ಭೂಮ್ಯಾಗಾಸ

Author : ಪೂರೀಗಾಲಿ ಮರಡೇಶಮೂರ್ತಿ

Pages 104

₹ 60.00




Year of Publication: 2010
Published by: ಲಿಖಿತ ಸ್ವರೂಪ್ ಪಬ್ಲಿಕೇಷನ್
Address: ನಂ. 06, 2ನೇ ಮಹಡಿ, ಅಲ್ಲಮಪ್ರಭು ಕಾಂಪ್ಲೆಕ್ಸ್ , ವೀರಶೈವ ಅನಾಥಾಲಯ, 5ನೇ ಕ್ರಾಸ್, ರಾಮಾನುಜ ರಸ್ತೆ, ಮೈಸೂರು -570004
Phone: 9449526390

Synopsys

'ಭೂಮಿ' ಮತ್ತು 'ಆಕಾಶ' ಸಮ್ಮಿಲನದ ಅನಂತತೆಯೇ 'ಭೂಮ್ಯಾಗಾಸ'. ಐವತ್ತಕ್ಕೂ ಹೆಚ್ಚು ಕವಿತೆಗಳನ್ನು ಒಳಗೊಂಡ ಕವನ ಸಂಕಲನ ಇದಾಗಿದ್ದು ಬದುಕಿನ ಹತ್ತು ಹಲವು ವೈರುಧ್ಯ, ದುಗುಡ ದುಮ್ಮಾನಗಳ ಮೂಲಕ ಪ್ರತಿಭಟಿಸಿರುವ ಸಿಟ್ಟು ಸೆಡವು ಈ ಕವಿತೆಯಲ್ಲಿವೆ. "ಕಣ್ಣೆದುರೇ ಹಚ್ಚಿದ ಬೆಂಕಿಗೆ ; ಬೆಂದು ಬೂದಿಯಾದ ಮನೆ ಮಾರಿಗೆ ; ಸುಟ್ಟು ಕರಕಲಾದ ಬದುಕಿಗೆ ; ಕಣ್ಣೀರು ಹರಿದದ್ದೇ ಸಾಕ್ಷಿ !" ಇಂತಹ ಗಟ್ಟಿ ಕವನಗಳ ಸಂಗ್ರಹವಿದು.

About the Author

ಪೂರೀಗಾಲಿ ಮರಡೇಶಮೂರ್ತಿ
(06 June 1966)

ಕವಿ, ಕಾದಂಬರಿಕಾರ ಪೂರೀಗಾಲಿ ಮರಡೇಶಮೂರ್ತಿ ಅವರು ಮೂಲತಃ ಮಂಡ್ಯದವರು. ವಚನ ಸಾಹಿತ್ಯದಲ್ಲಿ ತಮ್ಮೊಳಗಿನ ಅರಿವನ್ನು ಅಭಿವ್ಯಕ್ತಿಸಿದ್ದಾರೆ. ಕನ್ನಡ ಹಾಗೂ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು. ’ಸಿಂಧೂರ ಬಿಂದು’ ಅವರ ಮೊದಲ ಕಾದಂಬರಿ. ಸುಮಾರು  3 ದಶಕಗಳ ಕಾಲ ಸಾಹಿತ್ಯ ಕೈಂಕರ್ಯ ನಡೆಸಿರುವ ಇವರು 50 ಕ್ಕೂ ಹೆಚ್ಚು ಕೃತಿಗಳನ್ನು ನೀಡಿದ್ದಾರೆ. ಮೈಸೂರು ರತ್ನ ಸಾಂಸ್ಕೃತಿಕ ಪ್ರತಿಷ್ಠಾನದಡಿ 25 ವರ್ಷಗಳಿಂದ ಯುವಪೀಳಿಗೆಗೆ ಸಾಹಿತ್ಯ ಕಾರ್ಯಕ್ರಮಗಳನ್ನು ವೈಚಾರಿಕ ನೆಲೆಗಟ್ಟಿನಲ್ಲಿ ನಡೆಸುತ್ತಾ ಬಂದಿದ್ದಾರೆ. ’ನೀಲಿಬಾನಿನ ತಾರೆಗಳು, ಹನಿಗಳು, ಕಾವ್ಯಕನ್ನಿಕೆ’ ಅವರ ಪ್ರಮುಖ ಕವನ ಸಂಕಲನಗಳು. ’ಒಲವಿನ ಕನಸು, ಅವಳು ಭೂಮಿಕೆ, ಸುಳಿ, ಸೂರ್ಯ ...

READ MORE

Related Books