ಮಣ್ಣೇ ಮೊದಲು

Author : ಎಸ್. ಗುರುಬಸವರಾಜ (ಪಾಪು ಗುರು)

Pages 96

₹ 120.00




Year of Publication: 2023
Published by: ವೀರಲೋಕ ಬುಕ್ಸ್
Address: ವೀರಲೋಕ ಬುಕ್ಸ್‌ ಪ್ರೈವೇಟ್‌ ಲಿಮಿಟೆಡ್‌, 207, 2ನೇ ಮಹಡಿ, 3ನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು-560018
Phone: +91 7022122121

Synopsys

‘ಮಣ್ಣೇ ಮೊದಲು’ ಪಾಪುಗುರು ಅವರ ರಚನೆಯ ಕವನ ಸಂಕಲನವಾಗಿದೆ. ಬದುಕು ಬಗಣಿಗೂಟ ನಮಗಾಗಿ ಅದನ್ನು ಕೆತ್ತುವವರಿದ್ದಾರೆ, ಇನ್ನೂ ಕೆಲವರು ಬಡಿಯಲು ಕಾಯುತ್ತಾರೆ ಅದರಲ್ಲೂ ಮುಖ್ಯವಾಗಿ ಈಗಾಗಲೇ ಕೆತ್ತಿಕೊಂಡ ಹಲವರು ರೆಡಿಯಿದ್ದಾರೆ. ಆದರೆ ಬಗಣಿಗೂಟಕ್ಕೂ ಈ ಹಿಂದೆ ಜೀವವಿತ್ತು ನೂರಾರು ಪ್ರಾಣಿಪಕ್ಷಿಗಳಿಗೆ ಆಸರೆಯಾಗಿತ್ತು. ಈಗ ಅದಕ್ಕೆ ಯಾವುದು ನೆನಪಿಲ್ಲ ಮೇಲಿನವರಿಲ್ಲರಿಗೂ ಇದರ ಅರಿವಿದೆ. ಬದುಕು ನಾವಂದುಕೊಂಡತೆ ನಡೆಯುವುದಿಲ್ಲ ಅದು ತಕ್ಕಡಿಯ ಮೇಲಿನ ಕಪ್ಪೆಯಂತೆ ಅದನ್ನು ಅದೆಷ್ಟು ಹಿಡಿದು ನಿಲ್ಲಿಸಲು ಸಾಧ್ಯ. ಈ ವಿಪರ್ಯಾಸದ ನಡುವೆ ನಮ್ಮ ಆತ್ಮೀಯ ಜೀವಗಳು ಆಕಸ್ಮಿಕವಾಗಿ ಮರೆಯಾದರೆ ನಮ್ಮೊಳಗಿನ ನೋವುಗಳು ಮುದ್ದೆಯೊಳಗಿನ ಗಂಟಂತೆ ಗುಪ್ತವಾಗಿ ಕುಳಿತಿರುತ್ತವೆ. ಮುದ್ದೆಯ ರುಚಿಯನ್ನು ಆಸ್ವಾದಿಸುವ ಕೆಲವರಿಗೆ ಮಾತ್ರ ತಿಳಿಯುತ್ತದೆ. ಕೆಲವರು ಅದಾವುದರ ಅರಿವಿಲ್ಲದೆ ನುಂಗಿ ಬಿಡುತ್ತಾರೆ. ಆ ಗಂಟುಗಳು ಉದರದೊಳಗೆ ಒದ್ದಾಡುವ ಪರಿಗೆ ಕವಿತೆ ಎನ್ನಬೇಕೋ..? ತಿಳಿದಿಲ್ಲ ಎನ್ನುತ್ತಾರೆ ಲೇಖಕ ಪಾಪುಗುರು.

About the Author

ಎಸ್. ಗುರುಬಸವರಾಜ (ಪಾಪು ಗುರು)

ಕಾದಂಬರಿಕಾರ ಎಸ್. ಗುರುಬಸವರಾಜ (ಪಾಪು ಗುರು) ಅವರದ್ದು ಮೂಲತಃ ದಾವಣಗೆರೆ. 1981ರಲ್ಲಿ ಜನಿಸಿದರು. ತಂದೆ - ಎಚ್. ಕೆ. ಶಿವಲಿಂಗಪ್ಪ, ತಾಯಿ - ಬಸಮ್ಮ. ಪಾಪು ಗುರು ಅವರು ವೃತ್ತಿಯಲ್ಲಿ ಮರಗೆಲಸಗಾರ ಹಾಗೂ ಪತ್ರಿಕಾವಿತರಕ. ಪ್ರವೃತ್ತಿಯಲ್ಲಿ ಕವಿ, ಕಾದಂಬರಿಕಾರ. 2018ರಲ್ಲಿ ಪ್ರಕಟವಾದ ಇವರ ಚೊಚ್ಚಲ ಕೃತಿ ‘ಮುಳ್ಳೆಲೆಯ ಮದ್ದು’ ಕವನಸಂಕಲನ ಬೆಂಗಳೂರು ಕನ್ನಡ ಪುಸ್ತಕ ಪ್ರಾಧಿಕಾರ ಇವರ ಪ್ರೋತ್ಸಾಹ ಧನ ಲಭಿಸಿದೆ. ...

READ MORE

Related Books