ಆಧುನಿಕ ವಚನಗಳು

Author : ಶಿವಣ್ಣ ಇಜೇರಿ

Pages 60

₹ 20.00




Year of Publication: 2010
Published by: ಕಾಯಕ ಪ್ರಕಾಶನ
Address: ಕುಂಬಾರ ಓಣಿ, ತಾ: ಶಹಾಪುರ, ಜಿ: ಯಾದಗಿರಿ-585223
Phone: 8105010777

Synopsys

ದೇವರು, ಧರ್ಮಗಳ ಹೆಸರಿನಲ್ಲಿ ನಡೆಯುವ ಶೋಷಣೆಯ ವಿರುದ್ಧ ವಚನಗಳ ವೈಚಾರಿಕತೆಯನ್ನು ತಳಹದಿಯಾಗಿಸಿಕೊಂಡು ಶಿವಣ್ಣ ಇಜೇರಿ ಅವರು ಬರೆದ ಕವನ ಸಂಕಲನವೇ -’ಆಧುನಿಕ ವಚನಗಳು’. ಮಾನವನ ಜೀವನ ಸಾರ್ಥಕತೆಗೆ ಶರಣರ ವಚನಗಳ ಪಾಲನೆ ಅಗತ್ಯ ಹಾಗೂ ಅನಿವಾರ್ಯ ಎಂದೇ ಇಲ್ಲಿಯ ಬಹುತೇಕ ಕವನಗಳು ಸಮರ್ಥಿಸಿಕೊಳ್ಳುತ್ತವೆ. ಪ್ರತಿ ಕವನವು ಪ್ರಖರ ವಿಚಾರಗಳನ್ನು ಒಳಗೊಂಡಿದೆ. ವೈಜ್ಞಾನಿಕ -ವೈಚಾರಿಕ ವಿಚಾರಗಳಿಲ್ಲದ ಬದುಕಿನ ಬಗ್ಗೆ ಕವಿಗಳು ಅಚ್ಚರಿ ವ್ಯಕ್ತಪಡಿಸಿದ್ದು, ಸಾಮಾಜಿಕ-ಧಾರ್ಮಿಕ ಶೋಷಣೆಗಳ ವಿರುದ್ಧ ನಡೆಸಿದ ಶರಣರ ಬದುಕನ್ನು ಇಲ್ಲಿಯ ಕವಿತೆಗಳು ಗಾಢವಾಗಿ ಅಪ್ಪಿಕೊಳ್ಳುತ್ತವೆ.

 

About the Author

ಶಿವಣ್ಣ ಇಜೇರಿ
(13 May 1952)

ಶಹಾಪುರದ ಅಡತಿ ಅಂಗಡಿವೊಂದರಲ್ಲಿ ಗುಮಾಸ್ತರಾದ ಶಿವಣ್ಣ ಇಜೇರಿ ಅವರು ಸಾಹಿತ್ಯಾಸಕ್ತರು. ವಚನ ಸಾಹಿತ್ಯ ತತ್ವ ಅನುಯಾಯಿ. ಉಡಿಯಲ್ಲಿಯ ಉರಿ, ಆಧುನಿಕ ವಚನಗಳು , ಕರಗದ ಬೆಣ್ಣೆ ಹೀಗೆ 5 ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಶರಣರ ವಚನಗಳ ವಿಶ್ಲೇಷಕರು. ’ಬಸವ ಮಾರ್ಗ’ ಮಾಸಿಕದಲ್ಲಿ ಲೇಖಕರು. ಶರಣರ ವಿಚಾರ ಪ್ರಸಾರ-ಪ್ರಚಾರಕ್ಕಾಗಿ ಹಿರಿಯ ಸಾಹಿತಿ ದಿ.ಲಿಂಗಣ್ಣ ಸತ್ಯಂಪೇಟೆ ಅವರು ಬಸವ ಮಾರ್ಗ ಪ್ರತಿಷ್ಠಾನದಿಂದ ಆರಂಭಿಸಿದ”ಮನೆಯಲ್ಲಿ ಮಹಾಮನೆ’ ಚಿಂತನಾ ಚಟುವಟಿಕೆಯನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ. ...

READ MORE

Related Books