ಮಮತೆಯ ಸಂಕೋಲೆ

Author : ಸಾಯಿಸುತೆ (ರತ್ನಾ ಅಶ್ವತ್ಥನಾರಾಯಣ)

Pages 146

₹ 95.00




Published by: ಸುಧಾ ಎಂಟರ್‍ ಪ್ರೈಸಸ್
Address: #3036, 5ನೇ ಮುಖ್ಯರಸ್ತೆ, ಬಿ.ಎಸ್.ಕೆ 2ನೇ ಹಂತ, 14ನೇ ಕ್ರಾಸ್ ರೋಡ್, ತ್ಯಾಗರಾಜ್ ನಗರ, ಬೆಂಗಳೂರು-560095
Phone: 98454 49811

Synopsys

ಈ ಕಾದಂಬರಿಯಲಿ ತಂದೆಯ ಉದಾರ ಗುಣದ ಕಥೆ ವ್ಯಥೆ ಇದೆ.ಶಾಂತ, ಶೋಭ ಕಾಲೇಜು ಗೆಳತಿ. ಮಧುಕರ, ಶೋಭಳ ಸಹೋದರ.... ಒಮ್ಮೆ ಶೋಭಳನ್ನು ನೋಡಲು ಶಾಂತ ಬಂದಾಗ ಒಂದು ಅನಾಹುತ ನಡೆದು ಹೋಯಿತು. ಅಪಘಾತ ಒಂದು ಅಪಘಾತ ಅಷ್ಟೆ ಅಲ್ವಾ.ಕೃಷ್ಣಸ್ವಾಮಿ ಶಾಂತಿ ತಂದೆ. ಅಂತಹ ವ್ಯಕ್ತಿ ಎಲ್ಲರಿಗೂ ಸಿಗಬೇಕು.ಶಾಂತಳ ತಪ್ಪಿಲ್ಲದ ಅನಾಹುತಕೆ ಅವಳನ್ನು ಏನೂ ಅನ್ನದೆ, ಆಡದೆ ಅವಳನ್ನು ಚನ್ನಾಗಿ ನೋಡಿಕೊಂಡರು.ದೀಪು ಶಾಂತಳ ಬದುಕಿಗೆ ಬಂದು ಮನೆಗೆ ನಗು ಪಸರಿಸಿದ.ದೀಪು, ಶಾಂತ ಮಧುಕರನನ್ನು ಒಂದಾಗಿಸಿದನೇ? ಮಧು ಮದುವೆ ನೀನಾಳ ಜೊತೆಗಾಯಿತೇ? ಕೆಲವೊಮ್ಮೆ ತಪ್ಪು ಮಾಡದ ಹೆಣ್ಣಿಗೆ ತಾಯ್ತನದ ಶಿಕ್ಷೆ? ಇವೆಲ್ಲದಕ್ಕೂ ಉತ್ತರ ೀ ಕಾದಂಬರಿಯಲ್ಲಿದೆ.

About the Author

ಸಾಯಿಸುತೆ (ರತ್ನಾ ಅಶ್ವತ್ಥನಾರಾಯಣ)
(20 August 1942)

ಕನ್ನಡ ಕಾದಂಬರಿ ಲೋಕದ ಅನನ್ಯ ಪ್ರತಿಭೆ ಸಾಯಿಸುತೆ. ತಮ್ಮ ಕಾದಂಬರಿಗಳ ಮೂಲಕ ಹೆಂಗಳೆಯರ ಮೆಚ್ಚುಗೆಗೆ ಪಾತ್ರವಾದ ಲೇಖಕಿ. ಅವರು ಕನ್ನಡ ಓದುಗ ವಲಯ ವಿಸ್ತರಿಸಿದ ಬರಹಗಾರ್ತಿ ಕೂಡ. ಸಾಯಿಸುತೆ ಅವರು ಕೋಲಾರದಲ್ಲಿ 1942ರ ಆಗಸ್ಟ್ 20ರಂದು ಜನಿಸಿದರು. ಅವರ ಹೆಸರು ರತ್ನ. ’ಸಾಯಿಸುತೆ’ ಎಂಬುದು ಕಾವ್ಯನಾಮ. ತಂದೆ ವೆಂಕಟಪ್ಪ ಮತ್ತು ತಾಯಿ ಲಕ್ಷಮ್ಮ.  ಕೋಲಾರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು. ಓದುವ ಹಂಬಲದಿಂದ ಕಾಲೇಜು ಮೆಟ್ಟಿಲೇರಿದ್ದರು. ಆದರೆ, 16ನೇ ವಯಸ್ಸಿಗೆ ಮದುವೆಯಾದರು. ಅವರಿಗೆ ನೆರವಾದವರು ಸಾಹಿತ್ಯಪ್ರೇಮಿ ಪತಿ ಅಶ್ವತ್ಥನಾರಾಯಣ. ಮನೆಯಲ್ಲಿದ್ದ ಸಾಹಿತ್ಯ ಪುಸ್ತಕಗಳನ್ನು ಓದುತ್ತಾ ಸಾಹಿತ್ಯದ ಒಲವು ...

READ MORE

Related Books