ಮಳೆಮಿಂದ ನೆಲ

Author : ಮೂಡ್ನಾಕೂಡು ಚಿನ್ನಸ್ವಾಮಿ

Pages 72

₹ 90.00




Year of Publication: 2017
Published by: ಯಾಜಿ ಪ್ರಕಾಶನ
Address: ಭೂಮಿ, ಎಂ.ಪಿ. ಪ್ರಕಾಶ್ ನಗರ, ಹೊಸಪೇಟೆ.

Synopsys

ತನ್ನ ವಿಭಿನ್ನ ಕಾವ್ಯರಚನಾ ಶೈಲಿಯ ಮೂಲಕ ಕನ್ನಡ ಜನಮಾನಸದಲ್ಲಿ ಹೆಸರುಗಳಿಸಿದವರು ಮೂಡ್ನಾಕೂಡು ಚಿನ್ನಸ್ವಾಮಿ. ಕಾವ್ಯವೆಂದರೆ ಹೀಗೇ ಇರಬೇಕು ಎಂದು ನಂಬಿದ್ದ ಸೂತ್ರಗಳನ್ನು ನಿರಾಕರಿಸುತ್ತಲೇ ಹೊಸ ಧಾಟಿಯ ಪದ್ಯವನ್ನು ರಚಿಸಿದರು. ಮಳೆಮಿಂದ ನೆಲ ಇದು ಅವರ ಹೊಸ ಕವನ ಸಂಕಲನ. ಈ ಕವನ ವಿಭಿನ್ನ ಅರ್ಥಗಳನ್ನು ಹೊಮ್ಮಿಸುವ ಶಕ್ತಯನ್ನು ಹೊಂದಿದೆ. ಈ ಸಂಕಲನದಲ್ಲಿ ಮುಖ್ಯವಾಗಿ ಎರಡೇ ಪ್ರಧಾನ ವಸ್ತುಗಳು ಕಾಣಸಿಗುತ್ತದೆ. ಒಂದು- ನಾನು, ಇನ್ನೊಂದು- ನನ್ನನ್ನು ಬದುಕಿಗೆ ಮರಳಿಸಿದ ಸಖ್ಯ.ತನ್ನ ಪಾಡಿಗೆ ಹಾಡುಗಳನ್ನು ರಚಿಸುತ್ತಾ ಲೋಕದಿಂದ ವಿಮುಖನಾದ ವ್ಯಕ್ತಿಯ ಕವಿತೆಗಳು ಇಲ್ಲಿವೆ.

About the Author

ಮೂಡ್ನಾಕೂಡು ಚಿನ್ನಸ್ವಾಮಿ
(22 September 1954)

ದಲಿತ-ಬಂಡಾಯ ಸಾಹಿತ್ಯ ಚಳವಳಿಯ ಸತ್ವಪೂರ್ಣ ದನಿಯಾಗಿರುವ ಕವಿ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಮೂಲತಃ ಗಡಿನಾಡಾದ ಚಾಮರಾಜನಗರದವರು. ಎಂ.ಕಾಂ. ಎಂ.ಎ(ಕನ್ನಡ), ಡಿ.ಲಿಟ್. ಪದವೀಧರರಾದ ಅವರು ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿ ಹಿರಿಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರಲ್ಲದೆ, ನಿರ್ದೇಶಕರು(ಹಣಕಾಸು) ಹಾಗೂ ಆರ್ಥಿಕ ಸಲಹೆಗಾರರಾಗಿ ಕಾರ್ಯನಿರ್ವಹಿಸಿ ಮಾರ್ಚ್ 2012ರಲ್ಲಿ ನಿವೃತ್ತಿ ಹೊಂದಿದ್ದಾರೆ. ಜೊತೆಗೆ ಏಪ್ರಿಲ್ 2015 ರಿಂದ ಮಾರ್ಚ್ 2017 ರವರೆಗೆ ಸಮಾಜ ಕಲ್ಯಾಣ ಇಲಾಖೆಯ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಲ್ಲಿ ಆರ್ಥಿಕ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ. 2016-17 ರ ಸಾಲಿಗೆ ಮೈಸೂರು ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಸಂಶೋಧನಾ ...

READ MORE

Related Books