ಅರಿವು ಅಕ್ಷರದಾಚೆ

Author : ಚಂದ್ರಶೇಖರ ವಸ್ತ್ರದ

Pages 140

₹ 100.00




Year of Publication: 2018
Published by: ಕ್ಷಮಾ ಪ್ರಕಾಶನ
Address: ಬೆಳಗು, ಆನಂದಾಶ್ರಮ ರಸ್ತೆ, ಪಂಚಾಕ್ಷರಿ ನಗರ, ಆರನೇ ಕ್ರಾಸ್, ಗದಗ-582101
Phone: 9448185841

Synopsys

ಚಂದ್ರಶೇಖರ ವಸ್ತ್ರದ ಅವರ ’ ಅರಿವು ಅಕ್ಷರದಾಚೆ’ ಕೃತಿಯು ವಚನ ಚೌಪದಿಯಾಗಿದೆ. ಈ ಕೃತಿಗೆ ಬೆನ್ನುಡಿ ಬರೆದಿರುವ ಗುರುಲಿಂಗ ಕಾಪಸೆ ಅವರು, ಕನ್ನಡದ ನವೋದಯ ಕಾಲದಲ್ಲಿ ಕಾವ್ಯ ವೈವಿಧ್ಯಪೂರ್ಣವಾಗಿ ಬೆಳೆಯುವಾಗ, ಚೌಪದಿಯೂ ಬೆಳೆಯುತ್ತಾ ಬಂದಿದೆ. ಚಂದ್ರಶೇಖರ ವಸ್ತ್ರದ ಅವರು ಬರೆದಿರುವ ಚೌಪದಿಗಳು ಓದುಗರನ್ನು ಚಿಂತನೆಗೆ ಒಳಪಡಿಸುತ್ತದೆ. ಬದುಕು ಮತ್ತು ಅದರಾಚೆಗಿನ ಅರಿವು ಇಲ್ಲಿ  ಕಾಣಬಹುದು. ದೊಡ್ಡ ಸಂಪ್ರದಾಯ ಮತ್ತು ವ್ಯಕ್ತಿಗತ ಪ್ರತಿಭೆಯ ಬಹುತ್ವದ ಫಲವಾಗಿದೆ ಈ ಕೃತಿ. ಅಕ್ಷರಾದಾಚೆಯಿರುವ ಅರಿವನ್ನು ಈಚೆಗೆ ತರುವುದು ಸಾಹಸದ ಕೆಲಸವಾಗಿದ್ದು. ಶಬ್ಧಗಳಲ್ಲಿ ಮೂಡುವ ಅನುಭವಕ್ಕಿಂತ ಶಬ್ದದ ಒಳಗೆ ಬೆರೆತುಕೊಂಡಿರುವ ಅನುಭವ ಇನ್ನೂ ಅಗಾಧವಾಗಿರುತ್ತದೆ ಎಂಬುದನ್ನು ಇಲ್ಲಿ ತೋರ್ಪಡಿಸಲಾಗಿದೆ. ಈ ಬಗೆಯ ಅಭಿವ್ಯಕ್ತಿಯು ಕನ್ನಡದಲ್ಲಿ ಓದುಗರಿಗೆ ದೊರೆಯುವುದು ವಚನಗಳಲ್ಲಿ ಮಾತ್ರ. ಅದು ವಿಶೇಷವಾಗಿ ಅಲ್ಲಮಪ್ರಭುಗಳ ವಚನಗಳಲ್ಲಿ. ಎಲ್ಲಾವಿಚಾರಗಳನ್ನು ಒಳಗೊಂಡ ಈ ಕೃತಿಯು ಆಚಾರ- ವಿಚಾರಗಳನ್ನು ಸಮನ್ವಯಗೊಳಿಸುವ ಕಾಯಕವಾಗಿ ಹೊರಹೊಮ್ಮಿದೆ.  ’ಅರಿವು ಅಕ್ಷರದಾಚೆ’ ಕೃತಿಯು ಆಧುನಿಕ ಕನ್ನಡ ಸಾಹಿತ್ಯಕ್ಕೆ ಮಹತ್ತರ ಕೊಡುಗೆಯನ್ನು ನೀಡಿದೆ.

 

 

 

About the Author

ಚಂದ್ರಶೇಖರ ವಸ್ತ್ರದ

ಚಂದ್ರಶೇಖರ ವಸ್ತ್ರದ ಅವರು ಮೂಲತಃ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನವರು. ವಿವಿಧ ವಿಭಾಗಗಳಲ್ಲಿ ಸಾಮಾಜಿಕ, ಸಾಂಸ್ಕೃತಿಕ ವಲಯದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯತ್ವ, ಡಾ. ದ.ರಾ ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಸಂಸ್ಥಾಪಕ ಸದಸ್ಯ ಕಾರ್ಯದರ್ಶಿ, ಕರ್ನಾಟಕ ಚಲನಚಿತ್ರ ಮಂಡಳಿ-ಗದಗ ಜಿಲ್ಲಾ ’ಬೆಳ್ಳಿ ಸಾಕ್ಷಿ’ ತಂಡದ ಜಿಲ್ಲಾ ಸದಸ್ಯ, ಕರ್ನಾಟಕ ಗಮಕ ಕಲಾ ಪರಿಷತ್ತಿನಲ್ಲಿ ಜಿಲ್ಲಾ ಅಧ್ಯಕ್ಷರಾಗಿ ಅನೇಕ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸಿದ್ದಾರೆ. ಮಾನವತಾವಾದಿ ಬಸವಣ್ಣನವರು, ಕುಲಕ್ಕೆ ತಿಲಕ ಮಾದಾರ ಚನ್ನಯ್ಯ, ಬೆಳಗು, ಹರಿದಾವ ನೆನಪು, ಮಭನದ ಮಾತುಗಳು, ಪ್ರೀತಿ ...

READ MORE

Related Books