ಹೂವಾಡಿಗ

Author : ಎ.ಎನ್.ರಮೇಶ್. ಗುಬ್ಬಿ

Pages 104

₹ 80.00




Year of Publication: 2016
Published by: ಗೋಮಿನಿ ಪ್ರಕಾಶನ
Address: ಶ್ರೀ ವೀರಭದ್ರ ಸ್ವಾಮಿ ನಿಲಯ, 1ನೇ ಮುಖ್ಯರಸ್ತೆ, 5ನೇ ಕ್ರಾಸ್, ವಿಶ್ವಣ್ಣ ಲೇಔಟ್, ಶಾಂತಿನಗರ್, ತುಮಕೂರು- 572102
Phone: 9986693113

Synopsys

‘ಹೂವಾಡಿಗ’ ಲೇಖಕ ಎ.ಎನ್. ರಮೇಶ್ ಗುಬ್ಬಿ ಅವರ ಕವನ ಸಂಕಲನ. ಈ ಕೃತಿಗೆ ಡಾ. ಇಟಗಿ ಈರಣ್ಣ ಅವರ ಮುನ್ನುಡಿ ಇದೆ. ಕೃತಿಯ ಕುರಿತು ಬರೆಯುತ್ತಾ ‘ಪ್ರೀತಿ-ಪ್ರೇಮಗಳಿಗೆ ಸಂಬಂಧಿಸಿದಂತೆ ಈ ಕವಿ ಅತ್ಯಂತ ಆರ್ದ್ರ! ವನವೆಲ್ಲ ನೀವೆ, ವನದೊಳಗಣ ಖಗಮೃಗವೆಲ್ಲ ನೀವೆ- ಎಂದು ಅಕ್ಕಮಹಾದೇವಿ ಚೆನ್ನಮಲ್ಲಿಕಾರ್ಜುನನನ್ನು ಕಂಡಂತೆ, ಬಾನಲ್ಲೂ-ಭುವಿಯಲ್ಲೂ-ಮಳೆಯಲ್ಲೂ-ಮರದಲ್ಲೂ-ಎಲೆಯಲ್ಲೂ-ಎಲ್ಲೆಲ್ಲೂ…ಪ್ರೇಯಸಿಯನ್ನು ಕಾಣುವ ಈ ಕವಿಯ ಕಣ್ಣು, ಅವಳನ್ನೇ ನೆನೆಯುವ ಮನ, ಅವಳಿಗಾಗಿಯೇ ಮಿಡಿವ-ಬಡಿವ, ದುಡಿವ, ಮಡಿವ ಹೃದಯ, ಅಬ್ಬಾ. ಈ ಕಾಲದಲ್ಲೂ ಇಂಥ ಒಬ್ಬ ಪ್ರೇಮಿ ಇದ್ದಾನೆಯೇ ಎನ್ನಿಸಿ ಬಿಡುವಷ್ಟು ಅವನಲ್ಲಿ ಪ್ರೀತಿ-ಪ್ರೇಮ ತುಂಬಿಕೊಂಡು, ಈತನೊಬ್ಬ ಪ್ರೀತಿಯ ಮೀಸಲು ಕವಿ-ಎನ್ನಿಸಿಬಿಡುತ್ತದೆ ಎನ್ನುತ್ತಾರೆ ಇಟಗಿ ಈರಣ್ಣ. ಜೊತೆಗೆ ಇಲ್ಲಿ, ಎತ್ತೆತ್ತ ನೋಡಿದತ್ತತ್ತ ಭಾವ ವೆಂಬ ಬಳ್ಳಿ ಚೆಲ್ಲುವರಿದಿದೆ. ಎತ್ತಿ ನೋಡಿದರೆ ಪ್ರೀತಿ ಎಂಬ ಗೊಂಚಲು, ತೊನೆದಾಡುತ್ತಿವೆ. ಒತ್ತಿ ಹಿಡಿದರೆ ಪ್ರೇಮವೆಂಬ ರಸ ಈ ಪುಸ್ತಕದ ತುಂಬ ತೊಟ್ಟಿಕ್ಕುತ್ತಿದೆ. ಒಂದು ರೀತಿಯಲ್ಲಿ ಬೀಜ ಬಿಡಿಸಿದ ಹಲಸಿನ ತೊಳೆಗಳನ್ನು ಜೇನಿನಲ್ಲಿ ಅದ್ದಿ ತಿಂದ ಸುಖಾನುಭವ ಸಹೃದಯರಿಗೆ ಎಂದು ಭರವಸೆಯ ಮಾತುಗಳನ್ನಾಡಿದ್ದಾರೆ.

About the Author

ಎ.ಎನ್.ರಮೇಶ್. ಗುಬ್ಬಿ

ಲೇಖಕ ಎ.ಎನ್.ರಮೇಶ್ ಗುಬ್ಬಿ ಅವರು ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನಲ್ಲಿ ಜನಿಸಿದರು. ವೃತ್ತಿಯಲ್ಲಿ ಕಾರವಾರ ಬಳಿಯ ಕೈಗಾದಲ್ಲಿರುವ ಭಾರತೀಯ ಅಣುಶಕ್ತಿ ನಿಗಮದ ಉದ್ಯೋಗಿ. ಪ್ರವೃತ್ತಿಯಲ್ಲಿ ಸಾಹಿತಿ. ಕವನ, ಚುಟುಕು, ಕಥೆ, ನಾಟಕ, ಚಿತ್ರಕಥೆ ರಚನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ‘ಗುಬ್ಬಿಯ ಕಲರವ’, ‘ಚುಟುಕು-ಚಿತ್ತಾರ’, ‘ಎಡನೀರೊಡನೆಯನಿಗೆ ಚುಟುಕು ಪುಷ್ರ್ಪಾಚನೆ’, ‘ಕೇಶವನಾಮ ಚೈತನ್ಯಧಾಮ’ ಎಂಬ ಚುಟುಕು ಸಂಕಲನಗಳು, ‘ಹನಿ-ಹನಿ’ ಎಂಬ ಹನಿಗವನ ಸಂಕಲನ, ‘ಭಾವದಂಬಾರಿ’ ಕಥಾಸಂಕಲನ, ‘ಶಕ್ತಿ ಮತ್ತು ಅಂತ’ ಅವಳಿ ನಾಟಕ ಸಂಕಲನ, ‘ಕಿಸ್ ಮಾತ್ರೆ’ ಎನ್ನುವ ಹಾಸ್ಯಗವನ ಸಂಕಲನ, ‘ಹೂವಾಡಿಗ’, ‘ಕಾಡುವ ಕವಿತೆಗಳು’ ಕವನ ಸಂಕಲನಗಳು ಪ್ರಕಟವಾಗಿದೆ. ಕಾಸರಗೋಡಿನ ಎಡನೀರಿನಲ್ಲಿ ನಡೆದ ಪ್ರಪ್ರಥಮ ಅಂತರರಾಜ್ಯ ಚುಟುಕು ಸಮ್ಮೇಳನದಲ್ಲಿ ‘ಚುಟುಕು ಭಾರ್ಗವ’ ...

READ MORE

Related Books