ಜೇನು ಹನಿ

Author : ಸುಭಾಶ್ಚಂದ್ರ ಕಶೆಟ್ಟಿ ಬಾಚನಾಳ

Pages 108

₹ 125.00




Year of Publication: 2018
Published by: ಕಶೆಟ್ಟಿ ಪ್ರಕಾಶನ
Address: ಕಲಬುರಗಿ

Synopsys

ಕವಿ ಹಾಗೂ ಲೇಖಕ ಸುಭಾಷ್ ಚಂದ್ರ ಕಶೆಟ್ಟಿ, ಬಾಚನಾಳ ಅವರ ಕವನ ಸಂಕಲನ- ಜೇನು ಹನಿ. ಒಟ್ಟು 39 ಕವಿತೆಗಳಿವೆ. ಬಹುತೇಕ ಕವಿತೆಗಳು ಸಾಮಾಜಿಕ ಬದುಕಿನ ಮೇಲೆ ಬೆಳಕು ಚೆಲ್ಲುತ್ತವೆ. ಸುಖ ಶಾಂತಿ ನೆಮ್ಮದಿಗಾಗಿ ತಹತಹಿಸುವ, ನಾಡು-ನುಡಿ ಪ್ರೀತಿ ಕರುಣೆ ಆದಿಯಾಗಿ ಜಾತಿಯ ಲಿಂಗಭೇದ ಗಳಿಲ್ಲದ, ಸಮತಾವಾದದ ಸಮಾಜಕ್ಕೆ ಹಂಬಲಿಸಿವೆ. ವಿಶೇಷವಾಗಿ, ಬಸವಾದಿ ಶರಣರ ವಚನಸಾಹಿತ್ಯವನ್ನು ಕಾವ್ಯದಲ್ಲಿ ಹಿಡಿದಿಟ್ಟು ಅರ್ಥಪೂರ್ಣ ವಿಶ್ಲೇಷಣೆಯೊಂದಿಗೆ ಚಿಂತಿಸಿದ್ದು ಔಚಿತ್ಯಪೂರ್ಣವಾಗಿದೆ. ಜೇನಹನಿ ಕವಿತೆಯು ಮನಸ್ಸಿನ ವಹಿವಾಟಕ್ಕೆ ಸತ್ವ ನೀಡುವ ಕವಿತೆ. ಒಂದು ಬದುಕು ಕನಿಷ್ಠ ವೆಂದು ಉಸಿರು ಹಾಕುತ್ತ, ಅದನ್ನೇ ಹಾಳುಮಾಡಿಕೊಂಡು ಹನಿಹನಿಯಾಗಿ ಶ್ರೇಷ್ಠತ್ವವನ್ನು ಪಡೆಯುತ್ತದೆ. ಇಂತಹ ತಾತ್ವಕತೆಯನ್ನು ಒಳಗೊಂಡ ಕವಿತೆಗಳಿವೆ.

About the Author

ಸುಭಾಶ್ಚಂದ್ರ ಕಶೆಟ್ಟಿ ಬಾಚನಾಳ
(04 July 1948)

ಲೇಖಕ ಸುಭಾಶ್ಚಂದ್ರ ಕಶೆಟ್ಟಿ ಬಾಚನಾಳ ಅವರು ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಬಾಚನಾಳ ಗ್ರಾಮದವರು. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ, ಕಮಲಾಪುರದಲ್ಲಿ ಪಿಯುಸಿ, ಕಲಬುರಗಿಯಲ್ಲಿ ಪದವಿ ಶಿಕ್ಷಣ ಪೂರೈಸಿದರು. ಸರ್ಕಾರದ ವಿವಿಧ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ, ನಂತರ ಕಂದಾಯ ಇಲಾಖೆಯಲ್ಲಿ ಶಿರಸ್ತೇದಾರರಾಗಿ (2006) ನಿವೃತ್ತರಾದರು.  ಕಮಲಾಪುರ ಸುತ್ತಮುತ್ತಲಿನ ಸಾಧು-ಸಂತರ ಬಗ್ಗೆ, ಜಾನಪದ,ವಚನ ಸಾಹಿತ್ಯ,ನಾಟಕ, ಕವನ, ಜೀವನ ಚರಿತ್ರೆ,ಕುರಿತು 30ಕ್ಕಿಂತ ಹೆಚ್ಚು ಕೃತಿಯನ್ನು ರಚಿಸಿದ್ದಾರೆ. ಕೃತಿಗಳು: ಬದುಕಿನ ಪ್ರಜ್ಞೆ, ಕಾನನದ ಹೂಗಳು, ಸುಗಂಧ ಪುಷ್ಪಗಳು, ಸುಮಂಗಲ ಗೀತೆಗಳು (ಸಂ) ಜೇನುಹನಿ (ಕವನ ಸಂಕಲನ), ನಿತ್ಯಸತ್ಯ (ಚಿಂತನಗಳು), ಜನಮೆಚ್ಚಿದ ನಾಯಕ ಶ್ರೀ ಶಂಕರಶೆಟ್ಟಿ ಪಾಟೀಲರು ...

READ MORE

Related Books