ಸಿಂದಾಬಾದನ ಆತ್ಮಕಥೆ

Author : ಎಚ್. ಎಸ್. ವೆಂಕಟೇಶಮೂರ್ತಿ

Pages 48

₹ 50.00




Year of Publication: 2019
Published by: ಅಭಿನವ ಪ್ರಕಾಶನ
Address: 17/18-2, 1ನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-560040
Phone: 9448804905

Synopsys

‘ಸಿಂದಾಬಾದನ ಆತ್ಮಕಥೆ’ ಹಿರಿಯ ಸಾಹಿತಿ ಎಚ್.ಎಸ್. ವೆಂಕಟೇಶಮೂರ್ತಿ ಅವರ ಕವನ ಸಂಕಲನ. ವೆಂಕಟೇಶಮೂರ್ತಿ ಅವರ ಕಾವ್ಯ ನವ್ಯಕಾವ್ಯದ ಅತಿವಾಸ್ತವತೆಯ ಅಕರಾಳ ವಿಕರಾಳತೆಗೆ ಸವಾಲೆಂಬಂತೆ, ಪ್ರತಿಭಟನೆಯೋ ಎಂಬಂತೆ ಕವಿತೆ ರಮ್ಯತೆಯ ಬೆನ್ನುಹತ್ತಿ, ಸಿಂದಾಬಾದನ ಅದ್ಭುತ ಕಥೆಯ ಬೆನ್ನೇರಿ, ಪಾತಾಳಕ್ಕಿಳಿದು, ಸೌಗಂಧಿಕಾ ಪುಷ್ಪದ ಕಂಪಿನ ಹಿಂದೆ ಹೊರಟಂತೆ ತೋರುತ್ತದೆ. ಜೀವಕ್ಕೆ ವಾಸ್ತವದ ಮೂಲಕ ಬದುಕನ್ನು ಶೋಧಿಸುವ ನವ್ಯಕಾವ್ಯದ ಧೋರಣೆಯಷ್ಟೇ, ರಹಸ್ಯವಾದದ್ದರ, ಗೂಢಾವಾದದ್ದರ ನೆಲೆಯನ್ನು ಹೊಕ್ಕು ಅರ್ಥವಂತಿಕೆಯನ್ನು ಅನ್ವೇಷಿಸುವ ಧೋರಣೆಯೂ ಮುಖ್ಯವಾದದ್ದು. ಅನುಭಾವಿ ಕವಿಗಳು ಮಾಡಿದ್ದೂ ಇದನ್ನೇ. ಪ್ರಚಂಡ ವಾಸ್ತವವೆಂದು ಮೇಲುನೋಟಕ್ಕೆ ತೋರುವ ನವ್ಯಕವಿ ಗೋಪಾಲಕೃಷ್ಣ ಅಡಿಗರ ಕಾವ್ಯದ ಉದ್ದೇಶವೂ, ಈ ಬಗೆಯ ಅನುಭಾವಿಕ ಗೂಢಗಳ ಅನ್ವೇಷಣೆಯೆ ಆಗಿದೆ ಎಂಬುದನ್ನು ಮರೆಯಬಾರದು ಎಂದು ಕವನ ಸಂಕಲನ ಕುರಿತಂತೆ ಕವಿ ಜಿ.ಎಸ್.ಎಸ್. ಅವರು ಕೃತಿಯ ಮುನ್ನುಡಿಯಲ್ಲಿ ಅಭಿಪ್ರಾಯಪಟ್ಟಿದ್ದಾರೆ. 

About the Author

ಎಚ್. ಎಸ್. ವೆಂಕಟೇಶಮೂರ್ತಿ
(23 June 1944)

ವೆಂಕಟೇಶ ಮೂರ್ತಿ ಅವರು ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಹೊದಿಗೆರೆ ಎಂಬ ಸಣ್ಣ ಹಳ್ಳಿಯಲ್ಲಿ ಮಧ್ಯಮವರ್ಗದ ಕುಟುಂಬವೊಂದರಲ್ಲಿ 23-06-1944ರಲ್ಲಿ ಜನಿಸಿದರು. ಮೂವತ್ತು ವರ್ಷಗಳ ಕಾಲ ಗ್ರಾಮ್ಯಜೀವನ ನಡೆಸಿ ನಂತರ ಬೆಂಗಳೂರಿನ ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ 1973ರಲ್ಲಿ ನೇಮಕಗೊಂಡರು. 2000 ರಲ್ಲಿ ನಿವೃತ್ತರಾದ ಅವರು ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಪ್ರಾರಂಭದಲ್ಲಿ ಯಕ್ಷಗಾನ, ಬಯಲಾಟದಂಥ ರಂಗಪ್ರದರ್ಶನಗಳು ಇವರ ಮೇಲೆ ಗಾಢ ಪ್ರಭಾವ ಬೀರಿದವು. ಬಾಲ್ಯದಲ್ಲೇ ಕುಮಾರವ್ಯಾಸ, ಪುರಂದರ, ಲಕ್ಷ್ಮೀಶ ಮೊದಲಾದವರ ಕೃತಿಗಳ ನಿಕಟ ಸಂಪರ್ಕ ದೊರೆಯಿತು. ಮುಂದೆ ಕನ್ನಡ, ಸಂಸ್ಕೃತ, ಇಂಗ್ಲಿಷ್ ಸಾಹಿತ್ಯ ಪರಂಪರೆಯೊಂದಿಗೆ ನಡೆಸಲಾದ ...

READ MORE

Related Books