ಕಡಣಿ ಕಾವ್ಯಧಾರೆ

Author : ರಮೇಶ ಎಸ್.ಕತ್ತಿ

Pages 156

₹ 200.00




Year of Publication: 2020
Published by: ಬೆರಗು ಪ್ರಕಾಶನ,
Address: # ವಿನಾಯಕ ನಗರ ಆಲಮೇಲ-586 202 ತಾ: ಸಿಂದಗಿ ವಿಜಯಪುರ ಜಿಲ್ಲೆ

Synopsys

ಕಡಣಿ ಕಾವ್ಯಧಾರೆ-ಡಾ. ರಮೇಶ ಎಸ್. ಕತ್ತಿ ಅವರು ಸಂಪಾದಿಸಿದ ಕವನ ಸಂಕಲನ. ಕಡಣಿ ಗ್ರಾಮದ ಹಿರಿಯ ತತ್ವಪದಕಾರ ಕಡಣಿ ಕಲ್ಲಪ್ಪನವರಿಂದ ಹಿಡಿದುಕೊಂಡು ಗ್ರಾಮದಲ್ಲಿ ಪ್ರಸಕ್ತ ದಿನಮಾನದ ಕವಿಗಳ ಕವಿತೆಗಳನ್ನು ಸಂಪಾದಿಸಿದ್ದು, ಸ್ಥಳೀಯ ಸಾಹಿತ್ಯ ಗುರುತಿಸಿ ಪ್ರೋತ್ಸಾಹಿಸುವ ದೃಷ್ಟಿಯಿಂದ ಸಂಪಾದಕರ ಕಾರ್ಯ ಪ್ರಶಂಸನೀಯ. ಕೃತಿಯಲ್ಲಿ ತತ್ವಪದಗಳು, ಭಜನಾ ಪದಗಳು, ಕವಿತೆಗಳು, ಚುಟುಕುಗಳು ಹೀಗೆ ಎಲ್ಲ ಬಗೆಯ ಪದ್ಯಸಾಹಿತ್ಯ ಒಳಗೊಂಡಿದೆ.

About the Author

ರಮೇಶ ಎಸ್.ಕತ್ತಿ
(28 August 1978)

ಡಾ. ರಮೇಶ ಎಸ್. ಕತ್ತಿ ಅವರು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕಡಣಿ ಗ್ರಾಮದವರು. ಅಪ್ಪ: ಸಿದ್ದಣ್ಣ ಅವ್ವ:  ಮಹಾದೇವಿ. (ಜನನ: 28.08.1978 ). ಕಡಣಿಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದರು. ಸಿಂದಗಿಯಲ್ಲಿ ಬಿ.ಎ. ಪದವಿ, ಮಹಾರಾಷ್ಟ್ರದ ಕೊಲ್ಹಾಪುರದ ಶಿವಾಜಿ ವಿ.ವಿ.ಯಿಂದ ಎಂ.ಎ, ಹಾಗೂ ವಿಜಯಪುರ ಜಿಲ್ಲೆಯ ಇಂಡಿಯಲ್ಲಿ ಬಿ.ಇಡಿ, ಪದವೀಧರರು. ಸಿಂದಗಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರು. ಹವ್ಯಾಸಿ ಪತ್ರಕರ್ತರು. ಅವಿಭಜಿತ ಸಿಂದಗಿ ತಾಲೂಕಿನ ಆಲಮೇಲದಲ್ಲಿ (ಈಗ ತಾಲೂಕು ಕೇಂದ್ರ) ವಾಸವಾಗಿದ್ದು, ‘ವಿಜಯಪುರ ಜಿಲ್ಲೆಯ ಸಣ್ಣ ಕತೆಗಳು’ ವಿಷಯವಾಗಿ ಗುಲಬರ್ಗಾ ವಿ.ವಿ. ಯಲ್ಲಿ ಸಲ್ಲಿಸಿದ ಮಹಾ ಪ್ರಬಂಧಕ್ಕೆ ಪಿಎಚ್ ಡಿ ದೊರೆತಿದೆ.   ಕೃತಿಗಳು : ಕಾಮಸ್ವರ್ಗದ ಹಾದಿ ಹಿಡಿದು, ಏನನ್ನೂ ಹೇಳುವುದಿಲ್ಲ (ಕವನ ಸಂಕಲನಗಳು),, ...

READ MORE

Related Books