ಆನು ನಿನ್ನ ಹಾಡಿದಲ್ಲದೆ ಸೈರಿಸಲಾರೆನಯ್ಯಾ

Author : ಸಂಧ್ಯಾರಾಣಿ

Pages 160

₹ 150.00




Year of Publication: 2019
Published by: ಅಲಂಪು ಪ್ರಕಾಶನ
Address: 467, 16ನೇ ಕ್ರಾಸ್, ಬಿ.ಇ.ಎಂ.ಐ ಲೇಔಟ್ ಫಸ್ಟ್ ಸ್ಟೇಜ್, ಬಸವೇಶ್ವರ ನಗರ, ಬೆಂಗಳೂರು- 560079
Phone: 9742003323

Synopsys

‘ಆನು ನಿನ್ನ ಹಾಡಿದಲ್ಲದೆ ಸೈರಿಸಲಾರೆನಯ್ಯಾ’ ಕೃತಿ ಕನ್ನಡದ ಸೃಜನಶೀಲ ಕವಿಗಳಾದ ಎನ್. ಸಂಧ್ಯಾರಾಣಿ ಹಾಗೂ ಭಾರತಿ ಬಿ. ವಿ ಅವರ ಸಂಯುಕ್ತ ಕವನ ಸಂಕಲನ. ಕನ್ನಡದ ಮಟ್ಟಿಗೆ ಹೊಸ ಪ್ರಯೋಗ. ಹಲವು ಕವಿಗಳು ಕೂಡಿ ಕವಿತೆಗಳ ಸಂಕಲನವನ್ನು ಪ್ರಕಟಿಸುವುದು ರೂಢಿಯಲ್ಲಿರುವ ಪದ್ಧತಿ ಸರಿಯೇ ಸರಿ. ಆದರೆ ಇಬ್ಬರು ಕವಿಗಳು ಒಂದೊಂದು ಪ್ರತ್ಯೇಕ ಕವಿತಾ ಸಂಕಲನವಾಗುವಷ್ಟು ಕವಿತೆಗಳನ್ನು ಒಟ್ಟು ಮಾಡಿ ಪ್ರಕಟಿಸಿರುವುದು ಈ ಕೃತಿಯ ಮಟ್ಟಿಗೆ ವಿಶೇಷ. ಅಲ್ಲದೆ, ಈ ಸಂಯುಕ್ತ ಕವಿತಾ ಸಂಕಲನ ಒಂದು ನಿರ್ದಿಷ್ಟ ವಸ್ತುವೊಂದನ್ನು (ಹೆಣ್ಣುಗಂಡಿನ ಸಂಬಂಧ) ಕುರಿತು ತಾವು ತೀವ್ರವಾಗಿ ಪರಿಭಾವಿಸಿ ಬರೆದ ಮನೋಯಾನಗಳ ಹಾಗೂ ಅನುಭವ ಪ್ರಯಾಣಗಳ ಅಗ್ನಿದಿವ್ಯದಂತಹ ನಿರೂಪಣೆಗಳ ಸಂಕಲನವಾಗಿರುವುದು ಇನ್ನೊಂದು ವಿಶೇಷ. ಇಲ್ಲಿ ಸಂಕಲಿತವಾದ ಕವಿತೆಗಳಲ್ಲಿ ಒಳ ಸಂವಾದಗಳು ಇರುವಂತೆ ಈ ಇಬ್ಬರ ಕವಿತೆಗಳ ನಡುವೆಯೂ ಸಂವಾದಗಳು ಏರ್ಪಡುವ ಮಾದರಿಗಳನ್ನು ಕಾಣಬಹುದು. ಇಬ್ಬರು ಸಮಕಾಲೀನ ಕವಿಗಳು ಹೀಗೆ ಜಿದ್ದಿಗೆ ಬಿದ್ದಂತೆ ಅನಾದಿಯಿಂದ ಮನುಷ್ಯಲೋಕ ಶೋಧಿಸುತ್ತಿರುವ ಸಂಗತಿಯನ್ನೇ ಬೆನ್ನುಹತ್ತಿ ಹಲ್ಲು ಕಚ್ಚಿ ಬರೆದಿರುವುದು ಸೋಜಿಗವಾಗಿದೆ. ಆದ ಕಾರಣ, ಇದು ಕನ್ನಡ ಕಾವ್ಯಲೋಕದಲ್ಲಿ ಒಂದು ಅಪರೂಪದ ಪ್ರಯೋಗವೆಂದೇ ಹೇಳಬೇಕು.

About the Author

ಸಂಧ್ಯಾರಾಣಿ

ಪತ್ರಕರ್ತೆ, ಲೇಖಕಿ, ಸಿನಿಮಾ ವಿಮರ್ಶಕಿ ಸಂಧ್ಯಾರಾಣಿ ಅವರು ಕೋಲಾರ ಜಿಲ್ಲೆಯ ಬಂಗಾರಪೇಟೆಯವರು. ಚಿನ್ನದ ಗಣಿ ಕೆ.ಜೆ.ಎಫ್‌ನಲ್ಲಿ ಪದವಿ ಶಿಕ್ಷಣ ಪಡೆದಿರುವ ಇವರು ಪ್ರಸ್ತುತ ಹವ್ಯಾಸಿ ಪತ್ರಕರ್ತೆಯಾಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ಕೆಲವು ಇ-ಪತ್ರಿಕೆಗಳ ಅಂಕಣಕಾರ್ತಿಯಾಗಿರುವ ಇವರು ಬರೆದಿರುವ ಪ್ರಮುಖ ಕೃತಿಗಳೆಂದರೆ ಯಾಕೆ ಕಾಡುತಿದೆ ಸುಮ್ಮನೆ(ಅಂಕಣ ಬರಹಗಳು), ತುಂಬೆ ಹೂ (ಜೀವನ ಚರಿತ್ರೆ), ಪೂರ್ವಿ ಕಲ್ಯಾಣಿ  (ನಾಟಕ) ಮುಂತಾದವು. ರಾಷ್ಟ್ರ ಪ್ರಶಸ್ತಿ ವಿಜೇತ ನಾತೀಚರಾಮಿ ಸಿನಿಮಾಕ್ಕೆ ಚಿತ್ರಕತೆ ಬರೆದಿದ್ದರು. ...

READ MORE

Related Books