ಮುದ್ದುರಾಮನ ಮನಸು

Author : ಕೆ.ಸಿ. ಶಿವಪ್ಪ

Pages 284

₹ 150.00




Year of Publication: 2010
Published by: ಅಭಿನವ ಪ್ರಕಾಶನ
Address: 17/18-3, ಮೊದಲನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-40
Phone: 9448804905

Synopsys

ಕೆ.ಸಿ.ಶಿವಪ್ಪನವರ ಸಾಧನೆಯ ಕ್ಷೇತ್ರಗಳು ಹತ್ತು ಹಲವು. ಕವಿ, ಚಿಂತಕ, ಭಾಷಾಂತರಕಾರ, ಸಂಗೀತ ಪ್ರೇಮಿ, ಪ್ರಕಾಶಕ, ಪತ್ರಕರ್ತ, ಆಡಳಿತಗಾರ. - ಹೀಗೆ. ಓದಿದ್ದು ವಿಜ್ಞಾನವಾದರೂ, ಕೈ ಹಿಡಿದದ್ದು ಸಾಂಸ್ಕೃತಿಕ ವಲಯವನ್ನು. 

ಮುದ್ದುರಾಮನ ಮನಸು 1101 ಚೌಪದಿಗಳ ಸರಳ, ಸುಂದರ ಕಾವ್ಯ ಸಂಕಲನ. ಶಿವಪ್ಪನವರ ಸಮೃದ್ಧ ಜೀವನಾನುಭವಕ್ಕೂ, ದರ್ಶನಕ್ಕೂ ಹಿಡಿದ ನಿಚ್ಚಳ ಕನ್ನಡಿಯಂತಿದೆ ಈ ಕೃತಿ. ಮಂಕುತಿಮ್ಮನ ಸೋದರನಂತಿರುವ ಮುದ್ದುರಾಮ ನಮ್ಮೊಳದನಿಯ ವ್ಯಕ್ತರೂಪ, ಬದುಕಿನ ನಿಗೂಢತೆಯನ್ನು ಶೋಧಿಸುವ ಹಾದಿಯಲ್ಲಿ ಈತನ ಕಣ್ಣಿಗೆ ಬಿದ್ದಅನುಭವಗಳು ಇಲ್ಲಿ ಕಾವ್ಯದ ರೂಪ ಪಡೆದಿದೆ.

’ಶಿವಪ್ಪನವರದು ಸಹಜವಾದ ಕವಿಹೃದಯ. ಚಿಂತನೆಯ ಸಾಹಚರ್ಯದಿಂದ ಭಾವಪೂರ್ಣವಾದ ಅವರ ಮಾತುಗಳಿಗೆ ಪರಿಭಾವನೆಯ ಮೆರಗು ದೊರೆತಿದೆ. ಭಾವದ ಅತಿರೇಕವಿಲ್ಲದೆ, ಬಲಿಯ ಬುದ್ದಿಯ ಶುಷ್ಟತೆಯಿಲ್ಲದೆ ಭಾವ ಬುದ್ದಿಯ ಸರಸ ಸಾಹಚರ್ಯದಿಂದ ಇಲ್ಲಿನ ಚೌಪದಿಗಳು ಓದುಗರ ಮನಸ್ಸಿನ ಆಳಕ್ಕೆ ಇಳಿಯುವ ಶಕ್ತಿಯನ್ನು ಪಡೆದಿವೆ’ ಎಂಬುದು ಅವರ ಬಗೆಗೆ ಇರುವ ಹಿರಿಮೆಯ ಮಾತು. 

About the Author

ಕೆ.ಸಿ. ಶಿವಪ್ಪ
(26 July 1937)

ಕೆ.ಸಿ.ಶಿವಪ್ಪ-ಚಾಮರಾಜನಗರ ಜಿಲ್ಲೆಯ ಕಾಗಲವಾಡಿಯಲ್ಲಿ26-07-1937 ರಲ್ಲಿ ಜನಿಸಿದ ಇವರು ಚಾಮರಾಜನಗರ, ಮೈಸೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿ, ಸರ್ಕಾರಿ ತರಬೇತಿ ಮಹಾವಿದ್ಯಾಲಯ(ಮೈಸೂರು), ಕೇಂದ್ರ ಚರ್ಮಸಂಶೋಧನಾಲಯ (ಚೆನ್ನೈ), ಬೆಂಗಳೂರು ವಿಶ್ವವಿದ್ಯಾಲಯ, ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಸಚಿವಾಲಯ (ವಿಧಾನಸೌಧ), ಜೆ.ಎಸ್.ಎಸ್ ಮಹಾವಿದ್ಯಾಪೀಠ ಮುಂತಾದೆಡೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.  ರಾಗರತಿ, ಅನುರಾಗ, ರಾಧಾಮಾಧವ, ಚಿತ್ತಭಿತ್ತಿ, ಚಿತ್ರಾಂಬರ, ಚೆಂಬೆಳಕು, ಚಿದಾನಂದ, ಚೆಲುವೆ,ಚಂದ್ರಿಕೆ, ಚಾರುಲತೆ, ಚಿತ್ರಪತ್ರ(ಕವನ ಸಂಕಲನಗಳು). ಮುದ್ದು ರಾಮನ ಮನಸು, ಮುದ್ದುರಾಮನ ಬದುಕು-ಬೆಳಕು(ಚೌಪದಿಗಳ ಸಂಕಲನ). ಬದುಕಿಗೊಂದು ಭರವಸೆ, ಚಿತ್ತಚಿತ್ತಾರ(ವ್ಯಕ್ತಿ ವಿಕಸನ). ಮೌನಸ್ಪಂದನ, ಚಿತ್ತಪರಿಪಾಕ(ಚಿಂತನ ಬಿಡಿನುಡಿಸಂಚಯ). ಜೀವಸತ್ವಗಳು, ಬೆಡಗಿನ ಬಾಟಿಕ್, ಭೂಮಿ, ಶುಕ್ರದೆಸೆ(ಅನುವಾದ), ಅರವಿಂದ ದರ್ಶನ, ...

READ MORE

Related Books