ಮನುಷ್ಯರು ಬೇಕಾಗಿದ್ದಾರೆ

Author : ಲಕ್ಷ್ಮಣ ಬಾದಾಮಿ

Pages 64

₹ 60.00




Year of Publication: 2004
Published by: ಅಭಿಲಾಷ ಪ್ರಕಾಶನ
Address: ನೇಕಾರ ಪೇಟೆ, ಸಿರೂರ-587156, ಬಾಗಲಕೋಟ ಜಿಲ್ಲೆ
Phone: 8050791997

Synopsys

ಲಕ್ಷ್ಮಣ ಬಾದಾಮಿಯವರ ಮೊದಲ ಕವನ ಸಂಕಲನ-ಮನುಷ್ಯರು ಬೇಕಾಗಿದ್ದಾರೆ. ಇಲ್ಲಿಯ ಕವಿತೆಗಳು ಸಂವೇದನೆಯ ತೀವ್ರತೆಯಿಂದ ಕಾವ್ಯಗುಣ ಸಂಪನ್ನವಾಗಿವೆ. ಮುಳುಗಡೆಯಿಂದಾಗಿ 'ಆಡಿದ ಓಡಿದ ವಿರಮಿಸಿದ ಸುಖಿಸಿದ ನೆಲವೆಲ್ಲವೂ ನೀರು ಪಾಲಾಗಿ ಹೋದಾಗ ಬದುವಿನ ಬದಿಗೆ ನೆಟ್ಟಿದ್ದ ಮಾವಿನ ಮರ ಮೊದಲ ವಸಂತ ಕಾಣುವ ಮುನ್ನವೇ ಬಲಿಯಾಗಿದೆ. ಬರ್ಬರ ಸೂತಕಕ್ಕೆ ಬೊಡ್ಡಿ ಟೊಂಗೆಗಳ ಮುಗಿಸಿ ಚಿಗುರನು ನುಂಗಲು ಬರತಿದೆ ಇದಿಮಾಯಿ ಹಿನ್ನೀರು ಎಂದು ಹೃದಯಸ್ಪರ್ಶಿಯಾಗಿ ಹೇಳುತ್ತಾರೆ.

'ದಾಸಿಮಯ್ಯನೊಂದಿಗೆ' ಕವಿತೆ ಜೇಡರ ದಾಸಿಮಯ್ಯನ ಒಂದು ವಚನದೊಂದಿಗೆ ಸಮೀಕರಿಸಿ ಮುಖಾಮುಖಿಯಾಗುತ್ತದೆ. ದಾಸಿಮಯ್ಯ.. ಸಂತೆಯ ದಿನ ಬರುವ ಸಾವುಕಾರ ಸೀರೆಯ ಪಡೆವನು ಅಳತೆ ಹಾಕಿ ನೂಲು ಹಾಸು ರೇಷ್ಮೆಯ ಸಗಟು ಸಾಗಡ ಅವನದೇ ಹಂಗಾಗಿ ಅಂಗಡೀಲಿಟ್ಟಿರುವ ಸೀರೆಗೆ ತನ್ನದೇ ಲೇಬಲ್ ಹಾಕಿ ಎಂಥಾ ಮೋಸ ಮಾರಾಯ..! ಮೂಗು ಮಾಡಿದವರ ಬಿಟ್ಟು ಮೂಗುತಿ ಮಾಡಿದವರ.... ಅಂತಾರಲ್ಲ ಹಾಗಾಗುವುದಿಲ್ಲವೇ ಇದು? ನೀನಾದರೂ ಹೇಳು ದಾಸಿಮಯ್ಯ... ಸೀರೆ ಸಾವುಕಾರನದೋ.. ನೇಕಾರನದೋ..’ ಎಂದು ಬಹುಮುಖ್ಯ ಪ್ರಶ್ನೆ ಎತ್ತುತ್ತಾರೆ. ‘ಮನುಷ್ಯರು ಬೇಕಾಗಿದ್ದಾರೆ ’ ಕವಿತೆಯೂ ಮನುಷ್ಯನ ಸೋಗಲಾಡಿತನವನ್ನು, ತಿಕ್ಕುಲತನವನ್ನು ತೀಡಿ ಹೇಳುತ್ತದೆ. ವ್ಯಂಗ್ಯ-ವಿಡಂಬನೆಯು ಈ ಕಾವ್ಯದ ಗುಣವಾಗಿದೆ.

 

About the Author

ಲಕ್ಷ್ಮಣ ಬಾದಾಮಿ

ಲಕ್ಷ್ಮಣ ಬಾದಾಮಿ ಅವರ ಮೂಲ ಹೆಸರು ಲಕ್ಷ್ಮಣ ತುಕಾರಾಮ ಬಾದಾಮಿ. ಇವರು ಮೂಲತಃ ಬಾಗಲಕೋಟ ಜಿಲ್ಲೆ ಸಿರೂರು ಗ್ರಾಮದವರು. ಕಲಾ ವಿಭಾಗದಲ್ಲಿ ಎಂ.ಎಫ್.ಎ., ಎ.ಎಂ., ಜಿ.ಡಿ.(ಆರ್ಟ್) ಪೂರ್ಣಗೊಳಿಸಿದ್ದು, 2008ರಿಂದ ಸರಕಾರಿ ಪ್ರೌಢಶಾಲೆ ಕುರುಕುಂದದಲ್ಲಿ ಚಿತ್ರಕಲಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಗ್ರಾಮೀಣ ಕಲೆ ಹಾಗೂ ಸಾಹಿತ್ಯ ವೇದಿಕೆ, ಸಿರೂರದ ಮೂಲಕ ಕಳೆದ 15 ವರ್ಷಗಳಿಂದ ಸಾಹಿತ್ಯ, ಜಾನಪದ ಕಲೆಗಳ ಪುನರುತ್ಥಾನಕ್ಕಾಗಿ ಕಾರ್ಯಕ್ರಮಗಳನ್ನು ಸಂಘಟಿಸುತ್ತಿದ್ದಾರೆ. ಕಲೆಯೊಂದಿಗೆ ಸಾಹಿತ್ಯದತ್ತರು ಆಸಕ್ತಿಹೊಂದಿರುವ ಅವರ ‘ಭವ’, ‘ಬೇರು ಮತ್ತು ಬೆವರು’, ‘ಒಂದು ಚಿಟಿಕೆ ಮಣ್ಣು’ ಎಂಬ ಕಥಾಸಂಕಲನಗಳನ್ನು ಪ್ರಕಟಿಸಿದ್ದಾರೆ. ‘ಮನುಷ್ಯರು ಬೇಕಾಗಿದ್ದಾರೆ’ ಅವರ ಪ್ರಕಟಿತ ಕವನ ...

READ MORE

Related Books