ಕೂಡು

Author : ಸ. ರಘುನಾಥ

Pages 144

₹ 100.00




Year of Publication: 2016
Published by: ಎಸ್‌.ಎಲ್‌.ಎನ್, ಪಬ್ಲಿಕೇಷನ್
Address: ನಂ. 3437, 4ನೇ ಮುಖ್ಯ ರಸ್ತೆ, 9ನೇ ಅಡ್ಡರಸ್ತೆ, ಶಾಸ್ತ್ರೀನಗರ ಬನಶಂಕರಿ 2ನೇ ಹಂತ, ಬೆಂಗಳೂರು-28
Phone: 9972129376

Synopsys

ಈ ಕೃತಿಯಲ್ಲಿ ಮೂರು ಭಾಗಗಳಿವೆ. ಮೊದಲನೆಯದು ರಘುನಾಥ ಅವರು ಈವರೆಗೆ ಬರೆದುಕೊಂಡು ಬಂದ ಕಾವ್ಯ. ಎರಡನೆಯದು ಅಜ್ಜಿ ಕೊಟ್ಟ ಗೆಜ್ಜೆ ಪದ ಎಂಬ ಶೀರ್ಷಿಕೆಯ ಅಡಿಯಲ್ಲಿ ಬರೆದದ್ದು. ಈ ಅಜ್ಜಿ ಕೊಟ್ಟ ಗೆಜ್ಜೆ ಪದ ಭಾಗದಲ್ಲಿ ಕವಿಯ ಅಜ್ಜಿ ವೆಂಕಮ್ಮನವರ ಅನುಭವದ ಮಾತುಗಳ ದ್ವಿಪದಿಗಳು. ಮೂರನೆಯದು ನಮ್ಮೂರ ನುಡಿಯಾಗ ಪದ ಕಟ್ಟಿ, ನಮ್ಮೊರ ನುಡಿಯಾಗ ಪದಕಟ್ಟಿ ಎನ್ನುವ ಈ ಭಾಗದಲ್ಲಿ ನಾವು ಕಳೆದುಕೊಳ್ಳುತ್ತಿರುವ ನೆಲದ ಸತ್ವ, ಆಡುವ ಭಾಷೆ, ಉಣ್ಣುವ ಊಟ, ಬದಲಾಗುತ್ತಿರುವ ವಾತಾವರಣ, ಹವಾಮಾನ ವೈಪರೀತ್ಯ ಮುಂತಾದ ಬವಣೆಗಳ ಕಾವ್ಯಾನುಸಂಧಾನಕ್ಕಾಗಿ ಭಾಷೆಯನ್ನು ಬಳಸಿಕೊಳ್ಳುವ ಪ್ರಯತ್ನವಿದೆ.

About the Author

ಸ. ರಘುನಾಥ
(13 August 1954)

ಪ್ರಾಥಮಿಕ ಶಾಲಾ ಶಿಕ್ಷಕರಾಗಿರುವ  ಸ.ರಘುನಾಥ,ಕಥೆ, ಕಾವ್ಯ, ವಿಮರ್ಶೆ, ಅಂಕಣಬರಹ, ಅನುವಾದ, ಜಾನಪದ ಸಾಹಿತ್ಯ ಸಂಗ್ರಹ,ಮುಂತಾದ ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡಿದವರು. ಸುಮಾರು 40ಕ್ಕೂ ಹೆಚ್ಚಿನ ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆ ನೀಡಿದ ಸ. ರಘುನಾಥ ಅವರು ಸಮಾಜಸೇವೆಯಲ್ಲಿಯೂ ಹೆಚ್ಚಾಗಿ ತೊಡಗಿಸಿಕೊಂಡವರು. 1995 ರಿಂದ ’ನಮ್ಮ ಮಕ್ಕಳು’ ಎಂಬ ಸಂಸ್ಥೆಯ ಮೂಲಕ ಸಾಮಾಜಿಕ ಕಾರ್ಯ: ಭಿಕ್ಷುಕ, ಅನಾಥ, ವೃದ್ಧರಿಗೆ, ಅಂಗವಿಕಲರಿಗೆ ಶೈಕ್ಷಣಿಕ ಹಾಗು ಉಚಿತ ವೈದ್ಯಕೀಯ ನೆರವು. 1994 ರಿಂದ 2014 ರವರೆಗೆ ಗಾಯಗೊಂಡ ಪ್ರಾಣಿ  - ಪಕ್ಷಿಗಳ ಆರೈಕೆ. 2005ರಿಂದ ನಾಟಿ ಔಷಧ ತಯಾರಿಕೆ, ಉಚಿತ ...

READ MORE

Related Books