ಚೈತ್ರಾಕ್ಷಿ

Author : ಕೀರ್ತಿ ಪಿ. (ಸೂರ್ಯ ಕೀರ್ತಿ)

Pages 88

₹ 120.00




Year of Publication: 2017
Published by: ಮಿಂಚುಳ್ಳಿ ಪ್ರಕಾಶನ
Address: ಇಂದಿರಾ ಬಡಾವಣೆ, 6ನೇ ತಿರುವು, ಗುರುಪುರ, ಶಿವಮೊಗ್ಗ-577204
Phone: 9591367320

Synopsys

ಕೀರ್ತಿ ಪಿ. ಅವರ ಮೊದಲ ಕವನ ಸಂಕಲನ ಚೈತ್ರಾಕ್ಷಿ. ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು ಇವರ ಧನಸಹಾಯ ಪಡೆದ ಕೃತಿ ಇದಾಗಿದೆ. ಚೈತ್ರಾಕ್ಷಿಗೆ 2018ನೇ ಸಾಲಿನ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತು ಕೊಡಮಾಡುವ ‘ಸುಮನ್ ಸೋಮಶೇಖರ ಸೋಮವಾರಪೇಟೆ’ದತ್ತಿ ಪ್ರಶಸ್ತಿ ಲಭಿಸಿದೆ. 

ಕಾವ್ಯದ ಸಮಸ್ತ ಪ್ರಕಾರಗಳನ್ನು ತಮ್ಮ ಕವಿತೆಗಳಲ್ಲಿ ಬಳಸಲು ಯತ್ನಿಸಿರುವುದು ಕೀರ್ತಿ ಅವರ ಕಾವ್ಯಪ್ರತಿಭೆಗೆ ಸಾಕ್ಷಿ ಎನ್ನುತ್ತಾರೆ ಡಾ.ಸರಜೂ ಕಾಟ್ಕರ್. ಬೆನ್ನುಡಿ ಬರೆದಿರುವ ಸರಜೂ ಕಾಟ್ಕರ್ ಅವರು ಚೈತ್ರಾಕ್ಷಿ ಮತ್ತು ಕವಿ ಕೀರ್ತಿಯವರ ಬಗ್ಗೆ ಭರವಸೆಯ ಮಾತುಗಳನ್ನಾಡುತ್ತಾರೆ. ಸೃಷ್ಟಿ ಹಾಗೂ ನಿಖರವಾದ ವಿಚಾರಗಳಿಗೆ ಕಾವ್ಯ ಒಂದು ರೀತಿಯಲ್ಲಿ ಪ್ರತಿಭಟನೆಯ ಅಸ್ತ್ರವಾಗಿದೆ ಎಂಬುದು ಅವರ ಅಭಿಪ್ರಾಯ. ಇನ್ನು ಕೀರ್ತಿ ಅವರ ಕವಿತೆಗಳಲ್ಲಿ ವಸ್ತು ವೈವಿಧ್ಯವಿದೆ. ಅಭಿವ್ಯಕ್ತಿಯಲ್ಲಿ ಪ್ರಾಮಾಣಿಕತೆ ಇದೆ ಎನ್ನುತ್ತಾರೆ ಲೇಖಕಿ ಎಂ.ಆರ್. ಕಮಲಾ. ನಿಸರ್ಗ ರಮ್ಯತೆಯ ಬಗ್ಗೆ ರುಚಿಯಿದೆ. ಭಾಷೆಯಲ್ಲಿ ಭಾವಗೀತಾತ್ಮಕ ಗುಣವಿದೆ. ಕತ್ತಲನ್ನು ಒಪ್ಪಿಕೊಂಡೇ ಬೆಳಕಿನ ಬಟ್ಟೆಯನ್ನು ಕವಿತೆಗಳು ಅರಸುತ್ತವೆ. ಪ್ರತೀ ಕವಿತೆಯಲ್ಲೂ ಹೊಸತನಕ್ಕಾಗಿ ತುಡಿವ ಕೀರ್ತಿ ಅವರು ಸಾಹಿತ್ಯದ ಹಲವು ಮಜಲುಗಳಲ್ಲಿ ಕೃಷಿ ಮಾಡುತ್ತಿದ್ದಾರೆ. 

About the Author

ಕೀರ್ತಿ ಪಿ. (ಸೂರ್ಯ ಕೀರ್ತಿ)
(29 January 1994)

ಸೂರ್ಯಕೀರ್ತಿ ಅವರು ತುಮಕೂರಿನ ನೆಲಮೂಲದ ಕವಿ. ಇವರ ಕವಿತೆಗಳು ಚೈನೀಸ್, ಬೆಂಗಾಲಿ, ಹಿಂದಿ, ತುರ್ಕಿ, ಇಂಗ್ಲೀಶ್, ತೆಲುಗು ಮುಂತಾದ ಭಾಷೆಗಳಿಗೆ ಅನುವಾದಗೊಂಡಿವೆ. ಇವರು ಮೂಲತಃ ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೊಕಿನ ಬೆಟ್ಟಹಳ್ಳಿ ಗ್ರಾಮದಲ್ಲಿ ಜನಿಸಿದವರು, ಗ್ರಾಮೀಣ ಬದುಕಿನ ವಿಸ್ತಾರಗಳು ಇವರ ಬರಹದ ಮೂಲಕ ಕಾಣಬಹುದು. ಬೆಂಗಳೂರು ವಿಶ್ವವಿದ್ಯಾಲಯದಿಂದ ವಾಣಿಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು (ಎಂ.ಕಾಂ) ಉನ್ನತ ಶ್ರೇಣಿಯಲ್ಲಿ ಮುಗಿಸಿಕೊಂಡು,  ಕನ್ನಡ ರತ್ನ ಪರೀಕ್ಷೆಯಲ್ಲಿ ಕರ್ನಾಟಕ  ರಾಜ್ಯಕ್ಕೆ ಮೊದಲ ರ್ಯಾಂಕ್ ಗಳಿಸಿದ ಸೂರ್ಯ ಕೀರ್ತಿ ಅವರು  ನ್ಯಾಷನಲ್  ಕಾಲೇಜು, ಬಸವನಗುಡಿ, ಬೆಂಗಳೂರಿನಲ್ಲಿ ಕನ್ನಡ ಎಂ.ಎ ಯನ್ನು  ಆಸಕ್ತಿಯಿಂದ ಅಧ್ಯಯನ ಮಾಡಿ, ...

READ MORE

Related Books