ಚದುರೆ

Author : ಭಿ.ಪ. ಕಾಳೆ

Pages 211

₹ 1.00




Year of Publication: 1937
Published by: ಭಿ.ಪ. ಕಾಳೆ
Address: ಶ್ರೀ ಶೇಷಾಚಲ ಪ್ರೆಸ್, ಆನಂದವನ (ಅಗಡಿ) ಹಾವೇರಿ

Synopsys

ಭಿ.ಪ. ಕಾಳೆ ಅವರು ಕಾದಂಬರಿ-ಚದುರೆ. ಪೇಶ್ವೆ ಬಾಜಿರಾಯನ ಕಾಲದ ಕಥೆ ಇದು. ಕಥಾನಾಯಕಿಯಾದ ಚದುರೆಯು ದುಷ್ಕರ್ಮಿಗಳಿಂದ ಶೀಲಭ್ರಷ್ಟಳಾದ ಮೇಲೆ ಅನೇಕ ಘೋರ ಕೃತ್ಯಗಳನ್ನೂ, ಅದ್ಭುತ ಸಾಹಸಗಳನ್ನು ಮಾಡುತ್ತಾಳೆ. ಮನುಷ್ಯರು ಈರ್ಷೆ, ಮಹತ್ವಾಕಾಂಕ್ಷೆಗಳೀಗೆ ಒಳಪಟ್ಟ ಮೇಲೆ ಅವರಿಂದ ಎಂತಂಥ ಕಾರ್ಯಗಳು  ನಡೆಯುತ್ತವೆ ಎಂಬುದಕ್ಕೆ ಈ ಕಾದಂಬರಿ ಕನ್ನಡಿ ಹಿಡಿಯುತ್ತದೆ. ನಾಮಧಾರಿ ರಾಮದಾಸನು ತನ್ನ ಸೇಡು ತೀರಿಸಿಕೊಳ್ಳಲು ಶ್ರೀ ಬ್ರಹ್ಮೇಂದ್ರಸ್ವಾಮಿ, ಶಾಹೂರಾಜ, ಬಾಜಿರಾಯ, ಸಂಬಾಜಿರಾಯ, ಜೀಜಾಬಾಯಿ ಮುಂತಾದವರಿಎ ತೊಂದರೆ ಕೊಡುವುದು ಸಹ ಕಾದಂಬರಿಯ ಪ್ವರಮುಖ ಭಾಗವಾಗಿದೆ.

About the Author

ಭಿ.ಪ. ಕಾಳೆ
(20 January 1889)

ಭಿಕಾಜಿಪಂತ ಕಾಳೆ ಎಂಬುದು  ಪೂರ್ಣ ಹೆಸರು. ಭಿ.ಪ.ಕಾಳೆ ಎಂದೇ ಖ್ಯಾತಿ. ಹೆಸರಾಂತ ಕಾದಂಬರಿಕಾರರು. ಪ್ರಕಾಶಕ-ಮುದ್ರಕರೂ ಹೌದು. ತಂದೆ ಪರಶುರಾಮ ಪಂತ ಕಾಳೆ. ಧಾರವಾಡ ಜಿಲ್ಲೆಯ ಕುಂದುಗೋಳ ತಾಲ್ಲೂಕಿನ ಸಂಶಿ ಗ್ರಾಮದಲ್ಲಿ 1889ರ ಜನವರಿ 20ರಂದು ಹುಟ್ಟಿದರು. ಕುರಂದವಾಡ ಸಂಸ್ಥಾನಿಕರ ಅಧೀನದಲ್ಲಿದ್ದ ಈ ಪ್ರದೇಶ ಪಟವರ್ಧನ ಸಂಸ್ಥಾನಿಕರ ಆಡಳಿತಕ್ಕೆ ಒಳಪಟ್ಟಿತ್ತು. ಸಂಸ್ಥಾನಿಕರ ಮನೆ ಮಾತು ಮರಾಠಿ. ಆಡಳಿತದ ಭಾಷೆಯೂ ಮರಾಠಿ.  ಸಂಶಿ ಗ್ರಾಮವು ಮರಾಠಿಮಯವೇ ಆಗಿತ್ತು. ಮಹಾರಾಷ್ಟ್ರದಿಂದ ಪಟವರ್ಧನ ಸಂಸ್ಥಾನಕ್ಕೆ ಬಂದು ಅಲ್ಲಿಯ ಬೇರೆ ಬೇರೆ ಊರುಗಳಲ್ಲಿ ನೆಲಸಿದ ಚಿತ್ಪಾವನ (ಕೊಂಕಣಸ್ಥ) ಬ್ರಾಹ್ಮಣ ಮನೆತನಗಳಲ್ಲಿ ಕಾಳೆ ಕುಟುಂಬವೂ ಒಂದು. ಈ ಕುಂಟುಂಬ ಸಾಂಸಿಯಲ್ಲಿ ...

READ MORE

Related Books