ಮುಕ್ತಕಸುಧೆ

Author : ಕಿರಣ್ ಸಿಡ್ಲೇಹಳ್ಳಿ

Pages 158

₹ 150.00




Year of Publication: 2020
Published by: ಕಿರಣ್ ಸಿಡ್ಲೇಹಳ್ಳಿ
Address: ಶ್ರೀ ಭ್ರಮರಾಂಭ ಮಲ್ಲಿಕಾರ್ಜುನ ನಿಲಯ, ವಾರ್ಡ್ 11, ಬಿಡುಗಲು, ಸರಗೂರು, ಸರಗೂರು ತಾಲ್ಲೂಕು.ಮೈಸೂರು ಜಿಲ್ಲೆ.
Phone: 9481530236

Synopsys

'ಮುಕ್ತಕಸುಧೆ' ಕವಿ ಕಿರಣ್ ಸಿಡ್ಲೇಹಳ್ಳಿ ಅವರ ಮುಕ್ತಕಗಳ ಸಂಕಲನ. ಒಟ್ಟು 684 ಮುಕ್ತಕಗಳಿವೆ. ಪ್ರತಿಮುಕ್ತಕವು 'ರತ್ನಕಂದ' ಅಂಕಿತನಾಮದೊಂದಿಗೆ ಪೂರ್ಣಗೊಳ್ಳುತ್ತದೆ. ನಾಲ್ಕು ಸಾಲುಗಳಿಂದ ಕೂಡಿದ ಮಕ್ತಕಗಳು ಮೊದಲ ಮತ್ತು ಮೂರನೇ ಸಾಲು ಐದು ಮಾತ್ರೆಯ ನಾಲ್ಕು ಗುಣ ಒಟ್ಟು 20 ಮಾತ್ರೆಗಳು ಎರಡನೇ ಮತ್ತು ನಾಲ್ಕನೇ ಸಾಲುಗಳು 16 ಮಾತ್ರೆಗಳಿಂದ ರಚಿಸಿದ್ದು ಆದಿಪ್ರಾಸದಿಂದ ಕೂಡಿವೆ. ಗಜ,ಸಿಂಹ,ಅಜ,ಹಯ,ವೃಷಭ,ಶರಭ ಪ್ರಾಸಗಳು ಮುಕ್ತಕದ ಸೊಬಗನ್ನು ಹೆಚ್ಚಿಸುವುದರ ಜೊತೆಗೆ ಸ್ವಚ್ಛಂದವಾಗಿ ಮೂಡಿಬಂದಿರುವುದು ಕೃತಿಯ ವಿಶೇಷ.

ಮುಕ್ತಕದ ಗುರುದೇವ ಶಕ್ತಿಯನು ನೀಡೆನಗೆ
      ಭಕ್ತಿಯಲಿ ಭಜಿಸುವೆನು ನಿನ್ನ ನಾಮ|
      ಶಕ್ತಿಯನು ನೀನಿತ್ತು ಪದಮಾಲೆಯೆನಗಿತ್ತು
      ಯುಕ್ತಿಯಲಿ ಬರೆಸು ನೀ-ರತ್ನಕಂದ|| 
ಎಂದು ತನ್ನ ಆತ್ಮಗುರುವನ್ನು ಭಜಿಸುತ್ತಾ ಪ್ರಾರಂಭವಾದ ಮುಕ್ತಕಗಳು ಬದುಕಿಗೆ ಬೇಕಾದ ಮೌಲ್ಯಯುತ ಸಂದೇಶಗಳನ್ನು ಸಾರುವುದರೊಂದಿಗೆ ಕವಿ ತಾನು ಕಂಡುಂಡ ಜೀವನಾನುಭವವನ್ನು ಮುಕ್ತಕಗಳಲ್ಲಿ ಹಿಡಿದಿಡುತ್ತವೆ. 

ಕೃತಿಗೆ ಕರ್ನಾಟಕ ಮುಕ್ತಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಸ್.ರಾಮಪ್ರಸಾದ್ ಮುನ್ನುಡಿ ಬರೆದಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರೇವಣ್ಣ ಅವರು ಆಶಯನುಡಿ, ಕರ್ನಾಟಕ ಮುಕ್ತಕ ಕವಿ ಪರಿಷತ್ತಿನ ಅಧ್ಯಕ್ಷ ಎಂ.ಮುತ್ತುಸ್ವಾಮಿ ಅವರು ಬೆನ್ನುಡಿ ಬರೆದಿದ್ದಾರೆ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಛಂದೋನಿಯಮದಡಿ ಮೂಡಿಬಂದಿರುವ ಕೃತಿಗಳ ಸಾಲಿನಲ್ಲಿಈ ಕೃತಿಯೂ ಸಹ ನಿಲ್ಲುತ್ತದೆ. 

About the Author

ಕಿರಣ್ ಸಿಡ್ಲೇಹಳ್ಳಿ
(08 October 1982)

ಕವಿ ಕಿರಣ್ ಸಿಡ್ಲೇಹಳ್ಳಿ ಮೂಲತಃ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಸಿಡ್ಲೇಹಳ್ಳಿಯವರು. ರತ್ನಕಂದ -ಇವರ ಕಾವ್ಯನಾಮ. ತಂದೆ ಸಿದ್ಧಲಿಂಗಯ್ಯ ತಾಯಿ  ರತ್ನಮ್ಮ. ಕಿರಣ್ ಅವರು ಎಂ.ಎ,ಬಿ.ಇಡಿ, ಪದವೀಧರರು. ಕಳೆದ 4 ವರ್ಷಗಳಿಂದ ಕ್ಲಸ್ಟರ್ ಸಂಪನ್ಮೂಲ ಸಂಯೋಜಕರಾಗಿದ್ದಾರೆ. ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿ ರಾಜ್ಯದ ವಿವಿಧೆಡೆ ಶಿಕ್ಷಕರಿಗೆ ತರಬೇತಿ ನೀಡಿದ್ದಾರೆ. ಶ್ರಿ ಮುತ್ತುಸ್ವಾಮಿ ಅವರ ಪ್ರೇರಣೆ ಹಾಗೂ ಮಾರ್ಗದರ್ಶನದಲ್ಲಿ ಮುಕ್ತಕಗಳ ರಚನೆ ಮಾಡಿದ್ದಾರೆ.  ಪ್ರಸ್ತುತ ರಾಜ್ಯ ಮುಕ್ತಕ ಕವಿ ಪರಿಷತ್ತಿನ ಕಾರ್ಯದರ್ಶಿಯಾಗಿದ್ದಾರೆ. ಸಾವಿರಕ್ಕೂ ಹೆಚ್ಚು ಮುಕ್ತಕಗಳನ್ನು ವಿವಿಧ ಛಂದೋನಿಯಮದಲ್ಲಿ ರಚಿಸಿದ್ದಾರೆ. ಕೃತಿಗಳು: .ಮುಕ್ತಕ ಸುಧೆ (ಮುಕ್ತಕಗಳ ಸಂಕಲನ) ,ಭಾವಕಿರಣ,ನಂಬುಗೆಯ ಕೊಡ  ಪ್ರಶಸ್ತಿ-ಗೌರವಗಳು: ಭಾರತ್ ಸ್ಕೌಟ್ ನಿಂದ ...

READ MORE

Related Books