ರಾಧಾಮಾಧವರ ಒಲುಮೆ ಚಿತ್ತಾರ ( ಭಾವಗೀತೆಗಳು)

Author : ಬಾಗೂರು ಮಾರ್ಕಾಂಡೇಯ

Pages 248

₹ 150.00




Year of Publication: 2011
Published by: ಸಪ್ನ ಬುಕ್ ಹೌಸ್
Address: 3ನೇ ಮುಖ್ಯ ರಸ್ತೆ, ಗಾಂಧಿನಗರ, ಬೆಂಗಳೂರು, 560 009
Phone: 08040114455

Synopsys

ರಾಧಾ ಮಾಧವರ ಒಲುಮೆ ಚಿತ್ತಾರ-ಕವಿ ಬಾಗೂರು ಮಾರ್ಕಾಂಡೇಯ ಅವರ ಭಾವಗೀತೆಗಳ ಸಂಕಲನ.ಒಟ್ಟು 99 ಕವನಗಳಿವೆ. ಕಾವ್ಯಗಳ ಜೊತೆಗೆ ಚಿತ್ರಗಳಿವೆ. ಈ ಕೃತಿಯ ಮತ್ಳುತೊಂದು ವಿಶೇಷವೆಂದರೆ ಮೊದಲು ಚಿತ್ರ ಬರೆದು ನಂತರ ಕಾವ್ಯ ಬರದಿದ್ದು, ಎಲ್ಲ ಕವಿತೆಗಳು ಕೈ ಬರೆಹದಲ್ಲಿರುವುದು ವಿಶೇಷ. 

ರಾಧಾ- ಮಾಧವರ ಪ್ರೀತಿಯ ಕುರಿತಾದ ಮಧುರವಾದ ಕವಿತೆಗಳು. ಅನೇಕ ಕವಿತೆಗಳು ಗೀತೆಗಳಾಗಿವೆ. ಧಾರಾವಾಹಿ ಶೀರ್ಷಿಕೆ ಗೀತೆಗಳಾಗಿ, ಧ್ವನಿಸಾಂದ್ರಿಕೆಗಳಾಗಿವೆ. ಪ್ರೊ ಕೆ ಎಸ್ ನಿಸಾರ್ ಅಹಮದ್ ಹಾಗೂ ಕವಿ ದೊಡ್ಡ ರಂಗೇಗೌಡರು ಕೃತಿಗೆ ಬರೆದ ಮುನ್ನುಡಿಯಲ್ಲಿ ಕವಿತೆಗಳನ್ನು ಪ್ರಶಂಸಿಸಿದ್ದಾರೆ.  

 

About the Author

ಬಾಗೂರು ಮಾರ್ಕಾಂಡೇಯ
(28 June 1966)

ಕವಿ, ಕಲಾವಿದ, ಬಾಗೂರು ಮಾರ್ಕಾಂಡೇಯ ಅವರು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ (ಜನನ: 28-06-1966) ಬಾಗೂರು ಗ್ರಾಮದವರು. ಪರಿಸರ, ಮಕ್ಕಳ ಸಾಹಿತ್ಯ, ಚಿತ್ರಕಲೆ ಸೇರಿದಂತೆ ಸುಮಾರು 54ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ. ಏಕ ವ್ಯಕ್ತಿ ಚಿತ್ರಕಲಾ ಪ್ರದರ್ಶನ, ಬೇರುಗಳು ಚಿತ್ರ ಸರಣಿ ಮೂಲಕ ಪರಿಸರ ಜಾಗೃತಿಗೆ ಶ್ರಮಿಸಿದವರು, ‘ರೇಖೆಗಳಲ್ಲಿ ಭಾವಗೀತೆಗಳು’ ಮೂಲಕ ನೂತನ ಪ್ರಯೋಗಶೀಲತೆ ರೂಢಿಸಿಕೊಂಡವರು. ಕನ್ನಡದ ಸುಲಭ ಕಲಿಕೆಗೆ “ಕನ್ನಡ ಸೌರಭ” ತಂತ್ರಾಂಶ ತಯಾರಿಸಿದ್ದಾರೆ. “ಬಾಗೂರು ಕಲಾ ವೇದಿಕೆ ಟ್ರಸ್ಟ್” ರಚಿಸಿಕೊಂಡು ‘ಕಲಾ ಭೂಷಣ’ ಪ್ರಶಸ್ತಿ ನೀಡುತ್ತಾ ಬಂದಿದ್ದಾರೆ ಕವನ ಸಂಕಲನಗಳು: ರೇಖಾಂತರಂಗದ ಭಾವಗುಸುಮ, ಭಾವಶಿಲ್ಪ, ಭಾವೋನ್ಮಾದಿನಿ, ಭಾವಸಮ್ಮಿಲನ, ಕೊಳಲದನಿ, ಕಾವ್ಯಕನ್ನಿಕೆ,  ಚೈತ್ರ ಚೆಲುವು, ಸುವರ್ಣಪುತ್ಥಳಿ,  ಸ್ವರಸಿರಿಯ ಸ್ನೇಹಲತೆ, ರಾಧಾ ಮಾಧವರ ಒಲುಮೆ ...

READ MORE

Related Books