ಕಾಲನ ತಂಬೂರಿ...!

Author : ಮನೋಹರ ಜನ್ನು

Pages 130

₹ 200.00




Year of Publication: 2020
Published by: ಶ್ರೀ ಗಣೇಶ ಪ್ರಕಾಶನ
Address: #  IB-785,  ಆಜಾದನಗರ, ಶಿವಾಜಿಗಲ್ಲಿ, ದಾಂಡೇಲಿ-581325, ಉತ್ತರಕನ್ನಡ ಜಿಲ್ಲೆ
Phone: 9036149971

Synopsys

ಕಾಲನ ತಂಬೂರಿ-ಕವಿ ಮನೋಹರ ಜನ್ನು ಅವರ ಕವನ ಸಂಕಲನ. ಒಟ್ಟು 126 ಕವಿತೆಗಳಿವೆ. ಈ ಪೈಕಿ ಕೆಲವು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದರೆ, ಹಲವು ವಿವಿಧ ಕವಿಗೋಷ್ಠಿಗಳಲ್ಲಿ, ಸಮ್ಮೇಳನಗಳಲ್ಲಿ  ವಾಚಿಸಿದವು.  ಲಹರಿಗಳು, ಚೌಪದಿಗಳು, ಶಾಹಿರಿಗಳು, ಹನಿಗವನಗಳು ಸಹ ಸೇರ್ಪಡೆಯಾಗಿವೆ. 

ಬಡತನ,ಭ್ರಷ್ಟಾಚಾರ, ಅನ್ಯಾಯ,ಅಸಮಾನತೆ,ಭಯೋತ್ಪಾದನೆ,ಕಂದಾಚಾರ,ಕೋಮುವಾದ ಪೃಕೃತಿ ವಿಕೋಪ,ವೇಶ್ಯಾವಾಟಿಕೆ,ಹೆಣ್ಣಿನ ಅಸಹಾಯಕತೆ, ಪರಿಸರ ಮಾಲಿನ್ಯ,,ವಿಕಿರಣ, ಹೀಗೆ ಹಲವು ವಿಷಯಗಳ ವೈವಿಧ್ಯತೆಗಳನ್ನು ಒಳಗೊಂಡಿವೆ. 

ಸಾಹಿತಿ ಲಿಂಗದ ಹಳ್ಳಿ ಹಾಲಪ್ಪ, ರಾಯಚೂರಿನ ಉಷ್ಣ ವಿದ್ಯುತ್ ಘಟಕದ ಮುಖ್ಯ ಅಭಿಯಂತರರು (ಮುನ್ನುಡಿ) ಮತ್ತು ರಾಜ್ಯೋತ್ಸವ ಪುರಸ್ಕೃತ ಸಾಹಿತಿ ಮಾಸ್ಕೇರಿ ಎಂ.ಕೇ.ನಾಯಕ (ಬೆನ್ನುಡಿ) ತಮ್ಮ ಬರಹದಲ್ಲಿ ಇಲ್ಲಿಯ ಕವಿತೆಗಳು ಸಾಮಾಜಿಕ ಚಿಂತನೆಗಳೊಂದಿಗೆ ಓದುಗರನ್ನು ಎಚ್ಚರಿಸುತ್ತವೆ ಎಂದು ಪ್ರಶಂಸಿಸಿದ್ದಾರೆ. 

 

About the Author

ಮನೋಹರ ಜನ್ನು
(25 December 1953)

ಲೇಖಕ ಮನೋಹರ ಜನ್ನು ಅವರು ಮೂಲತಃ ಗೋಕರ್ಣ ಬಳಿಯ ಬಂಕಿಕೊಡ್ಲ ಗ್ರಾಮದವರು. ತಂದೆ ಜನಾರ್ದನ ಜನ್ನು ಹಾಗೂ ತಾಯಿ ವತ್ಸಲಾ ಜನ್ನು. 25-12-1953 ರಂದು ಜನನ. ಸ್ನಾತಕೋತ್ತರ ಪದವೀಧರರು. ದಾಂಡೇಲಿಯ ವೆಸ್ಟ್ ಕೋಸ್ಟ್ ಪೇಪರ್ ಕಾರ್ಖಾನೆಯಲ್ಲಿ ಕಂಪ್ಯೂಟರ್ ವಿಭಾಗದಲ್ಲಿ ಗಣಕಯಂತ್ರ ಬರಹಗಾರರಾಗಿ ಸೇವೆ ಸಲ್ಲಿಸಿ ಸದ್ಯ ನಿವೃತ್ತರು. ಪರಿಸರ ಹೋರಾಟಗಾರರು.  ಕೃತಿಗಳು: ಇವರ ಮಕ್ಕಳ ಕವನ ಸಂಕಲನ- ‘ಚುಕ್ಕಿ ಚಿತ್ತಾರ’. ರಾಜ್ಯ ಪ್ರಕಾಶಕ ಬರಹಗಾರ ಸಂಘದಿಂದ (2094) ಮೊದಲ ಬಹುಮಾನ ಪುರಸ್ಕಾರ ಲಭಿಸಿದೆ. ಕಾಲನ ತಂಬೂರಿ (ಕವನ ಸಂಕಲನ), ಚೈತ್ರಯಾತ್ರೆ,ಚುಟುಕುಮಾಲೆ-೧ (ಕಥಾ ಸಂಕಲನ), ಪರಿಷತ್ತಿಗೆ ಶಾಪವಾಗದಿರಿ (ವೈಚಾರಿಕ), ನಾಡಿನ ವಿವಿಧ ಪತ್ರಿಕೆಗಳಲ್ಲಿ ಲೇಖನ, ಕತೆ,ಕವನಗಳು ಪ್ರಕಟವಾಗಿವೆ. ...

READ MORE

Related Books