‘ಪ್ರೀತಿಯ ಪಂಚಗವ್ಯ' ಸಂಕಲನದ ಕವಿತೆಗಳಲ್ಲಿ ಅಬ್ಬರವಿಲ್ಲ. ನೀರು ಸಮುದ್ಸರ ಸೇರುವಂತೆ ಸಹಜತೆ ಇದೆ. ಎಲ್ಲ ಕವಿತೆಗಳು ಕವಯತ್ರಿಯ ಸ್ವಗತವಾಗಿವೆ. ‘ಆದರೆ' ಎಂಬ ಕವನದ ಸಾಲುಗಳು : `ಅಪ್ಪಿಕೊಳ್ಳಬೇಕೆನಿಸುತ್ತಿದೆ ಆದರೆ ಕೈಗಳು ಸೋತಿವೆ' ಇಲ್ಲಿ ಆಸೆ -ಹಂಬಲ ಮತ್ತು ಹತಾಶೆ -ನಿರಾಶೆ ಒಟ್ಟಾಗಿ ಧ್ವನಿಸುತ್ತವೆ. ‘ಅವನು..’ ಕವಿತೆಯ ಸಾಲುಗಳು ಹೀಗಿವೆ ‘ನನ್ನೆದೆಯ ಗೋರಿಯಲ್ಲಿ ಹಾಯಾಗಿ ಮಲಗಿದ್ದ ಬಯಕೆಗಳ ಹಿಂಡನ್ನು ತಟ್ಟಿ ಎಬ್ಬಿಸಿದ್ದೇಕೋ ನೀನು ’ ಹೀಗೆ ಕವಯತ್ರಿಯ ಬಿಚ್ಚು ಮನಸ್ಸಿನ ಸಾಲುಗಳು ನಮ್ಮನ್ನು ಎದುರಾಗುತ್ತವೆ.
ಲೇಖಕಿ ಮತ್ತು ಕವಯತ್ರಿ ವಿಜಯಲಕ್ಷ್ಮಿ ಸತ್ಯಮೂರ್ತಿ ಅವರ ಸಾಹಿತ್ಯ ಯಾನ ಶುರುವಾಗಿದ್ದು ಇತ್ತಿಚಿನ ದಿನಗಳಲ್ಲಿ. ಅವರ ಮೊದಲ ಕೃತಿ, 2016 ಅಂತರಂಗದ ಭಾವನೆಗಳ `ಸಂವೇದನೆ’ ಕೃತಿ ಪ್ರಕಟವಾಯಿತು. ಬಸವನ ಬಾಗೇವಾಡಿಯಲ್ಲಿ ಕಳೆದ 2017ರ ಬಸವ ವಿಭೂಷಣ ರಾಷ್ಟ್ರೀಯ ಪ್ರಶಸ್ತಿ, ಧಾರವಾಡದ ಚೆನ್ನಮ್ಮ ಪುಸ್ತಕ ಪ್ರಶಸ್ತಿ ದೊರೆತಿದೆ. 2019 ರ ಕೆ. ಎಸ್. ನರಸಿಂಹ ಸ್ವಾಮಿ ಕಾವ್ಯ ಪುರಸ್ಕಾರ ದೊರೆತಿದೆ. ‘ನವಮಿ’ ಅವರ ಕಥಾಸಂಕಲನ, ‘ಗಂಧದೋಕುಳಿ’, ‘ಸಾಗರವ ಗೆದ್ದವಳು’ ಕವನ ಸಂಕಲನ. ಪಂಚಮಿ ಹಾಗೂ ಪ್ರೀತಿಯ ಪಂಚಗವ್ಯ ಕೃತಿಗಳು 2019ರಲ್ಲಿ ಪ್ರಕಟವಾಗಿವೆ. ಕನ್ನಡ ವಚನ ಸಾಹಿತ್ಯ ಪರಿಷತ್ತು ವತಿಯಿಂದ ...
READ MOREತಮ್ಮ ಮೂರನೆಯ ಕವನ ಸಂಕಲನದಲ್ಲಿ ಕವಯಿತ್ರಿ ವಿಜಯಲಕ್ಷ್ಮಿ ಸತ್ಯಮೂರ್ತಿ ಅವರು ಪ್ರೀತಿಯ ಸಿಂಚನವನ್ನು ನೀಡುವುದರ ಜತೆಯಲ್ಲೇ, ಪಂಚಗವ್ಯದ ಹೋಲಿಕೆಯಲ್ಲಿ ಕವನಗಳನ್ನು ಕಟ್ಟಿಕೊಟ್ಟಿದ್ದಾರೆ. ಹಾಗೆ ನೋಡಿದರೆ ಇಲ್ಲಿರುವ ಕವನಗಳಲ್ಲಿ ಪ್ರೀತಿಯ ವಿವಿಧ ಮುಖಗಳನ್ನು ನೋಡಬಹುದು. ಒಮ್ಮೊಮ್ಮೆ ಪ್ರೀತಿಯ ಹುಚ್ಚು ಹೊಳೆ ಹರಿದರೆ, ಇನ್ನೊಮ್ಮೆ ಪ್ರೀತಿಯ ಇನ್ನೊಂದು ಮುಖ ಎನಿಸಿದ ವಿರಹದ ಕಣ್ಣೀರು ಅಲ್ಲಲ್ಲಿ ಹರಿಯುತ್ತದೆ. 'ಮನದ ಮಾತುಗಳು ನನ್ನೆದೆಯ/ಕೋಣೆಯಲಿ ರಾಶಿ ರಾಶಿ ಹರಡಿವೆ/ ಅದನಾಲಿಸಲು ನೀನೇ ಬರಬೇಕು' (ಪುಟ 35) 'ಜೇನು ಒಸರುತ್ತಿರುವ ಅಧರಗಳಿಗೆ ನೀ ನೀಡು/ಮುತ್ತಿನಾ ಮುಕ್ತಿ/ ಬಯಕೆಗಳಿಂದ ನರಳುತಿರುವ / ತನುವಿಗೆ ನೀ ನೀಡು | ಅಪ್ಪುಗೆಯ ಮುಕ್ತಿ' (ಪುಟ 49) ಈ ಸಾಲುಗಳು ಪ್ರೀತಿಯ ಮಧುರ ಭಾವಗಳನ್ನು, ಬಯಕೆಯನ್ನು ಬಿಂಬಿಸುತ್ತವೆ. ಒಮ್ಮೆ ಕಣ್ಣಲ್ಲಿ ನೀರು ಜಿನುಗಿದರೂ | ಜೊತೆಗೇ ನಗುವುಕ್ಕುವುದು / ಒಮ್ಮೆ ಒಡನಾಟದ ಜೇನಮಳೆಯ ಕಂಪು/ ಮತ್ತೊಮ್ಮೆ ವಿರಹದ ಜೊಂಪು' (ಪುಟ 62) ಇಲ್ಲಿ ಪ್ರೀತಿಸಿದ ಜೀವ ಅನುಭವಿಸುವ ವಿರಹದ ನೋವಿದೆ.
- ಶಶಿಧರ ಹಾಲಾಡಿ
ಕೃಪೆ : ವಿಶ್ವವಾಣಿ (2020 ಫೆಬ್ರುವರಿ 09)