ಕಂಬನಿಯ ಕುಯಿಲು

Author : ತ.ರಾ.ಸು. (ತ.ರಾ. ಸುಬ್ಬರಾವ್)

Pages 216

₹ 150.00




Year of Publication: 2013
Published by: ಹೇಮಂತ ಸಾಹಿತ್ಯ ಪ್ರಕಾಶನ
Address: ನಂ.972 62ನೇ ಕ್ರಾಸ್‌, 10ನೇ ಮುಖ್ಯ ರಸ್ತೆ, 4ನೇ ಎಂ ಬ್ಲಾಕ್‌, ಮಂಜುನಾಥ ನಗರ, ರಾಜಾಜಿನಗರ ಬೆಂಗಳೂರು-560010

Synopsys

ತ. ರಾ. ಸುಬ್ಬರಾಯರ ಐತಿಹಾಸಿಕ ಕಾದಂಬರಿ 'ಕಂಬನಿಯ ಕುಯಿಲು', 2013ರಲ್ಲಿ 12ನೇ ಬಾರಿ ಮುದ್ರಣಗೊಂಡು ಬಿಡುಗಡೆಯಾಗಿದೆ.. ಚಿತ್ರದುರ್ಗದ ಇತಿಹಾಸವನ್ನು ವಸ್ತುವನ್ನಾಗಿಟ್ಟುಕೊಂಡು ರಚಿತವಾಗಿರುವ ʻಕಂಬನಿಯ ಕುಯಿಲುʼ ತ. ರಾ.ಸು ಅವರ ಕಾದಂಬರಿಗಳಲ್ಲಿ ಮೊದಲನೇಯದ್ದು.  ಪಾಳೇಗಾರರ ಆಳ್ವಿಕೆಯ ಕಾಲದ ಭವ್ಯಚಿತ್ರಣವಿದೆ. ವಂಶಪಾರಂಪರಿಕವಾಗಿ ಬರುವ ಅಧಿಕಾರವನ್ನು ಮುನ್ನಡೆಸಿಕೊಂಡು ಹೋಗಲು ಯೋಗ್ಯ ವ್ಯಕ್ತಿಯ ಅನುಪಸ್ಥಿತಿ ಹಾಗೂ ಮದಕರಿ ನಾಯಕನಿಗೆ ಗಂಡು ಸಂತಾನ ಇಲ್ಲದಿರುವ ಲಾಭವನ್ನು ಅಧಿಕಾರದ ಆಸೆಗೆ ದುರುಪಯೋಗ ಮಾಡಿಕೊಳ್ಳುವ ಮುದ್ದಣ್ಣನ ಒಳಸಂಚಿನ ಕಥಾಹಂದರದ ಕಾದಂಬರಿ ಇದು.

About the Author

ತ.ರಾ.ಸು. (ತ.ರಾ. ಸುಬ್ಬರಾವ್)
(12 June 1906 - 10 April 1984)

ತಳುಕು ರಾಮಸ್ವಾಮಯ್ಯ ಸುಬ್ಬರಾಯ(ತ.ರಾ.ಸು) ಹುಟ್ಟಿದ್ದು 1906 ಜೂನ್ 12 ಚಿತ್ರದುರ್ಗ ಜಿಲ್ಲೆಯ ಚೆಳ್ಳೆಕೆರೆ ತಾಲ್ಲೂಕಿನ ತಳುಕು ಎಂಬ ಗ್ರಾಮದಲ್ಲಿ. ಮೂಲ ಆಂಧ್ರಪ್ರದೇಶದವರು. ತಂದೆ ರಾಮಸ್ವಾಮಯ್ಯ ಅವರು ತಳುಕು ಗ್ರಾಮಕ್ಕೆ ಬಂದು ನಂತರ ಚಿತ್ರದುರ್ಗದಲ್ಲಿ ಪ್ಲೀಡರ್ ಆಗಿದ್ದರು. ಸುಬ್ಬಾರಾಯರು ಇಂಟರ್ ಮೀಡಿಯೆಟ್ನಲ್ಲಿದ್ದಾಗ ದೇಶದ ಸ್ವಾತಂತ್ಯ್ರ ಚಳವಳಿಯಲ್ಲಿ ಧುಮುಕಿದರು. ಪ್ರಮುಖ ಕೃತಿಗಳು: ಕಂಬನಿಯ ಕುಯಿಲು, ರಕ್ತರಾತ್ರಿ, ದುರ್ಗಾಸ್ತಮಾನ, ನೃಪತುಂಗ, ಸಿಡಿಲ ಮೊಗ್ಗು, ಶಿಲ್ಪಶ್ರೀ, ಕಸ್ತೂರಿ ಕಂಕಣ, ತಿರುಗುಬಾಣ-, ಈ ಕಾದಂಬರಿಗಳು ಬರೆಹಾ ಕೌಶಲ್ಯಕ್ಕೆ ಹಿಡಿದ ಕನ್ನಡಿ. ಚಲನಚಿತ್ರವಾದ ಕಾದಂಬರಿಗಳು: ಚಂದವಳ್ಳಿಯ ತೋಟ, ಹಂಸಗೀತೆ (1956ರಲ್ಲಿ ಬಸಂತ ಬಹಾರ್ ಹೆಸರಲ್ಲಿ ಹಿಂದಿ ಚಲನಚಿತ್ರವಾಗಿತ್ತು.) ನಾಗರಹಾವು, ...

READ MORE

Related Books