ಎದೆಯೂರಿನ ಮುಸಾಫಿರ್

Author : ಸಂತೋಷ್‌ ಆನಂದ್ನಳ್ಳಿ

Pages 148

₹ 130.00




Year of Publication: 2020
Published by: ರುಕ್ಮಿಣಿ ಪ್ರಕಾಶನ
Address: ಆನಂದನಹಳ್ಳಿ, ಅರಸೀಕೆರ ತಾ. ಹಾಸನ ಜಿಲ್ಲೆ-573103
Phone: 9743664464

Synopsys

ಸಂತೋಷ್‌ ಆನಂದ್ನಳ್ಳಿ ಅವರ ಈ ಚೊಚ್ಚಲ ಕವನ ಸಂಕಲನ-ಎದೆಯೂರಿನ ಮುಸಾಫಿರ್. ಈ ಸಂಕಲನದಲ್ಲಿ 111 ಕವನಗಳಿವೆ. 'ವೀರ ಯೋಧನಿಗೊಂದು ಸಲಾಂ, ಚದುರಂಗ, ತಾಯಿಯ ಋಣ, ಅಣ್ಣಾ ಬಸವಣ್ಣ, ಕುಡುಕನ ಕಥೆ' ಮುಂತಾದ ಕವಿತೆಗಳಿದ್ದು, ವಿಭಿನ್ನ ರೀತಿಯ ವಸ್ತು ವಿಷಯಗಳನ್ನು ಗರ್ಭೀಕರಿಸಿಕೊಂಡು ಹೊರಹೊಮ್ಮಿರುವ ಈ ಕವನಗಳು ಆಪ್ತತೆಯನ್ನು ನೀಡುತ್ತವೆ. ನಿರೂಪಣಾ ಶೈಲಿಯು ಆಕರ್ಷಕವಾಗಿದೆ. 

About the Author

ಸಂತೋಷ್‌ ಆನಂದ್ನಳ್ಳಿ
(09 February 1995)

ಯುವಕವಿ ಸಂತೋಷ್‌ ಆನಂದ್ನಳ್ಳಿ ಅವರದ್ದು ಮೂಲತಃ ಅರಸೀಕೆರೆ. ಅವರು 1995 ಫೆಬ್ರುವರಿ 09ರಂದು ಜನಿಸಿದರು. ಪ್ರಸ್ತುತ ವಾಣಿಜ್ಯ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಚೊಚ್ಚಲ ಕವನ ಸಂಕಲನ ‘ಎದೆಯೂರಿನ ಮುಸಾಫಿರ್‌’, ಕನ್ನಡ ಪುಸ್ತಕ ಪ್ರಾಧಿಕಾರವು ಕೊಡಮಾಡುವ ಯುವ ಬರಹಗಾರರ ಚೊಚ್ಚಲ ಕೃತಿಯ ಪ್ರೋತ್ಸಾಹ ಧನಕ್ಕೆ ಆಯ್ಕೆಯಾಗಿದೆ. ...

READ MORE

Related Books