ಸೊನ್ನೆಯಾಗುವ ಕಾಯ

Author : ಬೇಲೂರು ರಘುನಂದನ್

Pages 136

₹ 120.00




Year of Publication: 2018
Published by: ನವಸ್ಫೂರ್ತಿ ಪಬ್ಲಿಕೇಷನ್ಸ್
Address: #621, 1ನೇ ಫ್ಲೋರ್, 2ನೇ ತಿರುವು, 2ನೇ ಮುಖ್ಯರಸ್ತೆ, ಆರ್.ಬಿ.ಐ ಲೇಔಟ್, ಜೆ.ಪಿ. ನಗರ, 7 ಫೇಸ್, ಬೆಂಗಳೂರು

Synopsys

‘ಸೊನ್ನೆಯಾಗುವ ಕಾಯ’ ಕವಿ, ರಂಗಕರ್ಮಿ ಬೇಲೂರು ರಘುನಂದನ್ ಅವರ ಕವಿತಾ ಸಂಕಲನ. ಈ ಕೃತಿಗೆ ಹಿರಿಯ ಕವಿ ಪ್ರೊ. ಎಸ್.ಜಿ. ಸಿದ್ಧರಾಮಯ್ಯ ಅವರ ಬೆನ್ನುಡಿ ಬರಹವಿದೆ. ಕಾವ್ಯದ ಬಗೆಗೆ ಹೇಳುವ ಯಾವ ವ್ಯಾಖ್ಯಾನವೂ ಇದೇ ಅಂತಿಮ ಅಂತಿಲ್ಲ. ಅದರಾಚೆಗೂ ಉಳಿದದ್ದು ನಿಗೂಢ. ಅದು ಅರ್ಥದ ಆಚೆಗಿನ ಲೋಕಸತ್ಯ. ‘ನೆಲ ಗರ್ಭ ಜಲ ಗರ್ಭ ಗಜ ಗರ್ಭ ಜೀವಜೀವದ ಗರ್ಭಗಳೆಲ್ಲಾ ಕತ್ತರಿಸಿಕೊಂಡ ಕುರುಹಿಗೆ ಜೀವ ಜೀವವೂ ಚಿಗುರಿದ ಹೂವು’ ಇತ್ತೀಚಿನ ಕವಿಗಳಲ್ಲಿ ಭಾಷಾ ಪ್ರಯೋಗದ ಪವಾಡ, ಕನ್ನಡದ ಬಹುಗುಣತ್ವಕ್ಕೆ ಕನ್ನಡಿ ಹಿಡಿಯುವ ಪರಿಯದು. ಅದಕ್ಕೆ ಒಂದು ಉದಾಹರಣೆ ಬೇಲೂರು ರಘುನಂದನ್ ಅವರ ಸೊನ್ನೆಯಾಗುವಕಾಯ ಎನ್ನುತ್ತಾರೆ ಎಸ್.ಜಿ.ಎಸ್. ಜೊತೆಗೆ ಇಲ್ಲಿಯ ಜೀವ ಯಾನದ ಅನುಭವ ಅರ್ಥದ ಹಂಗು ಕಟ್ಟಿಕೊಳ್ಳುತ್ತಲೇ, ಅರ್ಥವನ್ನು ನಿರಾಕರಿಸುವ ಸೆಳೆತದಲ್ಲಿ ಬೆಳೆದದ್ದು, ಹೀಗಾಗಿ ಇದು ಪದಾರ್ಥ ಕಾವ್ಯವಲ್ಲ. ಪದಕಾವ್ಯ, ಕಾವ್ಯಕ್ಕೆ ಅನುಭಾವಿಕ ಮಾಂತ್ರಿಕತೆ ಲಭ್ಯವಾಗಬೇಕಾದರೆ, ವ್ಯಷ್ಠಿ ಸಮಷ್ಠಿಗಳ ಸಂಕರದಲ್ಲಿ ಸಂವೇದನೆ, ಧ್ಯಾನ, ಗುರಿಯ ದೀವಿಗೆಯಾಗಬೇಕು. ಆ ಮುನ್ಸೂಚನೆ ಈ ಕಾವ್ಯದಲ್ಲಿ ದಟ್ಟವಾಗಿ ಕಾಣುತ್ತಿದೆ. ಕಣ್ಣುತೆರೆದು ಜಗವ ನೋಡುತ್ತದ್ದರೆ ‘ಯೋಗಕ್ಕೆ ರಹದಾರಿ ಮುಚ್ಚಿದಾಗ ತೆರೆಯುವ ತೆರೆದಾಗ ಮುಚ್ಚಿಕೊಳ್ಳುವುದು ಬದುಕದಾರಿ’ ಈ ಅರಿವಿನ ದಾರಿಯಲ್ಲಿ ಕವಿ ಮಿತ್ರ ರಘುನಂದನರ ಕಾವ್ಯಯಾನ ತನ್ನ ಹೆಜ್ಜೆ ಗುರುತುಗಳನ್ನು ಬಿಂಬಿಸುವುದರಲ್ಲಿ ಸಫಲವಾಗಿದೆ. ಇದು ಇನ್ನೂ ಢಾಳಾಗಿ ಬೆಳೆಯಲಿ ಎಂದು ಹಾರೈಸಿದ್ದಾರೆ.

About the Author

ಬೇಲೂರು ರಘುನಂದನ್
(21 May 1982)

ಬೇಲೂರು ರಘುನಂದನ್ ಹಾಸನ ಜಿಲ್ಲೆಯ ಬೇಲೂರಿನವರು. ಮೂರು ಚಿನ್ನದ ಪದಕಗಳೊಂದಿಗೆ ಕನ್ನಡದಲ್ಲಿ ಎಂ.ಎ.ಪದವೀಧರರು.ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ‘ದೇಜಗೌ ಅವರ ಅನಲಾ ಮತ್ತು ದುಷ್ಟಬುದ್ದಿ ನಾಟಕಗಳು’ ವಿಷಯವಾಗಿ ಎಂ.ಫಿಲ್ ಮತ್ತು ಕನ್ನಡ ರಂಗಭೂಮಿ ಮತ್ತು ಸಿನಿಮಾ: ವ್ಯಕ್ತಿ ನೆಲೆಯ ತಾತ್ವಿಕ ಚಿಂತನೆಗಳು’ ವಿಷಯವಾಗಿ ಪಿಎಚ್ ಡಿ ಪದವೀಧರರು.  ಕವಿ ಹಾಗೂ ನಾಟಕಕಾರರಾಗಿ ಗುರುತಿಸಿಕೊಂಡಿರುವ ರಘುನಂದನ್ ಅವರ ಹಲವು ಕಾವ್ಯ ಸಂಕಲನ, ಕಟ್ಟುಪದಗಳ ಗುಚ್ಛ, ಮಕ್ಕಳ ಕತಾ ಸಾಹಿತ್ಯ, ಪ್ರವಾಸ ಸಾಹಿತ್ಯ ಹಾಗೂ ನಾಟಕ ಪುಸ್ತಕಗಳು ಪ್ರಕಟಗೊಂಡಿವೆ..  ಬೇಲೂರಿನ ಗಮಕ ವಿದ್ವಾನ್ ಬಿ.ಕೆ. ವನಮಾಲಾ ಅವರ ಮಾರ್ಗದರ್ಶನದಲ್ಲಿ ಪಾರೀಣ (ಸೀನಿಯರ್) ಪ್ರಥಮ ದರ್ಜೆಯಲ್ಲಿ ಗಮಕ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ...

READ MORE

Related Books