ಕಣ್ಣ ಪುಟಪುಟಗಳಲಿ....

Author : ಪೂರೀಗಾಲಿ ಮರಡೇಶಮೂರ್ತಿ

Pages 120

₹ 100.00




Year of Publication: 2015
Published by: ಲಿಖಿತ ಸ್ವರೂಪ್ ಪಬ್ಲಿಕೇಶನ್ಸ್
Address: ನಂ.06, 2ನೇ ಮಹಡಿ, ಅಲ್ಲಮಪ್ರಭು ಕಾಂಪ್ಲೆಕ್ಸ್ , ವೀರಶೈವ ಅನಾಥಾಲಯ, 5ನೇ ಕ್ರಾಸ್, ರಾಮಾನುಜ ರಸ್ತೆ, ಮೈಸೂರು-570004.
Phone: 9449526390

Synopsys

ಕಣ್ಣು ಪುಟಪುಟಗಳಲಿ.. ಪೂರೀಗಾಲಿ ಮರಡೇಶಮೂರ್ತಿ ಅವರ ಕವನ ಸಂಕಲನ. ಪ್ರೀತಿ, ಪ್ರೇಮ, ಸ್ನೇಹ, ಪ್ರಕೃತಿಪರ ಅನಿಸಿಕೆಗಳು, ಆಸೆಗಳ ಓಣಿಯಲ್ಲಿ ಕುಳಿತು, ಕತೆ- ಕಾವ್ಯ ಕಟ್ಟುವ ರೀತಿ, ಪ್ರೇಮ ಕಥನಗಳ ಬಿಚ್ಚಿಟ್ಟಂತೆ ಕವಿತೆಗಳು ಸಾಗುತ್ತವೆ.  `ಸುಗ್ಗಿಯ ಹಾಗೆ’ ಪದ್ಯ ಹೀಗೆ ತಂತಾನೆ ತೆರೆದುಕೊಳ್ಳುತ್ತದೆ. ಇಡೀ ಸಂಕಲನ ಕಣ್ಣಿನ ಪುಟಪುಟಗಳಲ್ಲಿ ತೆರೆದುಕೊಳ್ಳುವ ಒಂದು ರೀತಿಯ ರೋಮಾಂಚಕರ. `ಓ ದುಂಬಿಯೇ ನೀ ತಾಕಿದರೆ ಹೂಗಳು ಅರಳಾವು, ಓ ಮಕರಂದವೇ ನೀ ದಕ್ಕಿದರೆ ಜೇನು ನಕ್ಕಾವು, ಓ ಪ್ರೀತಿ ಹುಡುಗಿ, ನೀ ಮುಟ್ಟಿದರೆ ಕನಸು ಬಿದ್ದಾವು!’ ಇಲ್ಲಿ ಪ್ರೀತಿಯ ಒರತೆ ಕಣ್ಣು ಬಿಟ್ಟಿರುವುದೇ ಹೀಗೆ. ಒಟ್ಟು ಪ್ರೀತಿಯ ಕನವರಿಕೆಗಳು ಮುದ ನೀಡುತ್ತವೆ. 

 

About the Author

ಪೂರೀಗಾಲಿ ಮರಡೇಶಮೂರ್ತಿ
(06 June 1966)

ಕವಿ, ಕಾದಂಬರಿಕಾರ ಪೂರೀಗಾಲಿ ಮರಡೇಶಮೂರ್ತಿ ಅವರು ಮೂಲತಃ ಮಂಡ್ಯದವರು. ವಚನ ಸಾಹಿತ್ಯದಲ್ಲಿ ತಮ್ಮೊಳಗಿನ ಅರಿವನ್ನು ಅಭಿವ್ಯಕ್ತಿಸಿದ್ದಾರೆ. ಕನ್ನಡ ಹಾಗೂ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು. ’ಸಿಂಧೂರ ಬಿಂದು’ ಅವರ ಮೊದಲ ಕಾದಂಬರಿ. ಸುಮಾರು  3 ದಶಕಗಳ ಕಾಲ ಸಾಹಿತ್ಯ ಕೈಂಕರ್ಯ ನಡೆಸಿರುವ ಇವರು 50 ಕ್ಕೂ ಹೆಚ್ಚು ಕೃತಿಗಳನ್ನು ನೀಡಿದ್ದಾರೆ. ಮೈಸೂರು ರತ್ನ ಸಾಂಸ್ಕೃತಿಕ ಪ್ರತಿಷ್ಠಾನದಡಿ 25 ವರ್ಷಗಳಿಂದ ಯುವಪೀಳಿಗೆಗೆ ಸಾಹಿತ್ಯ ಕಾರ್ಯಕ್ರಮಗಳನ್ನು ವೈಚಾರಿಕ ನೆಲೆಗಟ್ಟಿನಲ್ಲಿ ನಡೆಸುತ್ತಾ ಬಂದಿದ್ದಾರೆ. ’ನೀಲಿಬಾನಿನ ತಾರೆಗಳು, ಹನಿಗಳು, ಕಾವ್ಯಕನ್ನಿಕೆ’ ಅವರ ಪ್ರಮುಖ ಕವನ ಸಂಕಲನಗಳು. ’ಒಲವಿನ ಕನಸು, ಅವಳು ಭೂಮಿಕೆ, ಸುಳಿ, ಸೂರ್ಯ ...

READ MORE

Related Books