ಪರಾಕಿ

Author : ದ.ರಾ. ಬೇಂದ್ರೆ (ಅಂಬಿಕಾತನಯದತ್ತ)

Pages 64

₹ 45.00




Year of Publication: 1982
Published by: ಶ್ರೀಮಾತಾ ಪ್ರಕಾಶನ
Address: ವಿಶ್ವಶ್ರಮ ಚೇತನ, ಹುಬ್ಬಳ್ಳಿ-580 003

Synopsys

ವರಕವಿ ಬೇಂದ್ರೆಯವರು 1981ರಲ್ಲಿ ನಿಧನರಾದ ನಂತರ ಪ್ರಕಟವಾದ ಅಪ್ರಕಟಿತ ಕವಿತೆಗಳ ಸಂಗ್ರಹವಿದು. 1982ರಲ್ಲಿ ಈ ಸಂಕಲನ ಮೊದಲ ಬಾರಿಗೆ ಪ್ರಕಟವಾಯಿತು. ಪರಾಕಿಯಲ್ಲಿ ಒಟ್ಟು 40 ಕವಿತೆಗಳಿವೆ. ಬೇಂದ್ರೆಯವರು 1954ರಲ್ಲಿ ಬಿಡುಗಡೆಯಾದ ‘ವಿಚಿತ್ರ ಪ್ರಪಂಚ’ ಎಂಬ ಕನ್ನಡ ಚಿತ್ರಕ್ಕೆ ಹಾಡು ಮತ್ತು ಸಂಭಾಷಣೆಯನ್ನು ಬರೆದಿದ್ದರು. ವಿಚಿತ್ರ ಪ್ರಪಂಚದಲ್ಲಿ ಬೇಂದ್ರೆಯವರ 7 ಹಾಡುಗಳನ್ನು ಬಳಸಲಾಗಿತ್ತು. ಈ ಸಂಕಲನದಲ್ಲಿ ೫ ಹಾಡುಗಳನ್ನು ಸೇರಿಸಲಾಗಿದೆ. ಬೇಂದ್ರೆಯವರು ಬದುಕಿರುವಾಗಲೇ ಸಾಧನೆ, ವಿಶಾಲ ಕರ್ನಾಟಕ, ಪ್ರಜಾವಾಣಿ, ಉದಯವಾಣಿ, ಸಂಧ್ಬೋದ ಚಂದ್ರಿಕೆಗಳಲ್ಲಿ ಪ್ರಕಟವಾದ ಕೆಲವು ಕವಿತೆಗಳನ್ನು ಈ ಸಂಕಲನದಲ್ಲಿ ಸೇರಿಸಲಾಗಿದೆ. ನೀ ಬೈರಾಗಿ ಇರಬಹುದು,ಬಾರೆ ನಿನ್ನ ಮಠದಾಗ ನಾನು ಇರಾಕಿ,ನಿನಗೆ ಎತ್ಯಾವ ಮನಿ ಮನಿ ಆರತಿ ಎಂಬ ಅಧ್ಯಾತ್ಮ ಕವಿತೆಗಳು ಈ ಸಂಕಲನದ ಆರಂಭದಲ್ಲೇ ಇವೆ. ಡಿ.ವಿ.ಜಿ., ತಿ.ನಂ.ಶ್ರೀ., ಮುನಿದೇವರನ್ನು ಕುರಿತ ಕವಿತೆಗಳು ಶ್ರದ್ಧಾಂಜಲಿ ಕವಿತೆಗಳಾಗಿವೆ. ಕರುಣೆಗಳರಸ ರಾಘವೇಂದ್ರ, ನಾನು ಕಂಡಂತೆ, ತಿರುಮಲೆ ರಾಜಮ್ಮ ಕವಿತೆಗಳು ಸಂಭಾವನಾ ಗ್ರಂಥಕ್ಕಾಗಿ ಬರೆದವುಗಳಾಗಿವೆ. ’ಪರಾಕಿ’ಯಲ್ಲಿ ಹಾಡು, ಭಾವಗೀತೆ, ಅಷ್ಟಷಟ್ಪದಿ,ನಾಮ ಛಂದಸ್ಸಿನ ಕವನ,ಆತ್ಮಾನುಭಾವ ಕವನಗಳಿಂದ ಕೂಡಿ ಈ ಸಂಗ್ರಹ ವೈವಿಧ್ಯಮಯವಾಗಿದೆ. ಬೇಂದ್ರೆಯವರ ಮರಣೋತ್ತರ ಕವಿತೆಗಳ ಸಂಗ್ರಹ ಪರಾಕಿಯನ್ನು ಅವರ ಪುತ್ರ ವಾಮನ ಬೇಂದ್ರೆ ಸಂಪಾದಿಸಿದ್ದಾರೆ.

About the Author

ದ.ರಾ. ಬೇಂದ್ರೆ (ಅಂಬಿಕಾತನಯದತ್ತ)
(31 January 1896 - 26 October 1981)

ಕನ್ನಡ ಕಾವ್ಯದ ಸೊಬಗು-ಸೊಗಸು ಹೆಚ್ಚಿಸಿದ ‘ಅಂಬಿಕಾತನಯದತ್ತ’ ಕಾವ್ಯನಾಮದ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರನ್ನು ‘ವರಕವಿ’, ‘ಗಾರುಡಿಗ’ ಎಂದು ಗುರುತಿಸಲಾಗುತ್ತದೆ. ತಂದೆ ರಾಮಚಂದ್ರ ತಾಯಿ ಅಂಬವ್ವ. ಧಾರವಾಡದಲ್ಲಿ 1896ರ ಜನವರಿ 31ರಂದು ಜನಿಸಿದರು. ಧಾರವಾಡದಲ್ಲಿ ಮೆಟ್ರಿಕ್ (1913) ಮುಗಿಸಿದ ಮೇಲೆ ಪುಣೆಯ ಫರ್ಗ್ಯುಸನ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಬಿ.ಎ. (1918) ಪದವಿ ಪಡೆದರು. ಕೆಲವು ಕಾಲ ಅಧ್ಯಾಪಕ ವೃತ್ತಿ ಮಾಡಿದ ಮೇಲೆ ಮುಂಬಯಿ ವಿಶ್ವವಿದ್ಯಾನಿಲಯದಿಂದ ಎಂ.ಎ. (1935) ಪದವಿ ಪೂರ್ಣಗೊಳಿಸಿದರು. ಗದುಗಿನ ವಿದ್ಯಾದಾನ ಸಮಿತಿ ಪ್ರೌಢಶಾಲೆಯಲ್ಲಿ ಹೆಡ್ ಮಾಸ್ಟರ್ ಆಗಿ ವೃತ್ತಿ ಆರಂಭಿಸಿದ ಅವರು ನಂತರ ಹುಬ್ಬಳ್ಳಿಯ ನ್ಯೂ ...

READ MORE

Related Books