‘ಉಪ್ಪು ನೀರಿನ ಸೆಲೆ’ ಕೃತಿಯು ಸಮೀರ್ ಹಾದಿಮನಿ ಅವರ ಹಾಯ್ಕುಗಳ ಸಂಕಲನವಾಗಿದೆ. ಇಲ್ಲಿ ಕವನ, ಹನಿಗವನ, ಗಜಲ್, ಸುನೀತಗೀತ ಮುಂತಾದ ಕಾವ್ಯ ಪ್ರಕಾರಗಳಷ್ಟೇ ಹೈಕು ಮೂಲಕವೂ ಕಾವ್ಯದ ಎಲ್ಲಾ ಸಾಧ್ಯತೆಗಳನ್ನು ಸಾಧಿಸಬಹುದು ಎಂಬುದನ್ನು ಎತ್ತಿ ತೋರಿಸಿದೆ. ಇನ್ನು ಇಲ್ಲಿನ ಹೈಕುಗಳಲ್ಲಿ ವಿಷಯ ವೈವಿಧ್ಯ ಎದ್ದುಕಾಣುತ್ತದೆ. ಸೃಷ್ಟಿಯ ಸೊಬಗು, ಮಧುಶಾಲೆ ಮುಂತಾದ ವಿಷಯಗಳನ್ನು ಒಳಗೊಂಡ ರಚನೆಗಳು ಓದುಗರ ಗಮನ ಸೆಳೆಯುತ್ತವೆ. ಪ್ರಮಾಣಬದ್ಧತೆಯ ಛಂದಸ್ಸಿನ ಹೈಕು ರಚನೆ ಕಲೆ ಹಾದೀಮನಿ ಅವರಿಗೆ ಒಲಿದಿದೆ ಎಂದೇ ಹೇಳಬಹುದು. ಇಂಥ ಸುಮಾರು ಎರಡು ನೂರು ಹೈಕುಗಳನ್ನು ಒಳಗೊಂಡ ಈ ಸಂಕಲನವು ನಿರ್ದಿಷ್ಟ ಛಂದಸ್ಸಿನ ಲಯಗಾರಿಕೆಯಲ್ಲಿ ಕವಿತೆ ಹೈಕುವಿನಲ್ಲಿ ಹಿಡಿದಿಟ್ಟಿರುವಂತಹದ್ದು ಅಪರೂಪ.
ಸಮಾಜಸೇವೆ, ವೈದ್ಯಕೀಯ ಸೇವೆಯ ಜೊತೆಗೆ ಗುರುತಿಸಿಕೊಂಡಿರುವ ಸಮೀರ್ ಹಾದಿಮನಿ ಕಲೆ, ಸಾಹಿತ್ಯ, ಸಂಗೀತ ಕ್ಷೇತ್ರಗಳಲ್ಲೂ ಆಸಕ್ತಿಯನ್ನು ಹೊಂದಿದ್ದಾರೆ. ಕೃತಿಗಳು: ಉಪ್ಪು ನೀರಿನ ಸೆಲೆ ...
READ MORE