ಶಿಶುನಾಳ ಶರೀಫ್ ಸಾಹೇಬರ ಗೀತೆಗಳು

Author : ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ

Pages 154

₹ 13.00




Published by: ಕ್ಷಮ ಪ್ರಕಾಶನ
Address: 22 ನೇ ಕ್ರಾಸ್, ಬಿ.ಎಸ್.ಕೆ 2ನೇ ಹಂತ, ಬೆಂಗಳೂರು. 560070

Synopsys

ಶಿಶುನಾಳ ಶರೀಫರು ಕರ್ನಾಟಕದ ಕಬೀರ್‌ ದಾಸರೆಂದು ಕರೆಸಿಕೊಂಡವರು. ಕರ್ನಾಟಕದ ಮೊದಲ ಮುಸ್ಲಿಂ ಕವಿ ಎಂಬ ಹೆಗ್ಗಳಿಕೆಯು ಶರೀಪರದ್ದೆ. ಶಿಶುನಾಳ ಶರೀಫರ ಎಲ್ಲಾ ರಚನೆಗಳು ಜೀವನಕ್ಕೆ ತೀರಾ ಹತ್ತಿರದ ಸಂಪರ್ಕವಿರುವಂತಹವುಗಳು. ಅವರು ಹೇಳುವ ಘಟನೆಗಳು ತಮ್ಮ ಜೀವನದಲ್ಲಿ ಒಂದಲ್ಲಾ ಒಂದು ಸಲ ನಡೆದು ಅನುಭವ ಪಡೆದಂತಹವುಗಳು. ಎಲ್ಲವೂ ಮಾನವನ ಜೀವನ ಮತ್ತು ಪ್ರಕೃತಿಗೆ ಸಂಭಂಧಪಟ್ಟ ವಿಷಯಗಳು. ನಿರೂಪಣೆ ತೀರಾ ಸರಳ. ಗ್ರಾಮ ಜೀವನವನ್ನು ಹಿನ್ನಲೆಯಾಗಿಟ್ಟುಕೊಂಡು ವರ್ಣಿಸಿರುವ ಅಪೂರ್ವ ಘಟನೆಗಳು, ಭಗವಂತನ ಬಗೆಗೆ ಅನನ್ಯ ಭಕ್ತಿ ಭಾವವನ್ನು, ಪ್ರೀತಿಯನ್ನು ತೋರಿಸಿ, ಸಮರ್ಪಣಾ ಮನೋಭಾವದಿಂದ ರಚಿತವಾಗಿರುವ ಅವರ ಹಾಡುಗಳು ಬಹುಮಟ್ಟಿಗೆ ಆಶು ಕವಿತೆಗಳಾಗಿವೆ.

ಕವಿಯಾಗಿ, ವಿಮರ್ಶಕರಾಗಿ ಹೆಸರಾಗಿರುವ ಲಕ್ಷ್ಮೀನಾರಾಯಣ ಭಟ್ಟ ಅವರು ಈ ಕೃತಿಯನ್ನು ರಚಿಸಿದ್ದಾರೆ. ಈ ಕೃತಿಯಲ್ಲಿ ಶರೀಫರ 80 ಉತ್ತಮ ಕವಿತೆಗಳನ್ನು ಆಯ್ಕೆ ಮಾಡಿಕೊಂಡು ಅರ್ಥ ಸಹಿತ ನೀಡಲಾಗಿದೆ.

About the Author

ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ
(29 October 1936 - 06 March 2021)

ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ನಿವೃತ್ತರಾಗಿರುವ ಪ್ರೊ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ ಕನ್ನಡದ ಜನಪ್ರಿಯ ಕವಿಗಳಲ್ಲಿ ಒಬ್ಬರು. ಮೂಲತಃ ಶಿವಮೊಗ್ಗದವರಾದ ಅವರು ಸದ್ಯ ಬೆಂಗಳೂರು ನಗರದ ನಿವಾಸಿ. ಅವರ ತಂದೆ ಶಿವರಾಮ ಭಟ್ಟ, ತಾಯಿ ಮೂಕಾಂಬಿಕೆ. ಅವರ ಪೂರ್ಣ ಹೆಸರು ನೈಲಾಡಿ ಶಿವರಾಮ ಲಕ್ಷ್ಮೀನಾರಾಯಣ ಭಟ್ಟ. ಅವರು ಕವಿ ಮಾತ್ರವಲ್ಲದೆ ವಿಮರ್ಶಕ ಹಾಗೂ ವಾಗ್ಮಿ. ಅವರ ಭಾವಗೀತೆಗಳು ಕ್ಯಾಸೆಟ್‌ಗಳ ಮೂಲಕಜನಪ್ರಿಯಗೊಂಡಿವೆ. ವೃತ್ತ, ಸುಳಿ, ನಿನ್ನೆಗೆ ನನ್ನ ಮಾತು, ದೀಪಿಕಾ ಮತ್ತು ಬಾರೋ ವಸಂತ (ಕವನ ಸಂಗ್ರಹಗಳು), ಹೊರಳು ದಾರಿಯಲ್ಲಿ ಕಾವ್ಯ (ವಿಮರ್ಶೆ), ಜಗನ್ನಾಥ ವಿಜಯ, ಮುದ್ರಾ ಮಂಜೂಷ, ಕರ್ಣ, ಕುಂತಿ, ಕನ್ನಡ ...

READ MORE

Related Books