ನಿನ್ನ ಮರೆಯೂ ಮಾತು

Author : ಸಿದ್ಧಲಿಂಗ ಪಟ್ಟಣಶೆಟ್ಟಿ

Pages 68

₹ 50.00




Year of Publication: 2011
Published by: ಅನನ್ಯ ಪ್ರಕಾಶನ, ಧಾರವಾಡ
Address: ಹೂಮನೆ, ಶ್ರೀದೇವಿನಗರ, ವಿದ್ಯಾಗಿರಿ, ಧಾರವಾಡ-580004
Phone: 94488 61604

Synopsys

ಹಿರಿಯ ಕವಿ ಸಿದ್ಧಲಿಂಗ ಪಟ್ಟಣಶೆಟ್ಟರು ಬರೆದ ಹಾಡುಗಳನ್ನು ಈ ಸಂಕಲನದಲ್ಲಿ ಸೇರಿಸಲಾಗಿದೆ.  ಒಟ್ಟು 44 ಹಾಡುಗಳಿವೆ. ನವ್ಯದ ಅಬ್ಬರದ ಕಾಲದಲ್ಲಿ ಕವಿತೆ ಬರೆದ ಪಟ್ಟಣಶೆಟ್ಟರು ತಮ್ಮ ಸ್ನೇಹಿತರಿಗಿಂತ ಭಿನ್ನವಾದ ನೆಲೆಯಲ್ಲಿ ಕವಿತೆ ಕಟ್ಟಲು ಯತ್ನಿಸಿದವರು. ಹಾಗಾಗಿ ಅವರಿಗೆ ಗೇಯ ಗೀತೆಗಳು ವರ್ಜ್ಯ ಎಂದೆನಿಸಲಿಲ್ಲ. ಅವರ ವಿವಿಧ ಸಂಕಲನಗಳಲ್ಲಿ ಪ್ರಕಟವಾಗಿರುವ ಹಾಗೂ ಆಕಾಶವಾಣಿ ಸೇರಿದಂತೆ ವಿವಿಧ ಕಡೆಗಳಲ್ಲಿ ಪ್ರಸಾರವಾದ-ಹಾಡುಗಳನ್ನು ಈ ಸಂಕಲನದಲ್ಲಿ ಒಂದೆಡೆ ತರಲಾಗಿದೆ.

ಒಂದು ಹಾಡು- ಹೀಗಿದೆ

ಕಾಳಿಂಗ ಸರ್ಪಗಳ ಹೆಡಿ ಮೆಟ್ಟಿ ಹಾಡೇನು

ಯೌವನವ ಹೆಡಮುರಗಿ ಕಟ್ಟಿ ತುಳಿದಾಡೇನು ನಿನ್ನ ಮದುವೆಯ ರಾತ್ರಿ ಮೆರವಣಿಗೆಯಾಗುತಿರೆ ಕಣ್ಣ ಗುಡ್ಡಿಗಳ ಹಿಲಾಲನ್ನೇ ಹಿಡಿದೇನು ನಿನ್ನ ಮರೆಯೂ ಮಾತು ಮರೆತು ಬಿಡು ನೀನು!

ಕರುಳ ಸೀಮಂತ ಮಣಿ ಕುರುಳೊಳಗೆ ಇನ್ನೇನು ತೆಯ್ದು ನನ್ನೆಲುವುಗಳ ಬೆಂಡೋಲೆಯಿಟ್ಟೇನು ಸರಿಯಾಚೆ ತೊಲಗೆಂದು ನೀ ನೂಕಿ ತಳ್ಳಿದರು ದೈನ್ಯದಲಿ ನಿನ್ನೆದೆಯ ಬಾಗಿಲವ ತಟ್ಟೇನು ನಿನ್ನ ಮರೆಯೂ ಮಾತು ಮರೆತು ಬಿಡು ನೀನು!

ಡಬಗಳ್ಳಿ ಮೆಳೆಯೊಳಗೆ ಅಳುಅಳುಕಿ ಸತ್ತೇನು ನನ್ನ ರಕುತವ ಹೀರಿ ಒಳಗೊಳಗೆ ಅತ್ತೇನು ರಾತ್ರಿಯಂಗಿಯ ತೊಟ್ಟು ಸ್ವರ್ಗ ನರಕದ ಮೆಟ್ಟು ಮೆಟ್ಟಿ ನಿಮ್ಮನೆ ಕಟ್ಟಿ ದಿನವೂನು ಹತ್ತೇನು ನಿನ್ನ ಮರೆಯೂ ಮಾತು ಮರೆತು ಬಿಡು ನೀನು!

ಕವನಗಳ ಬೋರಂಗಿ ಹಿಡಿಹಿಡಿದು ನಕ್ಕೇನು ಕುತಗಿ ಮಟ ಕೆಸರಾಗ ಗಕ್ಕನೇ ಸಿಕ್ಕೇನು ಎಲ್ಲಿ ಹೋದರು ಕೂಡ ಏನಾದರೂ ಕೂಡ ನಿನ್ನ ನೆನಪಿನ ಅಡವಿ ತಿರುತಿರುಗಿ ಹೊಕ್ಕೇನು ನಿನ್ನ ಮರೆಯೂ ಮಾತು ಮರೆತು ಬಿಡು ನೀನು!

About the Author

ಸಿದ್ಧಲಿಂಗ ಪಟ್ಟಣಶೆಟ್ಟಿ
(03 November 1939)

ಕವಿ-ಅನುವಾದಕ-ಅಂಕಣಕಾರರಾಗಿ ಚಿರಪರಿಚಿತರಿರುವ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರು ಜನಿಸಿದ್ದು 1939ರ ನವಂಬರ್ ೩ರಂದು. ಧಾರವಾಡ ಸಮೀಪದ ಯಾದವಾಡ ಎಂಬ ಹಳ್ಳಿಯಲ್ಲಿ ಜನಿಸಿದ ಅವರು ಒಂದೂವರೆ ವರ್ಷದವರಿರುವಾಗಲೇ ತಂದೆಯನ್ನು ಕಳೆದುಕೊಂಡರು. ಕಡು ಬಡತನದಿಂದಾಗಿ ತಾಯಿಯ ತವರು ಮನೆ ಮನಗುಂಡಿ ಸೇರಿದರು. ಚಹಾ ಅಂಗಡಿಯಲ್ಲಿ ಕೆಲಸ ಮಾಡುತ್ತ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದರು. ಶಿಕ್ಷಣ ಮುಂದುವರಿಸುವ ದೃಢ ಸಂಕಲ್ಪದಿಂದ ತಾಯಿಯೊಂದಿಗೆ ಮತ್ತೆ ಧಾರವಾಡಕ್ಕೆ ಬಂದ ಅವರು  ಹಿಂದೀ ಎಂ.ಎ., ಪಿಎಚ್.ಡಿ. ಪದವಿಗಳನ್ನು ಪಡೆದರು. ಒಂದು ವರ್ಷ ಹೈಸ್ಕೂಲ್ ಶಿಕ್ಷಕ, ಒಂದು ವರ್ಷ ಶಿರಸಿ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದು, 1966 ರಿಂದ 1999ರ ವರೆಗೆ ಕರ್ನಾಟಕ ...

READ MORE

Related Books