ಕಾಲೇಜು ಹುಡುಗಿಯರು ಶಾಮರಾಯನ ಮಾತಿನ ಮೋಡಿಗೆ ಒಳಗಾಗಿ ಅವನ ಸುತ್ತ ಕಲೆಯುತ್ತಾರೆ. ಜ್ವಾಲೆ ಎಂಬಾಕೆ ಅವನೊಂದಿಗೆ ಪ್ರಣಯ ಸಂಬಂಧವಿರಿಸಿಕೊಳ್ಳುತ್ತಾಳೆ. ತನ್ನ ಊರಿನಲ್ಲಿ ಬೇರೊಂದು ಮದುವೆಯನ್ನು ಮಾಡಿಕೊಂಡಿದ್ದೂ, ಜ್ವಾಲೆಯನ್ನು ಪ್ರೀತಿ ಪ್ರೇಮದ ಬಲೆಯಲ್ಲಿ ಕೆಡವುತ್ತಿರುತ್ತಾನೆ. ಮುಂದೊಂದು ದಿನ ಆಕೆಗೆ ಇದು ಗೊತ್ತಾಗುತ್ತದೆ. ಶ್ಯಾಮರಾಯ ಹಣದ ವ್ಯವಹಾರದಲ್ಲೂ ಪ್ರಾಮಾಣಿಕನಾಗಿರುವುದಿಲ್ಲ. ತಾನು ಕಷ್ಟದಲ್ಲಿ ಸಿಲುಕಿರುವೆನೆಂದಾಗ, ಆನಂದರಾಯ ತನ್ನ ಸ್ನೇಹಿತನೆಂದು ಅವನಿಗೆ ಸಹಕರಿಸುತ್ತಾನೆ. ಮುಂದೊಂದು ದಿನ ಶ್ಯಾಮರಾಯನಿಂದ ವಂಚಿತಳಾಗಿದ್ದ ಜ್ವಾಲೆ ಆನಂದನನ್ನು ಸಂಧಿಸುವ ಪ್ರಸಂಗ ಬರುತ್ತದೆ. ಕಾಲಕ್ರಮೇಣ ಆಕೆ ಶ್ಯಾಮರಾಯನಿಂದ ವಂಚಿಸಲ್ಪಟ್ಟವಳೆಂಬ ಸಂಗತಿ ತಿಳಿದುಬಂದಾಗ, ಆನಂದರಾಯನಿಗೆ ಆಶ್ಚರ್ಯವಾಗುತ್ತದೆ. ಅವನು ಜ್ವಾಲೆಯನ್ನು ತಾನೇ ವಿವಾಹವಾಗಲು ನಿಶ್ಚಯಿಸುತ್ತಾನೆ. 'ನಾಟಕ ಪ್ರಿಯನಾದ ನನಗೆ ಪರರನ್ನು ತಿಳಿಯುವ ಶಕ್ತಿಯಿದೆ. ಅದರಿಂದ ಜಗತ್ತಿನ ಜನಗಳನ್ನು ತಿಳಿಯಬಲ್ಲೆ ; ಪ್ರಸಂಗ ಬಂದಾಗ ಆ ಜ್ಞಾನವನ್ನು ನಾಟಕದ ಪಾತ್ರಗಳನ್ನು ಚಿತ್ರಿಸುವಾಗ ಬೆಳೆಸಬಲ್ಲೆ' ಎಂಬ ಆತ್ಮವಿಶ್ವಾಸವನ್ನು ಬೆಳೆಸಿಕೊಂಡಿದ್ದ ಆನಂದರಾಯನಿಗೆ ತನ್ನ ಆಪ್ತ ಗೆಳೆಯ ಶ್ಯಾಮರಾಯನ ನಿಜವಾದ ವ್ಯಕ್ತಿತ್ವದ ಪರಿಚಯವಾದಾಗ ಭ್ರಮನಿರಸನವಾಗುತ್ತದೆ.
ತಮ್ಮ ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಕೋಟ ಶಿವರಾಮ ಕಾರಂತರ ಕೊಡುಗೆ ಅನನ್ಯ- ಅಭೂತಪೂರ್ವ. 1902ರ ಅಕ್ಟೋಬರ್ 10ರಂದು ಜನಿಸಿದರು. ತಂದೆ ಶೇಷ ಕಾರಂತ ತಾಯಿ ಲಕ್ಷ್ಮಮ್ಮ. ಕುಂದಾಪುರದಲ್ಲಿ ಪ್ರೌಢಶಾಲಾ ವ್ಯಾಸಂಗವನ್ನು ಮುಗಿಸಿ ಮಂಗಳೂರಿನ ಸರ್ಕಾರಿ ಕಾಲೇಜನ್ನು ಸೇರಿದಾಗಲೆ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಧುಮುಕಿದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಪ್ರವೇಶಿಸದ ಕ್ಷೇತ್ರವಿಲ್ಲ. ಅವರು ಸರ್ಕಾರದಲ್ಲಿ ಅಥವಾ ಇತರರ ಆಶ್ರಯದಲ್ಲಿ ದುಡಿಯಲಿಲ್ಲ. ಒಂಟಿಸಲಗದಂತೆ ನಡೆದರು, ವ್ಯಾಪಾರ ಮಾಡಿದರು, ವಸಂತ, ವಿಚಾರವಾಣಿ ಪತ್ರಿಕೆ ನಡೆಸಿದರು. ಬಾಲವನ ಸ್ಥಾಪಿಸಿದ್ದರು. ಚಲನಚಿತ್ರ , ಯಕ್ಷಗಾನ ಪ್ರಯೋಗಗಳನ್ನು ನಡೆಸಿದ್ದರು, ಹೀಗೆ ...
READ MORE