ಏನನ್ನೂ ಹೇಳುವದಿಲ್ಲ

Author : ರಮೇಶ ಎಸ್.ಕತ್ತಿ

Pages 72

₹ 60.00




Year of Publication: 2020
Published by: ಬೆರಗು ಪ್ರಕಾಶನ,
Address: ವಿನಾಯಕ ನಗರ ಆಲಮೇಲ-586 202 ತಾ: ಸಿಂದಗಿ ವಿಜಯಪುರ ಜಿಲ್ಲೆ

Synopsys

ಲೇಖಕ-ಕವಿ ಡಾ. ರಮೇಶ ಎಸ್. ಕತ್ತಿ ಅವರ ಕವನ ಸಂಕಲನ-ಏನನ್ನೂ ಹೇಳುವುದಿಲ್ಲ. ಇದು ಅವರ ಎರಡನೇ ಕವಿತಾ ಸಂಕಲನ. ಕಾಮಸ್ವರ್ಗದ ಹಾದಿ ಹಿಡಿದು-ಇದು (2010) ಮೊದಲ ಕವನ ಸಂಕಲನ. ಕವಿಯೇ ಹೇಳಿರುವಂತೆ ಇಲ್ಲಿಯ ಕವಿತೆಗಳು ಸಮ್ಮೇಳನ, ಉತ್ಸವ, ಕಮ್ಮಟಗಳಲ್ಲಿ ವಾಚಿಸಿದ ಕವಿತೆಗಳ ಜೊತೆಗೆ ಆಯ್ದ 27 ಕವಿತೆಗಳನ್ನು ಸಂಕಲಿಸಲಾಗಿದೆ ಎಂದು ಹೇಳಿದ್ದಾರೆ. ಇಲ್ಲಿಯ ಕವಿತೆಗಳು ವಸ್ತು ವೈವಿಧ್ಯತೆ, ನಿರೂಪಣಾ ಶೈಲಿ, ಸಾಮಾಜಿಕ ಹೊಣೆಗಾರಿಕೆ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಓದುಗರ ಗಮನ ಸೆಳೆಯುತ್ತವೆ.

About the Author

ರಮೇಶ ಎಸ್.ಕತ್ತಿ
(28 August 1978)

ಡಾ. ರಮೇಶ ಎಸ್. ಕತ್ತಿ ಅವರು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕಡಣಿ ಗ್ರಾಮದವರು. ಅಪ್ಪ: ಸಿದ್ದಣ್ಣ ಅವ್ವ:  ಮಹಾದೇವಿ. (ಜನನ: 28.08.1978 ). ಕಡಣಿಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದರು. ಸಿಂದಗಿಯಲ್ಲಿ ಬಿ.ಎ. ಪದವಿ, ಮಹಾರಾಷ್ಟ್ರದ ಕೊಲ್ಹಾಪುರದ ಶಿವಾಜಿ ವಿ.ವಿ.ಯಿಂದ ಎಂ.ಎ, ಹಾಗೂ ವಿಜಯಪುರ ಜಿಲ್ಲೆಯ ಇಂಡಿಯಲ್ಲಿ ಬಿ.ಇಡಿ, ಪದವೀಧರರು. ಸಿಂದಗಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರು. ಹವ್ಯಾಸಿ ಪತ್ರಕರ್ತರು. ಅವಿಭಜಿತ ಸಿಂದಗಿ ತಾಲೂಕಿನ ಆಲಮೇಲದಲ್ಲಿ (ಈಗ ತಾಲೂಕು ಕೇಂದ್ರ) ವಾಸವಾಗಿದ್ದು, ‘ವಿಜಯಪುರ ಜಿಲ್ಲೆಯ ಸಣ್ಣ ಕತೆಗಳು’ ವಿಷಯವಾಗಿ ಗುಲಬರ್ಗಾ ವಿ.ವಿ. ಯಲ್ಲಿ ಸಲ್ಲಿಸಿದ ಮಹಾ ಪ್ರಬಂಧಕ್ಕೆ ಪಿಎಚ್ ಡಿ ದೊರೆತಿದೆ.   ಕೃತಿಗಳು : ಕಾಮಸ್ವರ್ಗದ ಹಾದಿ ಹಿಡಿದು, ಏನನ್ನೂ ಹೇಳುವುದಿಲ್ಲ (ಕವನ ಸಂಕಲನಗಳು),, ...

READ MORE

Related Books