ಮನುಷ್ಯ ಆಧುನಿಕತೆಯ ಇಕ್ಕಳಕೆ ಸಿಲುಕಿ ಶ್ರಮಾಧಾರಿತ ಬದುಕಿನಿಂದ ದೂರವಾಗುತ್ತಿದ್ದಾನೆ ಎಂಬುದು ಸ್ಪಷ್ಟವಾಗಿ ಕಾಣಸಿಗುತ್ತದೆ. ಕೆಲವೇ ವರ್ಷಗಳ ಹಿಂದೆ ಪ್ರಮುಖವಾಗಿ ಬಳಕೆಯಾಗುತ್ತಿದ್ದ ಮನೆಯ ಅದೆಷ್ಟೋ ವಸ್ತುಗಳೀಗ ಆ್ಯಂಟಿಕ್ ಪೀಸ್ ನಂತೆ ಗೋಚರವಾಗುತ್ತವೆ. ಇದನ್ನೇ ಕಾವ್ಯದ ವಸ್ತುವನ್ನಾಗಿಸಿಕೊಂಡಿರುವ ಕವಯತ್ರಿಯವರು ಕಾಲಕ್ಕೆ ತಕ್ಕಂತೆ ಬದಲಾದ ಬದುಕನ್ನು ತಿಳಿಸುವ, ಎಚ್ಚರ ಪಡಿಸುವ ಧಾಟಿಯಲ್ಲಿ ಕವನಗಳನ್ನು ಬರೆದಿದ್ದಾರೆ. ಕವನ ಸಂಕಲನದ ಶೀರ್ಷಿಕೆ ಜೀನ್ಸ್ ತೊಟ್ಟ ದೇವರು ಈ ಕೃತಿಯಲ್ಲಿರುವ ಕನವಗಳ ರೂಪಕ ಎಂಬಂತಿದೆ.
ಕಾವ್ಯಾ ಕಡಮೆ ನಾಗರಕಟ್ಟೆ ಅವರ ‘ಜೀನ್ಸ್ ತೊಟ್ಟ ದೇವರು’ ಕವನ ಸಂಕಲನಕ್ಕೆ ಕಡಂಗೋಡ್ಲು ಕಾವ್ಯ ಪುರಸ್ಕಾರ ದೊರಕಿದೆ. 2018ನೇ ಪ್ರತಿಷ್ಠಿತ 'ದಿನಕರ ದೇಸಾಯಿ ಕಾವ್ಯ ಪ್ರಶಸ್ತಿಯೂ ಲಭಿಸಿದೆ.
ಯುವ ಬರಹಗಾರ್ತಿ ಕಾವ್ಯ ಕಡಮೆ ನಾಗರಕಟ್ಟೆ ಅಮೆರಿಕದಲ್ಲಿ ನೆಲೆಸಿದ್ದಾರೆ. ಅವರಿಗೆ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಹಾಗೂ ಅವರ ಜೀನ್ಸ್ ತೊಟ್ಟ ದೇವರು ಕವನ ಸಂಕಲನಕ್ಕೆ ದಿನಕರ ದೇಸಾಯಿ ಕಾವ್ಯ ಪ್ರಶಸ್ತಿ ದೊರೆತಿದೆ. ...
READ MOREಜೀನ್ಸ್ ತೊಟ್ಟ ದೇವರು ಪುಸ್ತಕ ಬಿಡುಗಡೆ