ಸತ್ಯಾಮೃತ

Author : ಸಂಗೀತಾ ಮಠಪತಿ

Pages 116

₹ 110.00




Year of Publication: 2022
Published by: ಅಚಲ ಪ್ರಕಾಶನ

Synopsys

ಸಂಗೀತಾ ಮಠಪತಿಯವರ ಮೂರನೇ ಕೃತಿ ಸತ್ಯಾಮೃತ ಅಬಾಬಿ ಸಂಕಲನ. ಅಬಾಬಿ ಸಾಹಿತ್ಯ ಪ್ರಕಾರವು ವಿಶೇಷ ಮತ್ತು ವಿಶಿಷ್ಟ ಸಾಹಿತ್ಯ ಪ್ರಕಾರವಾಗಿದ್ದು, ಇತ್ತೀಚೆಗೆ ಕನ್ನಡ ಸಾಹಿತ್ಯದಲ್ಲಿ ತನ್ನದೇ ಆದ ಸ್ಥಾನವನ್ನು ಪಡೆದುಕೊಂಡಿದೆ. ಈ ಹೊಸ ಸಾಹಿತ್ಯದ ಪ್ರಕಾರದಲ್ಲಿ ಸಂಗೀತಾ ಮಠಪತಿಯವರು ಕೃಷಿ ಮಾಡಿದ್ದು, ವಿಜಯಪುರದ ಸಾಹಿತ್ಯ ಲೋಕಕ್ಕೆ ಹೆಮ್ಮೆಯ ಕೊಡುಗೆಯಾಗಿದೆ. ಸತ್ಯಾಮೃತ ಕೃತಿಯಲ್ಲಿರುವ ಅಬಾಬಿಗಳು ಮೂಲ ಕವಿಗಳಾದ ಷೇಕ್ ಕರೀಮುಲ್ಲಾರವರ ಆಶಯಕ್ಕೆ ಹಿಡಿದ ಕನ್ನಡಿಯಾಗಿವೆ ಎಂದು ಹೇಳಿದರೆ ಅತಿಶಯೋಕ್ತಿಯಾಗಲಾರದು. ಸಮಾಜದಲ್ಲಿ ಶಾಂತಿ,ನೆಮ್ಮದಿ,ಸಮಾನತೆ ಮತ್ತು ಸಮೃದ್ಧತೆಯನ್ನು ಬಯಸುವ ಅಬಾಬಿಗಳು ಇಲ್ಲಿವೆ. ಆಹಾರ ಸಂಸ್ಕರಣೆ ಮತ್ತು ಪೋಷಣೆ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಮುಗಿಸಿರುವ ಶ್ರೀಮತಿ ಸಂಗೀತಾ ಮಠಪತಿಯವರು ವಿಜ್ಞಾನ ವಿಷಯದ ವಿದ್ಯಾಭ್ಯಾಸದಲ್ಲಿ ತೊಡಗಿದ್ದರೂ ಸಹ ಕನ್ನಡ ಸಾಹಿತ್ಯದಲ್ಲಿ ತಲ್ಲೀನರಾಗಿರುವುದು ಅಭಿನಂದನಾರ್ಹ. ದಿನನಿತ್ಯ ಕನ್ನಡ ನಾಡು-ನುಡಿ ಮತ್ತು ಸಾಹಿತ್ಯ ಸೇವೆ ಸಲ್ಲಿಸುತ್ತಿರುವ ಇವರಿಗೆ ಸಂಸ್ಥೆಗಳಿಂದ ಐದು ರಾಜ್ಯ ಪ್ರಶಸ್ತಿಗಳು ಸಂದಿವೆ ಎಂದು ಹೇಳಲು ಮನೋಲ್ಲಾಸವೆನಿಸುತ್ತದೆ. ರಾಮಾಮೃತದ ಬಳಿಕ ಭಾವಾಮೃತ, ಇದೀಗ ಸತ್ಯವನ್ನೇ ಸಾರುವ ಅಮೃತ ಅದುವೇ ಸತ್ಯಾಮೃತ. 

About the Author

ಸಂಗೀತಾ ಮಠಪತಿ
(03 July 1998)

ಸಂಗೀತಾ ಮಠಪತಿಯವರು ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಚಿಕ್ಕಾಲಗುಂಡಿ ಗ್ರಾಮದವರು. ತಂದೆ ಹಣಮಂತ, ತಾಯಿ ಗುರುಬಾಯಿ. ಹುಟ್ಟೂರಿನಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ಶಿಕ್ಷಣ ಪೂರೈಸಿ, ಮುಧೂಳ ತಾಲೂಕಿನ ಯಡಹಳ್ಳಿಯಲ್ಲಿ ಪಿಯುಸಿ, ಮುಧೋಳ ದಲ್ಲಿ ಬಿ.ಎಸ್ ಸಿ ಪದವಿ , ನಂತರ, ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಿಂದ ಎಂ.ಎಸ್.ಸಿ (ಆಹಾರ ಸಂಸ್ಕರಣೆ ಮತ್ತು ಪೋಷಣೆ ವಿಭಾಗ)  ಸ್ನಾತಕೋತ್ತರ ಪದವಿ ಪಡೆದರು. ಸಂಗೀತಾ ಅವರು ಉತ್ತಮ ನಿರೂಪಕಿಯೂ ಹೌದು. ಸದ್ಯ ವಿಜಯಪುರದಲ್ಲಿ ವಾಸವಾಗಿದ್ದಾರೆ.  ಸಾಹಿತ್ಯ,ಸಂಗೀತ,ಕಲಾರಂಗ ಹಾಗೂ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ವಿಜಯಪುರ ಜಿಲ್ಲಾ ಘಟಕ ಮಹಿಳಾ ಕಾರ್ಯದರ್ಶಿಯಾಗಿದ್ದು, ಯೋಗ ತರಬೇತಿ ಹಾಗೂ ...

READ MORE

Related Books