ಕಣ್ಣಾ ಮುಚ್ಚಾಲೆ

Author : ಅಂತಃಕರಣ

Pages 72

₹ 50.00




Year of Publication: 2016
Published by: ಬೆನಕ ಬುಕ್ಸ್ ಬ್ಯಾಂಕ್
Address: ಯಳಗಲ್ಲು, ಕೋಡೂರು ಅಂಚೆ, ಹೊಸನಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ- 577418

Synopsys

‘ಕಣ್ಣಾ ಮುಚ್ಚಾಲೆ’ ಕಿಶೋರ ಸಾಹಿತಿ ಅಂತಃಕರಣನ ಕವಿತೆಗಳ ಸಂಕಲನ. ಲೇಖಕಿ ಡಾ.ಕೆ.ಎಸ್. ಚೈತ್ರಾ ಬೆನ್ನುಡಿ ಬರೆದಿದ್ದಾರೆ. ಮಗು ಎಂದರೆ ಕುತೂಹಲ, ತುಂಟತನ, ಮುಗ್ಧತೆ, ಹಠ, ಸರಳತೆ, ಕಲ್ಪನೆ ಎಲ್ಲ ತುಂಬಿದ ಬೆರಗು ಎಳೆಯರ ಹಸಿ ಮನಸ್ಸು, ಈ ಜಗತ್ತಿನ ಬೇರೆ ಬೇರೆ ಘಟನೆ, ವಸ್ತುಗಳನ್ನು ನೋಡುವ ರೀತಿಯೇ ಭಿನ್ನ, ಮಾತ್ರವಲ್ಲ ಅದಕ್ಕೆ ಸ್ಪಂದಿಸುವ ಪರಿಯೂ ವಿಶಿಷ್ಟ ಎನ್ನುತ್ತಾರೆ ಲೇಖಕಿ ಚೈತ್ರಾ.

ಕಂಡಿದ್ದನ್ನು ಸಹಜವಾಗಿ ನೇರವಾಗಿ ಹೇಳುವ ಮತ್ತು ಅಭಿವ್ಯಕ್ತಿಸುವ ಧೈರ್ಯ ಮುಗ್ಧ ಮಕ್ಕಳಿಂದ ಮಾತ್ರ ಸಾಧ್ಯ ತನ್ನ ಸುತ್ತಲ ಜಗತ್ತನ್ನು ಸೂಕ್ಷ್ಮ ಕಣ್ಣು-ಮನಸ್ಸಿನಿಂದ ಗಮನಿಸುವ ಅಂತಃಕರಣನ ಭಾವವಿಲಾಸ- ವಿನ್ಯಾಸಗಳನ್ನು ಇಲ್ಲಿಯ ಕವಿತೆಗಳಲ್ಲಿ ಕಾಣಬಹುದು.

ಎಲ್ಲ ಭಾವಜಗತ್ತಿನ ಅನಿಸಿಕೆಗಳನ್ನು ಸುಲಭವಾದ ಭಾಷೆ, ಮನಸೆಳೆಯುವ ಗೇಯತೆ ಮತ್ತು ನವಿರಾದ ಕಲ್ಪನೆಯ ಮೂಲಕ ಓದುಗರಿಗೆ ಮುಟ್ಟಿಸುವ ಶಕ್ತಿ ಅಂತಃಕರಣನಿಗೆ ಸಿದ್ಧಿಸಿದೆ, ಕತ್ತಲಿಂದ ಹೊರಬಂದು ಹೊಸತನ್ನು ಮನಸ್ಸಿಗೆ ಪ್ರಿಯವಾದುದ್ದನ್ನು ಕಾಣುವ ಸಂತೋಷ ಈ ಕವನ ಸಂಕಲನದಿಂದ ಉಂಟಾಗಿದೆ ಎನ್ನುತ್ತಾರೆ ಕೆ.ಎಸ್. ಚೈತ್ರಾ.

About the Author

ಅಂತಃಕರಣ

ಅಂತಃಕರಣ  ತನ್ನ 4ನೇ ಕ್ಲಾಸಿನಿಂದ 'ಎಚ್ಚರಿಕೆ', 'ಜೀವನ್ಮುಖಿ' ಪತ್ರಿಕೆಗಳಲ್ಲಿ ಮತ್ತು ಅಂತರ್ಜಾಲ  ಪತ್ರಿಕೆ 'ವಿಶ್ವಕನ್ನಡಿಗ'ದಲ್ಲಿ  ವಾರಕ್ಕೆ 2 ಅಂಕಣ ಬರೆಯುತ್ತಿರುವ ಅಂಕಣಕಾರ. ಇದುವರೆಗೆ ಕ್ರೀಡಾಂಕಣಗಳೂ ಸೇರಿದಂತೆ 500 ಅಂಕಣಪ್ರಬಂಧ, 95 ಕವಿತೆ, 78 ಕತೆ, 4 ಕಾದಂಬರಿ ಮತ್ತು 1 ನಾಟಕಗಳನ್ನು ರಚಿಸಿರುವ ಕನ್ನಡ ಮತ್ತು ಇಂಗ್ಲಿಷಿನಲ್ಲಿ ಬರೆಯುವ ಲೇಖಕ. 9ನೇ ತರಗತಿಯೊಳಗೆ 4 ಸಮಗ್ರ ಬರಹಗಳ ಕೃತಿಗಳು ಸೇರಿದಂತೆ ಒಟ್ಟು 30 ಕೃತಿಗಳನ್ನು ರಚಿಸಿರುವ ಪುಟ್ಟ ಸಾಹಿತಿ. ಪ್ರಸ್ತುತ ಶಿವಮೊಗ್ಗದ ಲೊಯಲಾ ಪ್ರೌಢಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿ. ಕನ್ನಡ ಪ್ರವೇಶ, ಕಾವ ಸಾಹಿತ್ಯ ಪರೀಕ್ಷೆಗಳಲ್ಲಿ ಮತ್ತು ...

READ MORE

Related Books