ನೆನಪು ದಾಯಾದಿ

Author : ಎಸ್.ಜಿ. ಸಿದ್ಧರಾಮಯ್ಯ

Pages 122

₹ 100.00




Year of Publication: 2016
Published by: ಪಲ್ಲವ ಪ್ರಕಾಶನ
Address: ಪಲ್ಲವ ಪ್ರಕಾಶನ, ಚನ್ನಪಟ್ಟಣ

Synopsys

ಕವಿತೆ ಬರೆಯಲಾರೆ ಅಂದುಕೊಳ್ಳುತ್ತ ಇರುವಾಗಲೇ ಈ ಕವಿತೆ ಹುಟ್ಟುತ್ತದೆ. ಅದರೊಳಗೆ ಬದುಕಿನ ಆಗುಹೋಗುಗಳು, ನೆನಪು ನೆರಳುಗಳು ಅಜ್ಜನಜನ ಪಿಜ್ಜನ ಕಾಲದವಿರಬಹುದು. ಹಲವು ಬಾರಿ ಮುಚ್ಚಿದ ಕಣ್ಣಿನೊಳಗೂ ನಿಚ್ಚಳ ಕಾಣುತ್ತವೆ. ಕವಿತೆಯಾಗಿ ಹಾಡುತ್ತವೆ,' ಎಂದು ಕವಿ ಎಸ್ .ಜಿ.ಸಿದ್ದರಾಮಯ್ಯ ಅವರು ವಿವರಿಸಿದ್ದಾರೆ.ತಮ್ಮನ್ನು ಕಾಡುವ ನೆನಪುಗಳನ್ನು ದಾಯಾದಿಗಳೆಂದು ಕರೆಯುವ ಅವರು, 'ನೆನಪುಗಳು ವಿಚಿತ್ರದವು ಒಂದಕ್ಕೊಂದು ಸಂಬಂಧವಿಲ್ಲದವು ನೂರಾರು ಕೂಡಾವಳಿ ನಡೆಸಿ/ ಸಾವಿರದ ತೊಟ್ಟಿಲ ಕಟ್ಟಿಜೋಗುಳ ಹಾಡುತ್ತವೆ' ಹೀಗೆ ಕವಿ ಎಸ್ .ಜಿ.ಸಿದ್ದರಾಮಯ್ಯನವರು ನೆನಪುಗಳ ಬಗ್ಗೆ ತನ್ನ ಕವನ ಸಂಕಲನ ನೆನಪು ದಾಯಾದಿಯಲ್ಲಿ ವಿವರಿಸಿದ್ದಾರೆ.

About the Author

ಎಸ್.ಜಿ. ಸಿದ್ಧರಾಮಯ್ಯ
(19 November 1946)

ಹಿರಿಯ ಸಾಹಿತಿಗಳಾದ ಎಸ್.ಜಿ. ಸಿದ್ಧರಾಮಯ್ಯನವರು ಹುಟ್ಟಿದ್ದು ತುಮಕೂರು ಜಿಲ್ಲೆಯ ಚಿಕ್ಕನಾಯಕನ ಹಳ್ಳಿ ತಾಲ್ಲೂಕಿನ ಸಿಂಗಾಪುರ ಗ್ರಾಮದಲ್ಲಿ. ತಂದೆ-ಗುರುಭಕ್ತಯ್ಯ, ತಾಯಿ-ರೇವಮ್ಮ. ಪ್ರಾರಂಭಿಕ ಶಿಕ್ಷಣವನ್ನು ಹುಟ್ಟೂರಿನಲ್ಲಿಯೇ ಪಡೆದ ಅವರು  ಪ್ರೌಢಶಾಲೆ ಚಿಕ್ಕನಾಯಕನಹಳ್ಳಿ ಪೂರ್ಣಗೊಳಿಸಿದರು. ಕಾಲೇಜು ವಿದ್ಯಾಭ್ಯಾಸವನ್ನು ತುಮಕೂರಿನಲ್ಲಿ ಆರಂಭಿಸಿದ ಅವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದರು. ಆನಂತರ ತುಮಕೂರಿನ ಸಿದ್ಧಗಂಗಾ ಕಾಲೇಜಿನಲ್ಲಿ ಅಧ್ಯಾಪಕರಾಗಿ ವೃತ್ತಿಜೀವನ ಆರಂಭಿಸಿದ ಅವರು ಮಡಿಕೇರಿ, ಸಿಂಧನೂರು, ತುಮಕೂರು, ಕೊರಟಗೆರೆ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ತುಮಕೂರು, ಚಿಕ್ಕನಾಯಕನ ಹಳ್ಳಿ, ಹೊಸದುರ್ಗ, ಮಧುಗಿರಿ ಕಾಲೇಜುಗಳಲ್ಲಿ ಪ್ರಾಂಶುಪಾಲರಾಗಿ ಹುದ್ದೆ ನಿರ್ವಹಿಸಿದ್ದಾರೆ. ಅಲ್ಲದೇ ದುಃಸ್ಥಿತಿಯಲ್ಲಿದ್ದ ಕಾಲೇಜುಗಳಿಗೆ ಶೈಕ್ಷಣಿಕ ಕಾಯಕಲ್ಪ ...

READ MORE

Related Books