ಸಂಕ್ರಮಣ ಕಾವ್ಯ

Author : ಗಿರಡ್ಡಿ ಗೋವಿಂದರಾಜ

Pages 144

₹ 63.00




Year of Publication: 2017
Published by: ಸಪ್ನ ಬುಕ್ ಹೌಸ್
Address: ಆರ್.ಓ. #11, 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು-9

Synopsys

ಸಂಕ್ರಮಣ ಕಾವ್ಯ-ಇದು ಸಂಕ್ರಮಣ ಮಾಸಿಕದಲ್ಲಿ ಪ್ರಕಟಿತ ಪ್ರಾತಿನಿಧಿಕ ಕವಿತೆಗಳ ಸಂಕಲನ. ಡಾ. ಗಿರಡ್ಡಿ ಗೋವಿಂದರಾಜ, ಪ್ರೊ. ಚಂದ್ರಶೇಖರ ಚಂಪಾ ಹಾಗೂ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಅವರು ಸಂಯುಕ್ತವಾಗಿ ಸಂಪಾದಿಸಿದ ಕೃತಿ. ಸಾಹಿತ್ಯ ಪ್ರಕಟಣೆ, ವಿಮರ್ಶೆ ವಲಯದಲ್ಲಿ ಸಂಕ್ರಮಣ ಮಾಸಿಕ ಪತ್ರಿಕೆಗೆ ತನ್ನದೇ ಆದ ಘನತೆ-ಸ್ಥಾನವಿದೆ. ಇಲ್ಲಿ ಪ್ರಕಟಿತ ಸಾಹಿತ್ಯಕ್ಕೂ ಗಾಂಭೀರ್ಯವಿದೆ. ಹೀಗಾಗಿ, ಈ ಮಾಸಿಕದಲ್ಲಿ ಪ್ರಕಟಿತ ಪ್ರಾತಿನಿಧಿಕ ಕೆಲವು ಕವಿತೆಗಳನ್ನು ಇಲ್ಲಿ ಸಂಕಲಿಸಿದ್ದು, ಸಾಹಿತ್ಯದ ಗುಣಮಟ್ಟ ಅಧ್ಯಯನ ಹಾಗೂ ವಿಮರ್ಶೆಗೆ ಒಡ್ಡಲು ಈ ಕೃತಿ ಉತ್ತಮ ಗ್ರಂಥವಾಗಿದೆ.

About the Author

ಗಿರಡ್ಡಿ ಗೋವಿಂದರಾಜ
(22 September 1939 - 11 May 2018)

ಖ್ಯಾತ ವಿಮರ್ಶಕ ಗಿರಡ್ಡಿ ಗೋವಿಂದರಾಜ ಅವರು ಮೂಲತಃ ಧಾರವಾಡ ಜಿಲ್ಲೆಯ ಅಬ್ಬಿಗೇರಿಯವರು. ತಂದೆ ಅಂದಾನಪ್ಪ ಮತ್ತು ತಾಯಿ ನಾಗಮ್ಮ. ಕನ್ನಡ ಮತ್ತು ಇಂಗ್ಲಿಷ್‌ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಇಂಗ್ಲಿಷ್‌ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ ನಿವೃತ್ತರಾಗಿದ್ದರು. ಸಣ್ಣಕತೆ-ಪ್ರಬಂಧಗಳನ್ನು ಪ್ರಕಟಿಸಿದ್ದಾರೆ. ಇಂಗ್ಲೆಂಡ್, ಬೆಲ್ಸಿಯಂ, ಫ್ರಾನ್ಸ್, ಸರೆಂಡ್, ಇಟಲಿಗಳಲ್ಲಿ ಉಪನ್ಯಾಸ ನೀಡಿರುವ ಅವರು ಇಂಗ್ಲಿಷ್‌ ಸ್ಟಡೀಸ್ ನಲ್ಲಿ ಡಿಪ್ಲಮೊ ಪಡೆದು ಕಲಬುರ್ಗಿಯ ಸ್ನಾತಕೋತ್ತರ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿದ್ದರು. ಬ್ರಿಟಿಷ್ ಕೌನ್ಸಿಲ್ ವಿದ್ಯಾರ್ಥಿ ವೇತನ ಪಡೆದು  ಇಂಗ್ಲೆಂಡಿಗೆ ಭಾಷಾ ವಿಜ್ಞಾನದಲ್ಲಿ ವಿಶೇಷ ಅಧ್ಯಯನ ನಡೆಸಿದರು. ಅವರು ಹೈಸ್ಕೂಲಿನಲ್ಲಿರುವಾಗಲೇ 'ಶಾರದಾಲಹರಿ' ಎಂಬ ನೀಳ್ಗವಿತೆ ಪ್ರಕಟಿಸಿದ್ದರು. ನಾಟಕ ಅಕಾಡೆಮಿಯ ಫೆಲೋಶಿಪ್ ದೊರೆತಿರುವ ...

READ MORE

Related Books