ನೆಲ ಮುಗಿಲು

Author : ಚೆನ್ನವೀರ ಕಣವಿ

Pages 80

₹ 50.00




Year of Publication: 1965
Published by: ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ
Address: ಸಂ. 9, ’ರಮ್ಯ’, ಗೋಕುಲಂ, 3ನೆಯ ಹಂತರ, ಮೈಸೂರು
Phone: 2513821/9880749412

Synopsys

ಕಣವಿಯವರ ಏಳನೆಯ ಸಂಕಲನ 'ನೆಲಮುಗಿಲು' ಹೊಸ ಕಾವ್ಯದಲ್ಲಿ ಕವಿಯ ಪ್ರಯೋಗಶೀಲತೆಯ ಯಶಸ್ಸನ್ನು ದಾಖಲಿಸಿದೆ. ಈ ಸಂಕಲನದಲ್ಲಿ 60 ಕವಿತೆಗಳಿವೆ. ಈ ಸಂಕಲನಕ್ಕೆ ವರಕವಿ ಬೇಂದ್ರೆಯವರ ಮುನ್ನುಡಿ ಇದೆ.  ಮುನ್ನುಡಿಯಲ್ಲಿ ಬೇಂದ್ರೆಯವರು 'ನೆಲಮುಗಿಲು' ಸಂಗ್ರಹವು ಕವಿಯ ಹಳೆಯ ಗುಣಗಳ ಜತೆಗೆ ಹೊಸ ಬೆಡಗನ್ನೂ ಮೈಗೂಡಿಸಿಕೊಂಡಿದೆ ಎಂದು ಗುರುತಿಸುತ್ತಾರೆ. ಸದ್ಭಾವದ ಶ್ರದ್ದೆ ಗಟ್ಟಿ ಕಾಳಾಗಿದೆ. ಕಣವಿಯವರ ಕವನ ಹತ್ತು ಕಡೆ ಹರಿದುಕೊಳ್ಳದೆ, ಸರ್ವಸಮಯಗಳ ಸಮನ್ವಯಕ್ಕಾಗಿ ತವಕಿಸುತ್ತದೆ.

'ಮೃತ್ಯುಂಜಯ'ರಿಗೆ ಪುಷ್ಪಾಂಜಲಿ ಅರ್ಪಿಸಿದ ಕವಿ ಪಾಂಡಿಚೇರಿಯ ಸಮಾಧಿಗೂ ಕೈ ಮುಗಿಯುತ್ತಾರೆ. ಕುಟುಂಬ ವತ್ಸಲರಾದ ಕಣವಿಯವರು ತಮ್ಮ ಮಗಳು ’ರಂಜನಾ' ಕವಿತೆಯು ಈ ಸಂಕಲನದಲ್ಲಿದೆ.  ಕವಿ ಬದುಕಿನಲ್ಲಿ ತಂದ ಹರ್ಷೋಲ್ಲಾಸದ ಹಾಡಾಗಿ ಹರಿದಿದೆ.

About the Author

ಚೆನ್ನವೀರ ಕಣವಿ
(28 June 1928)

‘ಸಮನ್ವಯ ಕವಿ’ ಎಂದು ಗುರುತಿಸಲಾಗುವ ಚೆನ್ನವೀರ ಕಣವಿ ಅವರು ನವೋದಯ ಮತ್ತು ನವ್ಯ ಸಾಹಿತ್ಯಗಳೆರಡರಲ್ಲಿಯೂ ಸಕ್ರಿಯವಾಗಿ ಪಾಲುಗೊಂಡವರು. ಧಾರವಾಡ ಜಿಲ್ಲೆಯ ಹೊಂಬಳ ಗ್ರಾಮದಲ್ಲಿ 1928ರ ಜೂನ್ 28ರಂದು ಜನಿಸಿದರು. ತಂದೆ ಸಕ್ರಪ್ಪ- ತಾಯಿ ಪಾರ್ವತವ್ವ. ಶಿರುಂಡ, ಗರಗಗಳಲ್ಲಿ ಪ್ರಾಥಮಿಕ ಅಭ್ಯಾಸ ಮುಗಿಸಿದ ಮೇಲೆ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ೧೯೫0ರಲ್ಲಿ ಬಿ.ಎ. ಪದವಿ (1950), ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ.ಪದವಿ (1952) ಗಳಿಸಿದರು. ಕರ್ನಾಟಕದ ವಿಶ್ವವಿದ್ಯಾನಿಲಯದ ಪ್ರಸಾರಾಂಗದಲ್ಲಿ ಕಾರ್ಯದರ್ಶಿ (1952) ಯಾಗಿ ಸೇವೆ ಪ್ರಾರಂಭಿಸಿದ ಕಣವಿ ಅವರು ಅನಂತರ 1958ರಲ್ಲಿ ಅದರ ನಿರ್ದೇಶಕರಾದರು. ಹಲವಾರು ಪ್ರಶಸ್ತಿಗಳು ಕಣವಿ ಅವರ ಸಾಹಿತ್ಯ ...

READ MORE

Awards & Recognitions

Related Books