ರಂಗದಿಂದೊಂದಿಷ್ಟು ದೂರ ಕೋಟಿತೀರ್ಥ

Author : ಜಯಂತ ಕಾಯ್ಕಿಣಿ

Pages 136

₹ 80.00




Year of Publication: 2008
Published by: ಅಂಕಿತ ಪುಸ್ತಕ
Address: 53, ಶ್ಯಾಮ್ ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು- 560004

Synopsys

‘ರಂಗದಿಂದೊಂದಿಷ್ಟು ದೂರ ಕೋಟಿತೀರ್ಥ’ ಜನಪ್ರಿಯ ಸಾಹಿತಿ ಜಯಂತ ಕಾಯ್ಕಿಣಿ ಅವರ ಕವನ ಸಂಕಲನ. ಇಲ್ಲಿ ಬಸಳೆ ನಾನು, ಅನ್ವರ್ಥ, ಕನ್ನಡಿ, ಸಾವು ಮೂರನೆಯತ್ತೆಯ ಮೊದಲ ಮಳೆ, ಅಸ್ತಿತ್ವ, ಎಲೆಗೆ, ಅಧಿಕಾರ, ಅರಿವು, ಕಾಮ, ಬಿದಿರು, ಭಾವಗೀತೆ, ಬದಲು, ಹೂವು, ಬಟ್ಟ ಬಯಲು, ಆತಂಕ, ರಾತ್ರೆ, ಮಳೆಗಾಳಿ, ನನ್ನ ಕವಿತೆ, ಪ್ರಾಯ, ಬೋರು ಕಣೆ ಲೀನ, ಋತು, ಜಾತ್ರೆ, ಗೆಳೆಯರು, ಮೊಳಕೆ, ನೀನಾಗಲು, ಅರ್ಥ, ತಿಳಿಯಲಿಲ್ಲ, ಅನುಭವ ಇಲ್ಲದ ಕವಿತೆ, ಸೂರ್ಯ, ಚಕ್ರವ್ಯೂಹ ಸೇರಿದಂತೆ ಹಲವು ಕವಿತೆಗಳು ಸಂಕಲನಗೊಂಡಿವೆ.

About the Author

ಜಯಂತ ಕಾಯ್ಕಿಣಿ
(24 January 1955)

ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಜನಿಸಿದ ಜಯಂತ ಅವರ ತಂದೆ ಗೌರೀಶ ಕಾಯ್ಕಿಣಿ ಹೆಸರಾಂತ ವಿಚಾರವಾದಿ ಲೇಖಕ.  ಆಧುನಿಕ ಬದುಕಿನ ಆತಂಕಗಳನ್ನು ಕತೆಯಾಗಿಸುವ ಜಯಂತ ಕಾಯ್ಕಿಣಿ ಅವರು ಕನ್ನಡದ ಪ್ರಮುಖ ಕತೆಗಾರರಲ್ಲಿ ಒಬ್ಬರು.  ’ಕತೆಗಾರ’ ಎಂಬ ವಿಶೇಷಣ ಇದೆಯಾದರೂ ಅವರೊಬ್ಬ ಪ್ರಮುಖ ಕವಿ ಕೂಡ ಹೌದು. ಪ್ರಬಂಧ, ಅಂಕಣ ಬರಹ, ಚಲನಚಿತ್ರ ಸಂಭಾಷಣೆ ಮತ್ತು ಗೀತರಚನೆ ಹೀಗೆ ಹಲವು ಪ್ರಕಾರಗಳಲ್ಲಿ ಹೆಜ್ಜೆಗುರುತು ಮೂಡಿಸಿದ್ದಾರೆ. ’ಭಾವನಾ’ ಮಾಸಿಕ ಪತ್ರಿಕೆಯ ಸಂಪಾದಕರಾಗಿದ್ದ ಜಯಂತ ಅವರು ಈಟಿವಿ ವಾಹಿನಿಗಾಗಿ ’ನಮಸ್ಕಾರ’, ಬೇಂದ್ರೆ, ಕುವೆಂಪು, ಕಾರಂತ ನಮನ ಸರಣಿಯ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ರಂಗದಿಂದೊಂದಿಷ್ಟು ದೂರ, ಕೋಟಿತೀರ್ಥ, ಶ್ರಾವಣ ಮಧ್ಯಾಹ್ನ, ...

READ MORE

Related Books