ಹೂವು ಚೆಲ್ಲಿದ ಹಾದಿಯಲ್ಲಿ

Author : ಕೆ.ವಿ. ಸುಬ್ಬಣ್ಣ

Pages 72

₹ 1.00




Year of Publication: 1957
Published by: ಅಕ್ಷರ ಪ್ರಕಾಶನ
Address: ಹೆಗ್ಗೋಡು, ತಾಲೂಕು: ಸಾಗರ, ಜಿಲ್ಲೆ: ಶಿವಮೊಗ್ಗ-577401

Synopsys

‘ಹೂವು ಚೆಲ್ಲಿದ ಹಾದಿಯಲ್ಲಿ’ ಕೃತಿಯು ಕೆ.ವಿ.ಸುಬ್ಬಣ್ಣ ಬರೆದಿದ್ದು, ಇದರಲ್ಲಿ ಲೇಖಕರೇ ಹೇಳುವಂತೆ ಉದಯ ಯೌವ್ವನದ ಸ್ಮೃತಿ ಸಂಚಯವಿದೆ. ಕೃತಿಯ ಆರಂಭದಲ್ಲಿ ಲೇಖಕರು ತಿಳಿಸಿರುವಂತೆ ‘ ಸುಸಂಸ್ಕೃತ ಮನೆತನವೊಂದರಲ್ಲಿ ಹುಟ್ಟಿ ಆಧುನಿಕ ವಿದ್ಯಾಭ್ಯಾಸ ಪಡೆದ ಸೂಕ್ಷ್ಮ ಚೇತನ, ಭಾವಜೀವಿ ಹಾಗೂ ಮಾತುಗಾರನೂ ಆದ ತರುಣನೊಬ್ಬನ ಪ್ರಣಯ ಕಥೆವೊಂದನ್ನು ಕೇಳಿದೆ. ತಾರುಣ್ಯೋದಯದ ವೇಳೆಯಲ್ಲಿ ಸಹಜವಾಗಿ ನಡೆಯಬಹುದಾದ ಅತಿ ಭಾವುಕತೆಯ ಈ ಕಥೆ, ಅವನ ಊರ ಬದಿಯ ಸುಂದರವಾದ ’ಹೂವು ಚೆಲ್ಲಿದ ಹಾದಿಯಲ್ಲಿ’ ನಡೆಯಿತಂತೆ. ಆತನ ಭಾವವನ್ನೇ ಅನುಸರಿಸಿ, ಆತ್ಮವೃತ್ತ ಎನ್ನುವಂತೆ, ಮುಂದಿನ 28 ಕಾವ್ಯಖಂಡಗಳಲ್ಲಿ ಆ ರಮ್ಯಕಥೆಯ ಕೆಲವು ಮಿಂಚುಗಳನ್ನು ಹಿಡಿಯಲೆತ್ನಿಸಿದ್ದೇನೆ’ ಎಂದು ಹೇಳಿದ್ದಾರೆ. ಇದು ಇಡೀ ಕೃತಿಯ ಜೀವಾಳವೂ ಆಗಿದೆ.

ನಿರಿನಿರಿ ಚಿಮ್ಮಿಸಿ ನಡೆದು ಬರೆ, ಹೂವು ಚೆಲ್ಲಿದ ಹಾದಿಯಲ್ಲಿ, ಕುಣಿತಕಿದೆ ಸೋಲು ಮಣಿತ, ಯಾವ ನೆನಪು, ಸುದ್ದಿಯಿಳಿದೆರಗಿತ್ತು. ಮೊದಲಕೂಟ, ನಡೆದಿದ್ದು ಹರಿಯ ಕೂಟ ಹೀಗೆ ಸುಮಾರು 24 ಶೀರ್ಷಿಕೆಯಡಿ, ಆ ಹೂವು ಚೆಲ್ಲಿದ ಹಾದಿಯಲ್ಲಿ ಮೂಡಿದ ಸ್ಮೃತಿ ಸಂಚಯಗಳನ್ನುಕಾವ್ಯಖಂಡವಾಗಿ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ-ಕೆ.ವಿ.ಸುಬ್ಬಣ್ಣ. 

About the Author

ಕೆ.ವಿ. ಸುಬ್ಬಣ್ಣ
(20 February 1931)

ಕೆ.ವಿ. ಸುಬ್ಬಣ್ಣ ಕನ್ನಡದ ಅಪರೂಪದ ವ್ಯಕ್ತಿಗಳಲ್ಲಿ ಒಬ್ಬರು. ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ. ಎ. ಪದವಿ ಪಡೆದ ನಂತರ ಅವರು ಕೃಷಿಕಾಯಕ ಆರಂಭಿಸಿದರು. ಸಾಹಿತ್ಯ ಕ್ಷೇತ್ರದಲ್ಲಿ ಅವರು ಮಾಡಿದ ಸಾಧನೆ ಅಚ್ಚರಿಪಡುವ ಹಾಗಿದೆ. ಕವಿ, ನಾಟಕಕಾರ, ಅನುವಾದಕರಾಗಿದ್ದ ಅವರು 'ಅಕ್ಷರ ಪ್ರಕಾಶನ' 'ನೀನಾಸಂ ರಂಗ ಚಟುವಟಿಕೆ'ಗಳನ್ನು ನಿರ್ವಹಿಸಿದವರು. ಭಾರತೀಯ ಸಂಸ್ಕೃತಿಗೆ ವಿಶಿಷ್ಟ ಮಾದರಿ ಎನ್ನುವ ಹಾಗೆ ಸಾಹಿತ್ಯಕ, ಸಾಂಸ್ಕೃತಿಕ ಚಟುವಟಿಕೆಗಳನ್ನು ಪುಟ್ಟಹಳ್ಳಿಯಲ್ಲಿ ನಡೆಸಿದ್ದು ಒಂದು ದಾಖಲೆ. ಮ್ಯಾಗ್ಸೆಸ್ಸೆ ಪ್ರಶಸ್ತಿಯಿಂದ ಹೆಗ್ಗೋಡು ಅಂತರರಾಷ್ಟ್ರೀಯ ನಕ್ಷೆಯಲ್ಲಿ ದಾಖಲಾಯಿತು. ಕೆ.ವಿ. ಸುಬ್ಬಣ್ಣ ಒಬ್ಬ ವ್ಯಕ್ತಿಯಲ್ಲ, ಮಹಾನ್ ಶಕ್ತಿ. ಅವರ ಬೆಳವಣಿಗೆ ವೈಯಕ್ತಿಕವಾದದ್ದಲ್ಲ, ಸಾಂಘಿಕವಾದದ್ದು. 'ಅಕ್ಷರ ಪ್ರಕಾಶನದ ಮೂಲಕ , 'ನೀನಾಸಂ' ಮೂಲಕ ಅನೇಕ ಪ್ರತಿಭೆಗಳನ್ನು ಅವರು ...

READ MORE

Related Books