ಮೀನು ಕುಡಿದ ಕಡಲು

Author : ಕೀರ್ತಿ ಪಿ. (ಸೂರ್ಯ ಕೀರ್ತಿ)

Pages 82

₹ 100.00




Year of Publication: 2022
Published by: ಅಲ್ಲಮ ಪ್ರಕಾಶನ
Address: ಬೆಂಗಳೂರು- 19.

Synopsys

ಮೀನು ಕುಡಿದ ಕಡಲು ಕವನಸಂಕಲನವನ್ನು ಲೇಖಕ ಸೂರ್ಯಕೀರ್ತಿ ಅವರು ರಚಿಸಿದ್ದಾರೆ. ಇಲ್ಲಿನ ಕವಿತೆಗಳಲ್ಲಿ ಕಾವ್ಯ, ಪುರಾಣಗಳಲ್ಲಿ ಮೈತಳೆದ ಹಲವು ಪ್ರಸಿದ್ಧ ಪಾತ್ರಗಳ ಜೊತೆಗೆ ಕವಿ ಅನುಸಂಧಾನ ನಡೆಸುತ್ತಾರೆ. ಈ ಕವನ ಸಂಕಲನದಲ್ಲಿ ಗೌರಿ ಉತ್ತ ನೆಲ ಪದ್ಯ ಗಮನ ಸೆಳೆಯುತ್ತದೆ. ಗೌರಿ ಅನ್ನುವ ದೇವತೆಯು ನಮ್ಮ ಹಳ್ಳಿಯ ಸಾಮಾನ್ಯ ಹೆಣ್ಣುಮಕ್ಕಳಂತೆ ಗಂಡ ಮಕ್ಕಳೊಂದಿಗೆ ಸಾಂಸಾರಿಕ ಬದುಕಿನಲ್ಲಿ ಏಗುವುದನ್ನು ಚಿತ್ರಿಸಲಾಗಿದೆ. ಭಾರತ ದೇಶದ ಪುರಾಣ ಜಗತ್ತಿನ ತಲ್ಲಣಗಳನ್ನು ಈ ಸಂಕಲನದ ಹಲವಾರು ಕವಿತೆಗಳು ನಮ್ಮೆದುರು ಕಟ್ಟಿಕೊಡುತ್ತವೆ ಎಂದು ಕೃತಿಯ ಕುರಿತಾಗಿ ಹೇಳಲಾಗಿದೆ.

About the Author

ಕೀರ್ತಿ ಪಿ. (ಸೂರ್ಯ ಕೀರ್ತಿ)
(29 January 1994)

ಸೂರ್ಯಕೀರ್ತಿ ಅವರು ತುಮಕೂರಿನ ನೆಲಮೂಲದ ಕವಿ. ಇವರ ಕವಿತೆಗಳು ಚೈನೀಸ್, ಬೆಂಗಾಲಿ, ಹಿಂದಿ, ತುರ್ಕಿ, ಇಂಗ್ಲೀಶ್, ತೆಲುಗು ಮುಂತಾದ ಭಾಷೆಗಳಿಗೆ ಅನುವಾದಗೊಂಡಿವೆ. ಇವರು ಮೂಲತಃ ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೊಕಿನ ಬೆಟ್ಟಹಳ್ಳಿ ಗ್ರಾಮದಲ್ಲಿ ಜನಿಸಿದವರು, ಗ್ರಾಮೀಣ ಬದುಕಿನ ವಿಸ್ತಾರಗಳು ಇವರ ಬರಹದ ಮೂಲಕ ಕಾಣಬಹುದು. ಬೆಂಗಳೂರು ವಿಶ್ವವಿದ್ಯಾಲಯದಿಂದ ವಾಣಿಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು (ಎಂ.ಕಾಂ) ಉನ್ನತ ಶ್ರೇಣಿಯಲ್ಲಿ ಮುಗಿಸಿಕೊಂಡು,  ಕನ್ನಡ ರತ್ನ ಪರೀಕ್ಷೆಯಲ್ಲಿ ಕರ್ನಾಟಕ  ರಾಜ್ಯಕ್ಕೆ ಮೊದಲ ರ್ಯಾಂಕ್ ಗಳಿಸಿದ ಸೂರ್ಯ ಕೀರ್ತಿ ಅವರು  ನ್ಯಾಷನಲ್  ಕಾಲೇಜು, ಬಸವನಗುಡಿ, ಬೆಂಗಳೂರಿನಲ್ಲಿ ಕನ್ನಡ ಎಂ.ಎ ಯನ್ನು  ಆಸಕ್ತಿಯಿಂದ ಅಧ್ಯಯನ ಮಾಡಿ, ...

READ MORE

Related Books