ಬುದ್ಧಭೂಮಿ

Author : ಶರಣಪ್ಪ ಚಲವಾದಿ

Pages 120

₹ 120.00




Year of Publication: 2020
Published by: ಮಾತೋಶ್ರೀ ಈರಮ್ಮ ವಡ್ಡನಕೇರಿ ಪ್ರತಿಷ್ಠಾನ
Address: ಡೊಂಗರಗಾಂವ್ ತಾಲೂಕು ಕಮಲಾಪುರ, ಜಿಲ್ಲೆ ಕಲಬುರಗಿ

Synopsys

ಡಾ. ಶರಣಪ್ಪ ಚಲವಾದಿ ಅವರ ಕವನ ಸಂಕಲನ-ಬುದ್ಧ ಭೂಮಿ. ವಿಮರ್ಶಕ ಡಾ. ಶ್ರೀಶೈಲ ನಾಗರಾಳ ಅವರು ಕೃತಿಗೆ ಬೆನ್ನುಡಿ ಬರೆದು ‘ಇಲ್ಲಿಯ ಬಹುತೇಕ ಕವಿತೆಗಳು ಮಾನವೀಯತೆ, ಕರುಣೆ, ಶೀಲಗಳನ್ನು ಜಗತ್ತಿಗೆ ಸಾರಿ ಸಮ ಸಮಾಜದ ಕನಸನ್ನು ಬಿತ್ತಿದ ಬುದ್ಧ ಗುರುವನ್ನು ಕೇಂದ್ರೀಕರಿಸಿಕೊಂಡಿವೆ. ಸಮಾಜದಲ್ಲಿಯ ಶೋಷಣೆ, ಅನ್ಯಾಯದಂತಹ ಸಮಸ್ಯೆಗಳಿಗೆ ಉತ್ತರಗಳನ್ನು ಬುದ್ಧ ಗುರುವಿನಲ್ಲಿ ಕಾಣುವ ಪ್ರಯತ್ನವಾಗಿದೆ’ ಎಂದು ಪ್ರಶಂಸಿಸಿದ್ದಾರೆ.

About the Author

ಶರಣಪ್ಪ ಚಲವಾದಿ

ಲೇಖಕ ಡಾ. ಶರಣಪ್ಪ ಚಲವಾದಿ ಅವರು ಮೂಲತಃ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಹಿರೇ ರಾಯಕುಂಪಿ ಗ್ರಾಮದವರು. ಗುಲಬರ್ಗಾ ವಿ.ವಿ.ಯಿಂದ ಎಂ.ಎ. ಪಿಎಚ್ ಡಿ ಪದವೀಧರರು ಹಾಗೂ  ಬಿ.ಇಡಿ ಪದವೀಧರರು. ಇದೇ ವಿ.ವಿ.ಯ ರಾಯಚೂರು ಕೇಂದ್ರದಲ್ಲಿ ಕನ್ನಡ ಅತಿಥಿ ಉಪನ್ಯಾಸಕರಾಗಿದ್ದಾರೆ. ರಾಯಚೂರು ಜಿಲ್ಲೆಯ ದಲಿತ ಸಾಹಿತ್ಯ ಎಂಬುದು ಸಂಶೋಧನಾ ಮಹಾಪ್ರಬಂಧ. ರಾಜ್ಯ, ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣದಲ್ಲಿ ಹಲವಾರು ಪ್ರಬಂಧಗಳನ್ನು ಮಂಡಿಸಿದ್ದಾರೆ.  ಹಲವಾರು ಲೇಖನಗಳು ಪ್ರಕಟವಾಗಿವೆ.  ಕೃತಿಗಳು: ಬುದ್ಧ ಭೂಮಿ (ಕವನ ಸಂಕಲನ), ದಲಿತ ಸಾಹಿತ್ಯಾವಲೋಕನ (ಸಂಶೋಧನಾ ಲೇಖನಗಳ ಸಂಗ್ರಹ) ಪ್ರಶಸ್ತಿಗಳು: ಬೀದರಿನ ವಿಶ್ವ ಕನ್ನಡಿಗರ ಸಂಸ್ಥೆಯಿಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ...

READ MORE

Related Books