ಮಾಧವಿ ಭಂಡಾರಿ ಕೆರೆಕೋಣ ಅವರ ಮೊದಲ ಕವನಸಂಕಲನ ಇದು. ನಾನು ಆಡಬೇಕೆಂದುಕೊಂಡಿದ್ದನ್ನೆಲ್ಲ ‘ಹರಿದ ಸ್ಕರ್ಟಿನ ಹುಡುಗಿ’ಯ ಮೂಲಕ ನಿಮ್ಮ ಮುಂದೆ ಇಟ್ಟಿದ್ದೇನೆ ಎಂದು ಹೇಳಿಕೊಂಡಿದ್ದಾರೆ ಕವಯಿತ್ರಿ. ಎದೆಯಾಳದ ವೇದನೆ ಸಂವೇದನೆಯಾಗಿ ಯಶಸ್ವೀ ಕಾವ್ಯಕ್ಕೆ ಜನ್ಮ ಕೊಡುತ್ತದೆನ್ನುವುದಕ್ಕೆ ಈ ಸಂಕಲನ ಸಾಕ್ಷಿಯಾಗಿದೆ ಎಂದು ಬೆನ್ನುಡಿಯಲ್ಲಿ ಕವಯಿತ್ರಿ ಸುಕನ್ಯಾ ಮಾರುತಿ ಹೇಳಿದ್ದಾರೆ.
ಕನ್ನಡದ ಸೂಕ್ಷ್ಮ ಕವಯತ್ರಿ ಮಾಧವಿ ಭಂಡಾರಿ ಕೆರೆಕೋಣ ಅವರು 1962 ಜುಲೈ 22 ರಂದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಲ್ಲೂಕಿನ ಕೆರೆಕೋಣದಲ್ಲಿ ಜನಿಸಿದರು. ’ಹರಿದ ಸರ್ಟಿನ ಹುಡುಗಿ, ಕಡಲು ಕಳೆದಿದೆ' ಅವರ ಕವನ ಸಂಕಲನ. ’ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ’ ಸಂದಿದೆ ಅವರಿಗೆ. ...
READ MORE