ಮತ್ತೆ ಬೆಳಗಿದ ಚಂದ್ರಮ

Author : ಬೇಲೂರು ರಾಮಮೂರ್ತಿ

Pages 233

₹ 60.00




Year of Publication: 1999
Published by: ಪ್ರಕಾಶ ಸಾಹಿತ್ಯ
Address: ಬೆಂಗಳೂರು

Synopsys

‘ಮತ್ತೆ ಬೆಳಗಿದ ಚಂದ್ರಮ’ ಬೇಲೂರು ರಾಮಮೂರ್ತಿ ಅವರ ಕಾದಂಬರಿಯಾಗಿದೆ. ಆ ಊರಿನಲ್ಲಿ ಇದ್ದಂತಹ ಪ್ರತಿಷ್ಠಿತ ಕುಟುಂಬಗಳಲ್ಲಿ ರಾಮರಾಯರು ಮತ್ತು ಚಂದ್ರಣ್ಣ ಅವರದೂ ಒಂದು. ಅವರಿಬ್ಬರ ಮನೆಗಳಿಗೂ ಅನ್ಯೋನ್ಯ ಸಂಬಂಧ. ರಾಮರಾಯರ ಮಗ ಶ್ರೀಧರನಿಗೂ ಚಂದ್ರಣ್ಣನ ಮಗಳು ಶೃತಿಗೂ ಮದುವೆ ಎಂದು ಇಡೀ ಊರಿಗೇ ಗೊತ್ತು. ಹೀಗಿರುವಾಗ ಊರಿನ ಪಂಚಾಯಿತಿಗೆ ಚಂದ್ರಣ್ಣ ಚುನಾವಣೆಗೆ ನಿಲ್ಲುತ್ತಾರೆ. ಇನ್ನೊಂದು ಪಂಗಡದವರು ಬಂದು ರಾಮರಾಯರನ್ನು ಬಲವಂತದಿಂದ ಚುನಾವಣೆಗೆ ನಿಲ್ಲುತ್ತಾರೆ. ಆದರೆ ರಾಮರಾಯರು ಕಡೆಯ ದಿನ ತಮ್ಮ ಉಮೇದುವಾರಿಕೆಯನ್ನು ಹಿಂಪಡೆಯುತ್ತಾರೆ. ಆದರೆ ರಾಮರಾಯರು ಇನ್ನೊಬ್ಬ ಅಭ್ಯರ್ಥಿ ಶಾಮರಾಯರಿಗೆ ಬೆಂಬಲ ಕೊಟ್ಟು ತನ್ನನ್ನು ಸೋಲಿಸಿದರು ಎನ್ನುವ ವಿಚಾರ ಅವರಿಬ್ಬರ ಮನಸ್ಥಾಪಕ್ಕೆ ಕಾರಣವಾಗುತ್ತದೆ. ಮುಂದೆ ಅವರಿಬ್ಬರ ಮನಸ್ಥಾಪ ಮರೆಯಾಯಿತೇ, ಶ್ರೀಧರ ಶೃತಿ ಅವರ ಮದುವೆಯಾಯಿತೇ ಎನ್ನುವುದೆಲ್ಲಾ ಕುತೂಹಲ ತರುವ ಅಂಶಗಳು.

About the Author

ಬೇಲೂರು ರಾಮಮೂರ್ತಿ
(30 June 1950)

ಸಾಹಿತಿ ಬೇಲೂರು ರಾಮಮೂರ್ತಿ ಅವರು ಮೂಲತಃ ಮೈಸೂರಿನವರು. ತಮ್ಮ ಹಾಸ್ಯ ಲೇಖನಗಳ ಮೂಲಕ ಕನ್ನಡ ಸಾಹಿತ್ಯದಲ್ಲಿ ಚಿರಪರಿಚಿತರು. ಅವರು 1950 ಜೂನ್ 30ರಲ್ಲಿ ಜನಿಸಿದರು.  ‘ಕಥಾ ಕುಸುಮ, ಕಥಾ ಕನ್ನಡಿ, ಕಥಾ ಬಿಂಬ, ಆಕಾಶದಿಂದ ಧರೆಗೆ’ ಅವರ ಕತಾ ಸಂಕಲನಗಳು.  ‘ಪ್ರಬಂಧ, ನಾಟಕ, ಕಾದಂಬರಿ, ಹಾಸ್ಯ’ ಪ್ರಕಾರಗಳಲ್ಲಿ ಕೃಷಿ ಸಾಧಿಸಿದ್ದಾರೆ.  ‘ಅನರ್ಘ್ಯ ಪ್ರೇಮ, ಅಗೋಚರ, ಜೋಡಿರಾಗ, ಅಪರಾಧಿ ನಾನಲ್ಲ, ಸುಮಂಗಲೆ, ಹೀಗೊಂದು ಸಾರ್ಥಕ ಬದುಕು, ಅಮೃತಗಾನ, ಅತಿಥಿ, ಶರ್ಮಿಳ, ಅಗ್ನಿಜ್ವಾಲೆ, ಅಭಿಷೇಕ, ಅರುಂಧತಿ, ಸಂಬಂಧ ರಾಗ, ಸ್ವರಸಂಗಮ, ತೂಗುಸೇತುವೆ, ಮುತ್ತಿನ ತೆನೆ, ಸಮಾಗಮ, ಕಾಣದ ಊರಲಿ, ಎಂದೂ ನಿನ್ನವನೇ, ಪ್ರೇಮನಿವೇದನೆ, ...

READ MORE

Related Books