ಯಳಮೇಲಿ-30

Author : ರಮೇಶ ಎಸ್.ಕತ್ತಿ

Pages 136

₹ 120.00




Year of Publication: 2020
Published by: ಕನ್ನಡ ಸಾಹಿತ್ಯ ಪರಿಷತ್ತು
Address: ತಾಲೂಕು ಘಟಕ, ಆಲಮೇಲ-586 202 , ತಾ: ಸಿಂದಗಿ ವಿಜಯಪುರ ಜಿಲ್ಲೆ

Synopsys

ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿರುವ ಯಳಮೇಲಿ-30 ಕೃತಿಯನ್ನು ಸಾಹಿತಿ ಡಾ. ರಮೇಶ ಎಸ್. ಕತ್ತಿ ಅವರು ಸಂಪಾದಿಸಿದ್ದು, ಈ ಕೃತಿಯಲ್ಲಿ ಆಲಮೇಲ ತಾಲೂಕು ವ್ಯಾಪ್ತಿಯ 51 ಕವಿಗಳ ಪ್ರಾತಿನಿಧಿಕ ಕವಿತೆಗಳ ಸಂಕಲನವಿದು.

1920 ರಿಂದ 2020 ರವರೆಗಿನ ನೂರು ವರ್ಷದ ಅವಧಿಯಲ್ಲಿ ಯಳಮೇಲಿ ಗ್ರಾಮ ವ್ಯಾಪ್ತಿಯ ಕವಿಗಳು, ತತ್ವಪದಕಾರರು ಹೀಗೆ ಪ್ರತಿ ಕವಿಯ ತಲಾ ಎರಡು ಕವಿತೆಗಳನ್ನು ಪ್ರಾತಿನಿಧಿಕವಾಗಿ ಆಯ್ದುಕೊಂಡು ಸಂಕಲಿಸಲಾಗಿದೆ. ಪ್ರಾದೇಶಿಕವಾಗಿ ಕವಿ-ಕಾವ್ಯ ಕುರಿತು ಸಂಶೋಧನೆ-ಅಧ್ಯಯನಗಳಿಗೆ ಈ ಕೃತಿ ಉತ್ತಮ ಆಕರ ಒದಗಿಸಬಲ್ಲುದು.  

ಸಾಹಿತಿ ಸಿದ್ಧರಾಮ ಉಪ್ಪಿನ್ ಅವರು ಕೃತಿಗೆ ಬೆನ್ನುಡಿ ಬರೆದು ಕಳಚೂರು ಚಾಲುಕ್ಯರ ಅಧಿಪತ್ಯದ ಗ್ರಾಮವೇ-ಯಳಮೇಲಿ. ಕ್ಯಾಣದ ಬಿಜ್ಜಳನ ವಧೆ ಮಾಡಿದ ಕ್ಷೇತ್ರ ತೇಜಸ್ಸಿನ ಜಗದೇವ ಮಲ್ಲಬೊಮ್ಮರ ದೇಸಗತಿಯ ಬೀಡು. ಇಂತಹ ಯಳಮೇಲಿ ಗ್ರಾಮ ವ್ಯಾಪ್ತಿಯಲ್ಲಿ ಸಾಹಿತ್ಯಾಸಕ್ತರು ಕಡಿಮೆ ಏನಿಲ್ಲ. ಸ್ಥಳೀಯವಾಗಿ ಕವಿ-ಸಾಹಿತ್ಯ ಹೀಗೆ ಸಾಹಿತ್ಯಕವಾಗಿ ವಿಷಯವಸ್ತುವನ್ನು ಸಂಗ್ರಹಿಸುವುದು ಕನ್ನಡದ ಬಹು ದೊಡ್ಡ ಸೇವೆಯೂ ಆಗಿದೆ’ ಎಂದು ಸಂಪಾದಕರ ಶ್ರಮವನ್ನು ಶ್ಲಾಘಿಸಿದ್ದಾರೆ.

About the Author

ರಮೇಶ ಎಸ್.ಕತ್ತಿ
(28 August 1978)

ಡಾ. ರಮೇಶ ಎಸ್. ಕತ್ತಿ ಅವರು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕಡಣಿ ಗ್ರಾಮದವರು. ಅಪ್ಪ: ಸಿದ್ದಣ್ಣ ಅವ್ವ:  ಮಹಾದೇವಿ. (ಜನನ: 28.08.1978 ). ಕಡಣಿಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದರು. ಸಿಂದಗಿಯಲ್ಲಿ ಬಿ.ಎ. ಪದವಿ, ಮಹಾರಾಷ್ಟ್ರದ ಕೊಲ್ಹಾಪುರದ ಶಿವಾಜಿ ವಿ.ವಿ.ಯಿಂದ ಎಂ.ಎ, ಹಾಗೂ ವಿಜಯಪುರ ಜಿಲ್ಲೆಯ ಇಂಡಿಯಲ್ಲಿ ಬಿ.ಇಡಿ, ಪದವೀಧರರು. ಸಿಂದಗಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರು. ಹವ್ಯಾಸಿ ಪತ್ರಕರ್ತರು. ಅವಿಭಜಿತ ಸಿಂದಗಿ ತಾಲೂಕಿನ ಆಲಮೇಲದಲ್ಲಿ (ಈಗ ತಾಲೂಕು ಕೇಂದ್ರ) ವಾಸವಾಗಿದ್ದು, ‘ವಿಜಯಪುರ ಜಿಲ್ಲೆಯ ಸಣ್ಣ ಕತೆಗಳು’ ವಿಷಯವಾಗಿ ಗುಲಬರ್ಗಾ ವಿ.ವಿ. ಯಲ್ಲಿ ಸಲ್ಲಿಸಿದ ಮಹಾ ಪ್ರಬಂಧಕ್ಕೆ ಪಿಎಚ್ ಡಿ ದೊರೆತಿದೆ.   ಕೃತಿಗಳು : ಕಾಮಸ್ವರ್ಗದ ಹಾದಿ ಹಿಡಿದು, ಏನನ್ನೂ ಹೇಳುವುದಿಲ್ಲ (ಕವನ ಸಂಕಲನಗಳು),, ...

READ MORE

Related Books