ದೀಪ ಸಾಲಿನ ನಡುವೆ

Author : ಕೆ.ಎಸ್. ನರಸಿಂಹಸ್ವಾಮಿ

Pages 88

₹ 100.00




Year of Publication: 2003
Published by: ಅಭಿನವ ಪ್ರಕಾಶನ
Address: ಮುಖ್ಯರಸ್ತೆ, ಮಾರೇನಹಳ್ಳಿ, 17/18-2, 1ನೇ ವಿಜಯನಗರ, ಬೆಂಗಳೂರು -560040
Phone: 9448804905

Synopsys

ಪ್ರೇಮ ಕವಿ ಎಂದೇ ಪ್ರಸಿದ್ದರಾದ ಕೆ.ಎಸ್. ನರಸಿಂಹಸ್ವಾಮಿ ಅವರ ಕವನ ಸಂಕಲನ ’ದೀಪ ಸಾಲಿನ ನಡುವೆ’.

ವಿಮರ್ಶಕ ಡಿ. ಆರ್‍ ನಾಗರಾಜ್ ಅವರು ಕೆ.ಎಸ್. ನ ಕವಿತೆಗಳ ಬಗ್ಗೆ ಹೇಳುತ್ತಾ ’ಸಂಸಾರವೆನ್ನುವುದು  ಕೆ.ಎಸ್. ನರಸಿಂಹಸ್ವಾಮಿಯವರ ಕಾವ್ಯದ ಕೇಂದ್ರ ರೂಪಕ’ ಎಂದಿದ್ದಾರೆ.

ಕವಿ ಮೈಸೂರು ಮಲ್ಲಿಗೆಯಲ್ಲಿ ಕಂಡ ಪ್ರೀತಿಯ ಹೆಣ್ಣಿಗೆ ಇತ್ತೀಚೆಗೆ ಬರೆದ ಕವಿತೆಗಳೂ ಈ ’ದೀಪ ಸಾಲಿನ ನಡುವೆ’ ಸಂಗ್ರಹದಲ್ಲಿ ಕಾಣಬಹುದು.  ಲೋಕ ಚೆನ್ನಾಗಿರಲಿ, ಬಡವರಿಗೆ ಅನ್ನ ಸಿಗಲಿ, ಯುದ್ದಗಳಿಲ್ಲದೆ  ಇರಲಿ, ಎನ್ನುವ  ಅವರ ಧೋರಣೆ ಅವರ ಕಾವ್ಯದ ವಸ್ತುಗಳಾಗಿವೆ.

ಬದುಕಿನಲ್ಲಿರುವ ಚೆಲುವು ಮಾಸದೆ ಇರಲಿ ಎನ್ನುವ ಅವರ ಜೀವನಪ್ರೀತಿ ಅವರ ಕಾವ್ಯದಲ್ಲೂ ಧ್ವನಿಸುತ್ತದೆ.  ಮತ್ತಷ್ಟು ಕವಿತೆಗಳಲ್ಲಿ ಮನುಷ್ಯನನ್ನು ಕಾಡುವ ದೇವರು, ಸಾವು, ನೋವು, ಬದುಕಿನ ಅರ್ಥ, ಬಡತನ ಇವೆಲ್ಲವೂ ನರಸಿಂಹಸ್ವಾಮಿಯವರನ್ನು ಕಾಡಿದ ಪರಿ ಅವರ ಇಲ್ಲಿನ ಕವಿತೆಗಳಲ್ಲಿ ಮನಗಾಣಬಹುದು.

About the Author

ಕೆ.ಎಸ್. ನರಸಿಂಹಸ್ವಾಮಿ
(26 January 1915 - 28 December 2003)

ಮೈಸೂರ ಮಲ್ಲಿಗೆಯ ಕವಿಯೆಂದು ಪ್ರಖ್ಯಾತರಾಗಿ ಮನೆಮಾತಾದ ಕೆ.ಎಸ್. ನರಸಿಂಹಸ್ವಾಮಿ ಅವರು (ಕಿಕ್ಕೇರಿ ಸುಬ್ಬರಾಯ ನರಸಿಂಹಸ್ವಾಮಿ) ಮಂಡ್ಯ ಜಿಲ್ಲೆಯ ಕಿಕ್ಕೇರಿಯಲ್ಲಿ 1915ರ ಜನೆವರಿ 26ರಂದು ಜನಿಸಿದರು. ತಂದೆ ಸುಬ್ಬರಾಯ, ತಾಯಿ ನಾಗಮ್ಮ. ಮೈಸೂರಿನ ಮಹಾರಾಜ ಹೈಸ್ಕೂಲು, ಇಂಟರ್ ಮೀಡಿಯೇಟ್ ಕಾಲೇಜ್ ಮತ್ತು ಬೆಂಗಳೂರಿನ ಸೆಂಟ್ರಲ್ ಕಾಲೇಜುಗಳಲ್ಲಿ ಓದಿದ ಅವರು ಆರ್ಥಿಕ ತೊಂದರೆಗಳಿಂದ ಡಿಗ್ರಿ ವ್ಯಾಸಂಗವನ್ನು ಪೂರ್ಣ ಮಾಡಲಾಗಲಿಲ್ಲ. 22ನೇ ವಯಸ್ಸಿನಲ್ಲಿ ಗುಮಾಸ್ತೆ ಹುದ್ದೆಗೆ ಸೇರಿದ್ದರು. ಆ ವೇಳೆಗೆ ತಿಪಟೂರಿನ ವೆಂಕಮ್ಮನವರೊಂದಿಗೆ ವಿವಾಹವಾಗಿತ್ತು. ತಮ್ಮ ವೃತ್ತಿಜೀವನದ ಕಾಲದಲ್ಲಿ ಮೈಸೂರು, ನಂಜನಗೂಡು, ಬೆಂಗಳೂರುಗಳಲ್ಲಿ ಬೇರೆ ಬೇರೆ ಇಲಾಖೆಗಳಲ್ಲಿ ಸರಕಾರಿ ನೌಕರರಾಗಿ ದುಡಿದು ...

READ MORE

Related Books