ಅದೃಷ್ಟದ ಅಂಚಿನಲ್ಲಿ

Author : ಹೆಚ್.ಜಿ. ರಾಧಾದೇವಿ

Pages 220

₹ 38.00




Year of Publication: 1994
Published by: ಕೀರ್ತಿ ಪ್ರಕಾಶನ

Synopsys

ಹೆಚ್.ಜಿ. ರಾಧಾದೇವಿ ಅವರ `ಅದೃಷ್ಟದ ಅಂಚಿನಲ್ಲಿ' ಕಾದಂಬರಿಯ ನಾಯಕಿ ಶಾರದೆ, ಸಾಧಾರಣ ರೂಪಿನವಳು. ತಾಯಿಯ ಪ್ರೀತಿ ಕಾಣದೇ, ಮಲತಾಯಿಯ ದಬ್ಬಾಳಿಕೆಯಲ್ಲಿ ಬೆಳೆದವಳು. ಸೋದರತ್ತೆಯ ಪ್ರಯತ್ನದಿಂದ ಅವಳಿಗೆ ಮದುವೆಯೆಂಬ ಸಂಸ್ಕಾರವಾಗುತ್ತದೆ. ಆದರೆ ಪತಿಯಿಂದ ಒಂದು ಪ್ರೀತಿಯ ಮಾತು, ಆದರ ಅವಳಿಗೆ ದೊರೆಯುವುದಿಲ್ಲ. ತುಂಬು ಕುಟುಂಬದಲ್ಲಿ ಎಲ್ಲರ ಉದಾಸೀನಕ್ಕೆ ಗುರಿಯಾಗಿದ್ದ ಪತಿ ರಮೇಶನ ದೆಸೆಯಿಂದ, ಶಾರದೆಗೂ ಆ ಮನೆಯಲ್ಲಿ ಗೌರವವಿಲ್ಲ. ಆದರೂ ಅವಳ ದೈತ್ಯ ದುಡಿತದಿಂದ ಓರಗಿತ್ತಿಯರಿಗೆ ಬೇಕಾದವಳಾಗುತ್ತಾಳೆ. ಹೀಗೆ, ಜೀವನದಲ್ಲಿ ಪ್ರೀತಿ, ಆದರಗಳನ್ನೇ ಕಾಣದ ಶಾರದೆಗೆ, ಭವಿಷ್ಯದ ಭರವಸೆಯಾಗಿ ಮಗನೊಬ್ಬ ಹುಟ್ಟುತ್ತಾನೆ. ಜೀವನದ ಎಲ್ಲಾ ನಿರಾಶೆಗಳನ್ನು ಮರೆತು, ಬದುಕಿನ ಗುರಿಯನ್ನು ಮಗನ ಭವಿಷ್ಯ ರೂಪಿಸವ ಕಡೆಗೇ ನೆಟ್ಟು ನಿಲ್ಲುತ್ತಾಳೆ ಶಾರದೆ. ಮಗನ ನಗುವಲ್ಲಿ ಸಾರ್ಥಕ್ಯ ಕಾಣುತ್ತಾಳೆ.

About the Author

ಹೆಚ್.ಜಿ. ರಾಧಾದೇವಿ
(30 January 1952 - 09 November 2006)

ಕನ್ನಡ ಕಾದಂಬರಿಗಾರ್ತಿ ಹೆಚ್. ಜಿ.ರಾಧಾದೇವಿ ಅವರು ತಮ್ಮ ವೃತ್ತಿ ಜೀವನದಲ್ಲಿ 30ಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿದ್ದಾರೆ. ಹುಟ್ಟಿದ್ದು ಕೋಲಾರ ಜಿಲ್ಲೆಯ ಶಿಡ್ಲಘಟ್ಟದಲ್ಲಿ. ತಂದೆ ಗೋಪಿನಾಥಾಚಾರ್‌. ಪ್ರಾಥಮಿಕ ಶಾಲಾ ಶಿಕ್ಷಕರು.ಕೋಲಾರದಲ್ಲಿ ಸರಕಾರಿ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ.-ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು.  ಮುಂದಿನ ಓದಿಗೆ ತಡೆಯುಂಟಾಗಿ, ಮನೆ ಪಾಠ ಆರಂಭಿಸಿದರು.ಈ  ಅನುಭವವೇ ಶಾಲಾ ಶಿಕ್ಷಕಿಯಾಗುವ ಅವಕಾಶಕ್ಕೆ ದಾರಿಯಾಯಿತು. ದುಡಿಯುವ ಮಹಿಳಾ ವರ್ಗ ಕುರಿತ ಅನೆಕ ಸಮಸ್ಯೆಗಳನ್ನು ತಮ್ಮ ಕತೆ ಕಾದಂಬರಿಗಳ ಮೂಲಕ ಬೆಳಕು ಚೆಲ್ಲಿದ್ದು, ಈ ಬಗ್ಗೆ ಹಲವಾರು ಲೇಖನಗಳನ್ನು ಸಹ ಬರೆದಿದ್ದಾರೆ. ‘ಅನುರಾಗ ಅರಳಿತು, ಒಲವಿನ ಸುಧೆ ಒಲಿದು ಬಂದ ಅಪ್ಸರೆ, ಕತ್ತಲಲ್ಲಿ ಕಂಡ ಮಿಂಚು, ...

READ MORE

Related Books