ಉರಿವ ಕೆಂಡದ ಮೇಲೆ - ಕಾದಂಬರಿ

Author : ಬಸವರಾಜ ಪಿ. ಡೋಣೂರ

Pages 632

₹ 750.00




Year of Publication: 2021
Published by: ಮನೋಹರ ಗ್ರಂಥ ಮಾಲಾ
Address: ಧಾರವಾಡ

Synopsys

‘ಉರಿವ ಕೆಂಡದ ಮೇಲೆ’ ಡಾ. ಬಸವರಾಜ ಡೋಣೂರರ ಪ್ರಥಮ ಕಾದಂಬರಿ. ಈ ಕೃತಿಗೆ ಹಿರಿಯ ಕವಿ ಎಚ್.ಎಸ್. ಶಿವಪ್ರಕಾಶ್ ಮತ್ತು ಹಿರಿಯ ವಿಮರ್ಶಕ ರಾಜೇಂದ್ರ ಚನ್ನಿ ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಕೃತಿಯ ಕುರಿತು ಬರೆಯುತ್ತಾ ‘ಬಸವರಾಜ ಡೋಣೂರ ಅವರ ಕಾದಂಬರಿಯನ್ನು ನಾನು ಓದಲು ಶುರುಮಾಡಿದ ಮೇಲೆ ಅದು ಮುಗಿಯುವವರೆಗೆ ಬಿಟ್ಟು ಬಿಡದೆ ಓದಿದೆ. ಕೃತಿಯ ಶಕ್ತಿ ಇರುವುದು ಜಿದ್ದಾಜಿದ್ದಿಯ ಹೋರಾಟದಲ್ಲಿ ಪ್ರಕಾಶ್ ಕೂಡ ತನ್ನ ಎದುರಾಳಿಯ ತಂತ್ರಗಳನ್ನೇ ಬಳಸುತ್ತಾನೆ ಎನ್ನುವುದನ್ನು ತೋರಿಸುವುದರಲ್ಲಿ. ಅಂದರೆ ಅಕಾರ ವ್ಯವಸ್ಥೆಯ ಅಂತಿಮ ಜಯವೆಂದರೆ ಅದನ್ನು ವಿರೋಧಿಸುವವರು ಕೂಡ ಅದೇ ತಂತ್ರಗಳನ್ನು ಬಳಸುವಂತಾಗುವುದು. ಅನಾಮಧೇಯ ಪತ್ರಗಳನ್ನು ಅವನೇ ಮೊದಲು ಬರೆಯುತ್ತಾನೆ. ತನ್ನ ರಕ್ಷಣೆಗಾಗಿ ರಾಜಕೀಯ ವ್ಯಕ್ತಿಗಳ ಸಹಾಯವನ್ನು ಯೋಚಿಸುತ್ತಾನೆ ಕ್ರಾಂತಿಕಾರಿ, ಹೋರಾಟಗಾರನೆಂದು ಪ್ರಸಿದ್ಧನಾಗಿದ್ದರೂ ಇಂಥ ವ್ಯಕ್ತಿಗಳ ಸಹಾಯ ಕೇಳುವುದು ಅವನಿಗೆ ಅನೈತಿಕವೆನಿಸುವುದಿಲ್ಲ. ಸುಳಿಯಲ್ಲಿ ಸಿಕ್ಕಾಗಿದೆ. ಈಗ ಜಯಿಸಲೇ ಬೇಕೆ ಎನ್ನುವುದೇ ಅವನ ಕ್ರಿಯೆಗಳಿಗೆ ಸಿಕ್ಕುವ ನ್ಯಾಯಬದ್ಧತೆಯಾಗಿದೆ. ಅವನು ತನ್ನ ಕ್ರಿಯೆಗಳ ಬಗ್ಗೆ, ತನ್ನ ಅಧಃಪತನದ ಬಗ್ಗೆ ಎಚ್ಚರವಾಗಿರುವುದೇ ಕಾದಂಬರಿಯ ಶಕ್ತಿಯಾಗಿದೆ’ ಎನ್ನುತ್ತಾರೆ ರಾಜೇಂದ್ರ ಚನ್ನಿ.

About the Author

ಬಸವರಾಜ ಪಿ. ಡೋಣೂರ
(26 July 1969)

ಡಾ ಬಸವರಾಜ್ ಪಿ. ಡೋಣೂರು ಬಸವನಬಾಗೇವಾಡಿ ತಾಲೂಕಿನ ಸಾತಿಹಾಳ ಗ್ರಾಮದವರು.  1969ರ ಜುಲೈ 26 ರಂದು ಜನಿಸಿದರು. ಇಂಗ್ಲಿಷ್ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾಗಿ ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರಗಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ’ಹಾಪ್‌ಕಿನ್ಸ್ ಮತ್ತು ಬಸವಣ್ಣ’ ವಿಷಯದ ಬಗ್ಗೆ ತುಲನಾತ್ಮಕ ಅಧ್ಯಯನ ನಡೆಸಿದ್ದಾರೆ. ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿ, ಸ್ಕೂಲ್ ಆಫ್ ಹ್ಯುಮ್ಯಾನಿಟೀಸ್ ಅಂಡ್ ಲ್ಯಾಂಗ್ವೇಜಸ್ ವಿಭಾಗದ ಡೀನ್ ಆಗಿ ಸೇವೆ ಸಲ್ಲಿಸಿದ್ದಾರೆ. ಯುಜಿಸಿ ಸಂಶೋಧನಾ ಯೋಜನೆಯಡಿ ಜಾಗತೀಕರಣದ ಸನ್ನಿವೇಶದಲ್ಲಿ ಕರ್ನಾಟಕದ ಜಾನಪದ ನಾಟಕಗಳ ಸಂಗ್ರಹ, ಅನುವಾದ ಮತ್ತು ವಿಶ್ಲೇಷಣೆ ಮಾಡಿದ್ದು, ಹತ್ತು ಹಲವು ಕೃತಿಗಳನ್ನು ಬರೆದಿದ್ದಾರೆ. “ಕನ್ನಡ ನಾಟಕ ಮತ್ತು ವಾಸ್ತವಿಕತೆ” ಎಂಬ ...

READ MORE

Related Books