ಎಲುಗನೆಂಬ ಕೊರಚನೂ ಚವುಡನೆಂಬ ಹಂದಿಯೂ’, ’ಕತ್ತಲಿಗೆ ತ್ರಿಶೂಲ ಹಿಡಿದ ಕತೆ’ಗಳ ಮೂಲಕ ಸಣ್ಣ ಕತೆಯ ದಿಕ್ಕನ್ನು ಬದಲಾಯಿಸಿದರು. ಶಿವರಾಜ್ ...

READ MORE

Related Books